ಹೊಸ ನೋಟಿನ 11 ಭದ್ರತಾ ವೈಶಿಷ್ಟ್ಯಗಳನ್ನು ಕಾಪಿ ಹೊಡೆದ ಖದೀಮರು
ನೆರೆಯ ಬಾಂಗ್ಲಾದೇಶದಲ್ಲಿ ತಯಾರಾಗುತ್ತಿರುವ ಭಾರತೀಯ ಕರೆನ್ಸಿಯ ಖೋಟಾ ನೋಟುಗಳು ಭಾರತ-ಬಾಂಗ್ಲಾ ಗಡಿ ಭಾಗದಿಂದ ಭಾರತವನ್ನು ಪ್ರವೇಶಿಸುತ್ತಿವೆ.
ನವದೆಹಲಿ, ಫೆಬ್ರವರಿ 13: ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಬಿಡುಗಡೆಗೊಂಡಿರುವ 2000 ರು. ಮುಖಬೆಲೆಯ ನೋಟುಗಳಲ್ಲಿರುವ 17 ಭದ್ರತಾ ವೈಶಿಷ್ಟ್ಯಗಳಲ್ಲಿ 11 ವೈಶಿಷ್ಟ್ಯಗಳನ್ನು ಖೋಟಾ ನೋಟು ತಯಾರಕರು ಕಾಪಿ ಹೊಡೆದಿದ್ದಾರೆಂದು ಮೂಲಗಳು ತಿಳಿಸಿವೆ.
ಫೆಬ್ರವರಿ 1ರಂದು ಭಾರತ, ಬಾಂಗ್ಲಾದೇಶದ ಗಡಿಯಲ್ಲಿ ಭಾರತೀಯ ಕರೆನ್ಸಿ 2000 ರು. ಮುಖಬೆಲೆಯ ನೋಟುಗಳು ದೇಶದ ಒಳನುಸುಳುತ್ತಿವೆ. ಹಾಗಾಗಿ, ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಯೋಧರು ಹಗಲು ರಾತ್ರಿ ಪಹರೆ ಕಾಯುತ್ತಾ ಬಾಂಗ್ಲಾದೇಶದಿಂದ ರವಾನೆಯಾಗುತ್ತಿರುವ ಖೋಟಾ ನೋಟುಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.[ಖೋಟೋ ನೋಟು ಪತ್ತೆಗಾಗಿ ಬಿಎಸ್ಎಫ್ ಯೋಧರಿಗೆ ತರಬೇತಿ]

ಹೀಗೆ, ಬಾಂಗ್ಲಾ ಗಡಿಯಲ್ಲಿರುವ ಮುರ್ಷಿದಾಬಾದ್ ನಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಭಾರತೀಯ ಯೋಧರು ಫೆ. 8ರಂದು ಅಜೀವುರ್ ರಹಮಾನ್ ಎಂಬ 26 ವರ್ಷದ ಯುವಕನನ್ನು ಬಂಧಿಸಿದ್ದರು. ಈತ ಪಶ್ಚಿಮ ಬಂಗಾಳದ ಮಾಲ್ಡಾದವನೆಂದು ಹೇಳಲಾಗಿದೆ. ಬಂಧನದ ವೇಳೆ, ಈತನ ಬಳಿ 40 ಹೊಸ 2000 ರು. ಖೋಟಾ ನೋಟುಗಳಿದ್ದವು. ಈತ ಕೈಗೆ ಈ ನೋಟುಗಳು ಬಾಂಗ್ಲಾದೇಶದಿಂದ ಬಂದಿವೆ ಎನ್ನಲಾಗಿದೆ.
ವಶಪಡಿಸಿಕೊಂಡಿರುವ ನೋಟುಗಳನ್ನು ತಪಾಸಣೆಗೊಳಪಡಿಸಲಾಗಿತ್ತು. ತಜ್ಞರ ಈ ಪರೀಕ್ಷೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಹೊಸ ನೋಟುಗಳಲ್ಲಿರುವ 17 ಭದ್ರತಾ ಅಂಶಗಳಲ್ಲಿ 11 ಅಂಶಗಳನ್ನು ನಕಲು ಮಾಡುವುದರಲ್ಲಿ ಖೋಟಾ ನೋಟು ತಯಾರಕರು ಯಶಸ್ವಿಯಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ರಿಸರ್ವ್ ಬ್ಯಾಂಕ್ ನ ಹೊಸ ಕರೆನ್ಸಿಯ ಪಾರದರ್ಶಕ ಸ್ಥಳ, ವಾಟರ್ ಮಾರ್ಕ್, ಅಶೋಕ ಸ್ತಂಭ, ರಾಷ್ಟ್ರ ಚಿಹ್ನೆ, ರು. 2000 ಎಂಬ ಅಕ್ಷರ, ರಿಸರ್ವ್ ಬ್ಯಾಂಕ್ ಗವರ್ನರ್ ಅವರ ಖಾತ್ರಿ ಸಂದೇಶ ಹಾಗೂ ಅವರ ಸಹಿ, ದೇವನಾಗರಿ ಲಿಪಿಯಲ್ಲಿರುವ ನೋಟಿನ ಸಂಖ್ಯೆ, ಚಂದ್ರಯಾನದ ಚಿತ್ರ, ಸ್ವಚ್ಛ ಭಾರತ ಲೋಗೋ, ಭಾರತೀಯ ಭಾಷೆಗಳ ಪ್ಯಾನಲ್, ನೋಟು ಮುದ್ರಿತಗೊಂಡಿರುವ ವರ್ಷ - ಇವೆಲ್ಲವುಗಳನ್ನು ನಕಲು ಮಾಡಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
2000 ರು. ನಕಲು ಮಾಡಿರುವ ಹಾಗೆ, ತೀರಾ ಇತ್ತೀಚೆಗೆ ಬಿಡುಗಡೆಗೊಂಡಿರುವ 500 ರು. ನೋಟುಗಳನ್ನೂ ಈಗಾಗಲೇ ನಕಲು ಮಾಡಿರಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications