ಹೊಸ ನೋಟಿನ 11 ಭದ್ರತಾ ವೈಶಿಷ್ಟ್ಯಗಳನ್ನು ಕಾಪಿ ಹೊಡೆದ ಖದೀಮರು
ನೆರೆಯ ಬಾಂಗ್ಲಾದೇಶದಲ್ಲಿ ತಯಾರಾಗುತ್ತಿರುವ ಭಾರತೀಯ ಕರೆನ್ಸಿಯ ಖೋಟಾ ನೋಟುಗಳು ಭಾರತ-ಬಾಂಗ್ಲಾ ಗಡಿ ಭಾಗದಿಂದ ಭಾರತವನ್ನು ಪ್ರವೇಶಿಸುತ್ತಿವೆ.
ನವದೆಹಲಿ, ಫೆಬ್ರವರಿ 13: ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಬಿಡುಗಡೆಗೊಂಡಿರುವ 2000 ರು. ಮುಖಬೆಲೆಯ ನೋಟುಗಳಲ್ಲಿರುವ 17 ಭದ್ರತಾ ವೈಶಿಷ್ಟ್ಯಗಳಲ್ಲಿ 11 ವೈಶಿಷ್ಟ್ಯಗಳನ್ನು ಖೋಟಾ ನೋಟು ತಯಾರಕರು ಕಾಪಿ ಹೊಡೆದಿದ್ದಾರೆಂದು ಮೂಲಗಳು ತಿಳಿಸಿವೆ.
ಫೆಬ್ರವರಿ 1ರಂದು ಭಾರತ, ಬಾಂಗ್ಲಾದೇಶದ ಗಡಿಯಲ್ಲಿ ಭಾರತೀಯ ಕರೆನ್ಸಿ 2000 ರು. ಮುಖಬೆಲೆಯ ನೋಟುಗಳು ದೇಶದ ಒಳನುಸುಳುತ್ತಿವೆ. ಹಾಗಾಗಿ, ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಯೋಧರು ಹಗಲು ರಾತ್ರಿ ಪಹರೆ ಕಾಯುತ್ತಾ ಬಾಂಗ್ಲಾದೇಶದಿಂದ ರವಾನೆಯಾಗುತ್ತಿರುವ ಖೋಟಾ ನೋಟುಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.[ಖೋಟೋ ನೋಟು ಪತ್ತೆಗಾಗಿ ಬಿಎಸ್ಎಫ್ ಯೋಧರಿಗೆ ತರಬೇತಿ]

ಹೀಗೆ, ಬಾಂಗ್ಲಾ ಗಡಿಯಲ್ಲಿರುವ ಮುರ್ಷಿದಾಬಾದ್ ನಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಭಾರತೀಯ ಯೋಧರು ಫೆ. 8ರಂದು ಅಜೀವುರ್ ರಹಮಾನ್ ಎಂಬ 26 ವರ್ಷದ ಯುವಕನನ್ನು ಬಂಧಿಸಿದ್ದರು. ಈತ ಪಶ್ಚಿಮ ಬಂಗಾಳದ ಮಾಲ್ಡಾದವನೆಂದು ಹೇಳಲಾಗಿದೆ. ಬಂಧನದ ವೇಳೆ, ಈತನ ಬಳಿ 40 ಹೊಸ 2000 ರು. ಖೋಟಾ ನೋಟುಗಳಿದ್ದವು. ಈತ ಕೈಗೆ ಈ ನೋಟುಗಳು ಬಾಂಗ್ಲಾದೇಶದಿಂದ ಬಂದಿವೆ ಎನ್ನಲಾಗಿದೆ.
ವಶಪಡಿಸಿಕೊಂಡಿರುವ ನೋಟುಗಳನ್ನು ತಪಾಸಣೆಗೊಳಪಡಿಸಲಾಗಿತ್ತು. ತಜ್ಞರ ಈ ಪರೀಕ್ಷೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಹೊಸ ನೋಟುಗಳಲ್ಲಿರುವ 17 ಭದ್ರತಾ ಅಂಶಗಳಲ್ಲಿ 11 ಅಂಶಗಳನ್ನು ನಕಲು ಮಾಡುವುದರಲ್ಲಿ ಖೋಟಾ ನೋಟು ತಯಾರಕರು ಯಶಸ್ವಿಯಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ರಿಸರ್ವ್ ಬ್ಯಾಂಕ್ ನ ಹೊಸ ಕರೆನ್ಸಿಯ ಪಾರದರ್ಶಕ ಸ್ಥಳ, ವಾಟರ್ ಮಾರ್ಕ್, ಅಶೋಕ ಸ್ತಂಭ, ರಾಷ್ಟ್ರ ಚಿಹ್ನೆ, ರು. 2000 ಎಂಬ ಅಕ್ಷರ, ರಿಸರ್ವ್ ಬ್ಯಾಂಕ್ ಗವರ್ನರ್ ಅವರ ಖಾತ್ರಿ ಸಂದೇಶ ಹಾಗೂ ಅವರ ಸಹಿ, ದೇವನಾಗರಿ ಲಿಪಿಯಲ್ಲಿರುವ ನೋಟಿನ ಸಂಖ್ಯೆ, ಚಂದ್ರಯಾನದ ಚಿತ್ರ, ಸ್ವಚ್ಛ ಭಾರತ ಲೋಗೋ, ಭಾರತೀಯ ಭಾಷೆಗಳ ಪ್ಯಾನಲ್, ನೋಟು ಮುದ್ರಿತಗೊಂಡಿರುವ ವರ್ಷ - ಇವೆಲ್ಲವುಗಳನ್ನು ನಕಲು ಮಾಡಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
2000 ರು. ನಕಲು ಮಾಡಿರುವ ಹಾಗೆ, ತೀರಾ ಇತ್ತೀಚೆಗೆ ಬಿಡುಗಡೆಗೊಂಡಿರುವ 500 ರು. ನೋಟುಗಳನ್ನೂ ಈಗಾಗಲೇ ನಕಲು ಮಾಡಿರಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications