ರೈಲು ಅಪಘಾತವಾದ 13 ವರ್ಷಗಳ ಬಳಿಕವೂ ಮಗಳಿಗಾಗಿ ತಂದೆ ಹುಡುಕಾಟ!
ನವದೆಹಲಿ, ಜೂನ್ 13: 13 ವರ್ಷಗಳ ಹಿಂದೆ ರೈಲು ಅಪಘಾತದಲ್ಲಿ ನಾಪತ್ತೆಯಾಗಿದ್ದ ತನ್ನ ಮಗಳನ್ನು ಭಾರತದಲ್ಲಿ ವ್ಯಕ್ತಿಯೊಬ್ಬರು ಹುಡುಕುತ್ತಲೇ ಇದ್ದಾರೆ. ರಾಜೇಶ್ ಕುಮಾರ್ ಭಟ್ರಾ ಎಂಬುವವರು ಕುಟುಂಬ ಪ್ರಯಾಣಿಸುತ್ತಿದ್ದ ಜ್ಞಾನೇಶ್ವರಿ ಎಕ್ಸ್ಪ್ರೆಸ್ ಮೇ 2010 ರಲ್ಲಿ ಹಳಿತಪ್ಪಿ 148 ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿತ್ತು.
ಘಟನೆಯಲ್ಲಿ ಭಟ್ರಾ ಅವರ ಪುತ್ರಿ ಸೇರಿದಂತೆ 17 ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿರಲಿಲ್ಲ. ಜೂನ್ 2010 ರಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು, ಆದರೆ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ತಮಗೆ ನ್ಯಾಯ ಒದಗಿಸಿ ಮತ್ತು ಗಮನ ಹರಿಸುವಂತೆ ಪ್ರಧಾನಿಗೆ ಪತ್ರವನ್ನು ಕಳುಹಿಸಿದ್ದಾರೆ.

ಈ ಮೂವರೂ ಜ್ಞಾನೇಶ್ವರಿ ಎಕ್ಸ್ಪ್ರೆಸ್ನಲ್ಲಿ ಎಸ್ 3 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಇದು ಮೇ 28, 2010 ರಂದು ಅಪಘಾತಕ್ಕೀಡಾಯಿತು. ಬೇಸಿಗೆ ರಜೆ ಇದ್ದರಿಂದ ಮಕ್ಕಳು ತಮ್ಮ ತಾಯಿಯೊಂದಿಗೆ ಅಜ್ಜನ ಮನೆಯಲ್ಲಿ ರಜೆ ಕಳೆಯಲು ಮಹಾರಾಷ್ಟ್ರದ ಭಿವಂಡಿಗೆ ಪ್ರಯಾಣಿಸುತ್ತಿದ್ದರು.
57 ವರ್ಷ ವಯಸ್ಸಿನ ರಾಜೇಶ್ ಕುಮಾರ್ ಭಟ್ರಾ ಅವರು ಹೌರಾ ಜಿಲ್ಲೆಯ ಲಿಲುವಾದಲ್ಲಿರುವ ಅಗ್ರಸೇನ್ ಬಾಲಿಕಾ ಶಿಕ್ಷಾ ಸದನ್ ಇಲ್ಲವೇ ಬಾಲಕಿಯರ ಶಾಲೆ ಎಂಸಿ ಕೇಜ್ರಿವಾಲ್ ವಿದ್ಯಾಪೀಠವನ್ನು ದಾಟಿದಾಗಲೆಲ್ಲಾ ನಾಪತ್ತೆಯಾದ ಅವರ ಮಗ ಮತ್ತು ಮಗಳನ್ನು ನೆನಪಿಸಿಕೊಳ್ಳುತ್ತಾರೆ.
ಘಟನೆಯಾದಾಗ ಅವರ 12 ವರ್ಷದ ಮಗ ಸೌರವ್ 8ನೇ ತರಗತಿ ವಿದ್ಯಾರ್ಥಿಯಾಗಿದ್ದರೆ ಅವರ ಮಗಳು 17 ವರ್ಷದ ಸ್ನೇಹಾ 12ನೇ ತರಗತಿಯಲ್ಲಿ ಓದುತ್ತಿದ್ದಳು. 13 ವರ್ಷಗಳ ಹಿಂದೆ ಹೌರಾ-ನಿವಾಸಿಯಾದ ರಾಜೇಶ್ ಕುಮಾರ್ ಭಟ್ರಾ ಪತ್ನಿ ಸಿಂಧು ಹಾಗೂ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದರು. ಅವವರು ತನ್ನ ಮಗ ಮತ್ತು ಹೆಂಡತಿಯನ್ನು ಪತ್ತೆಹಚ್ಚಿದರೂ ಇಲ್ಲಿಯವರೆಗೆ ತನ್ನ ಮಗಳನ್ನು ಕಂಡುಹಿಡಿಯಲಾಗಿಲ್ಲ. ಆದರೆ ಭಟ್ರಾ ತನ್ನ ಮಗಳನ್ನು ಬಿಟ್ಟುಕೊಡಲು ಬಯಸುವುದಿಲ್ಲ ಎಂದು ಹುಡುಕುತ್ತಲೇ ಇದ್ದಾರೆ.
ನಾನು ಅವರನ್ನು ರಾತ್ರಿಯಲ್ಲಿ ನೋಡಿದೆ. ಮರುದಿನ ಮುಂಜಾನೆ, ಪಶ್ಚಿಮ ಮಿಡ್ನಾಪುರದ ಸ್ಥಳೀಯ ನಿವಾಸಿಯೊಬ್ಬರಿಂದ ನನಗೆ ಕರೆ ಬಂತು. ರೈಲು ಅಪಘಾತಕ್ಕೀಡಾಗಿದ್ದು, ಮಗ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಿದರು. ಅಲ್ಲಿಯವರೆಗೆ ನನ್ನ ಹೆಂಡತಿ ಮತ್ತು ಮಗಳ ಯಾವುದೇ ಗುರುತು ಪತ್ತೆಯಾಗಿರಲಿಲ್ಲ ಎಂದು ಭಟ್ರಾ ಕೋಲ್ಕತ್ತಾದ ತಮ್ಮ ಕಚೇರಿಯಲ್ಲಿ ಕುಳಿತು ಎಚ್ಟಿ ತಮ್ಮ ಅಳಲನ್ನು ತೋಡಿಕೊಂಡರು.
ಭಟ್ರಾ ಅವರು ತಮ್ಮ ಮಗನನ್ನು ಕೋಲ್ಕತ್ತಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಅವರು ಮೂರು ದಿನಗಳ ನಂತರ ಸಾವನ್ನಪ್ಪಿದನು. ಆದರೆ ಪತ್ನಿ ಮತ್ತು ಮಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. 7 ತಿಂಗಳ ನಂತರ ಡಿಸೆಂಬರ್ 24 ರಂದು ಡಿಎನ್ಎ ತನ್ನ ಸಹೋದರನೊಂದಿಗೆ ಹೊಂದಾಣಿಕೆಯಾದ ನಂತರ ಅವರ ಪತ್ನಿಯ ದೇಹವನ್ನು ಗುರುತಿಸಬಹುದು ಎಂದು ಮಾಹಿತಿ ನೀಡಿದನು.
ಶರೀರ ಸಂಖ್ಯೆ 51 ಅನ್ನು ಇಂದು ದೇವಿ ಭಟ್ರಾ ಎಂದು ಗುರುತಿಸಲಾಗಿದೆ ಎಂದು ಲಿಲುವಾ ಪೊಲೀಸ್ ಠಾಣೆಯಿಂದ ನನಗೆ ಕರೆ ಬಂದಿತು. ಶವವನ್ನು ಕೋಲ್ಕತ್ತಾದ ಶವಾಗಾರದಿಂದ ಸಂಗ್ರಹಿಸಿಕೊಳ್ಳಲು ನನಗೆ ತಿಳಿಸಲಾಯಿತು. ಆಕೆಯ ಅಂತ್ಯಕ್ರಿಯೆಯನ್ನು ಡಿಸೆಂಬರ್ 26 ರಂದು ನಡೆಸಲಾಯಿತು. ಆದರೆ ಇಲ್ಲಿಯವರೆಗೆ ನನ್ನ ಮಗಳ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.
ರೈಲು ಹಳಿತಪ್ಪಿ ಮುಂಬೈಗೆ ತೆರಳುತ್ತಿದ್ದ ಜ್ಞಾನೇಶ್ವರಿ ಎಕ್ಸ್ಪ್ರೆಸ್ನ ಕನಿಷ್ಠ 148 ಪ್ರಯಾಣಿಕರು ಸಾವನ್ನಪ್ಪಿದ್ದರು. ಎದುರು ದಿಕ್ಕಿನಿಂದ ಬರುತ್ತಿದ್ದ ಗೂಡ್ಸ್ ರೈಲು ಕೆಲವೇ ನಿಮಿಷಗಳಲ್ಲಿ ಬೋಗಿಗಳ ಮೂಲಕ ನುಗ್ಗಿದ ಪರಿಣಾಮ 200ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡರು. ಘಟನೆಯಲ್ಲಿ ಸ್ನೇಹಾ ಸೇರಿದಂತೆ 17 ಪ್ರಯಾಣಿಕರ ಮೃತದೇಹಗಳನ್ನು ಇಂದಿಗೂ ಗುರುತಿಸಲು ಸಾಧ್ಯವಾಗಿಲ್ಲ.
ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು ತಮ್ಮ ಮರಣ ಪ್ರಮಾಣಪತ್ರಕ್ಕಾಗಿ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಲೇ ಇದ್ದಾರೆ. ಇವರಲ್ಲಿ ಅನೇಕರು ರಾಜೇಶ್ ಕುಮಾರ್ ಭಟ್ರಾ ತರಹದ ಸ್ಥಿತಿಯನ್ನೇ ಹೋಲುವವರು. ನನ್ನ ತಂದೆ ಪ್ರಸೇನ್ಜಿತ್ ಅಟ್ಟಾ ಅವರನ್ನು ಕಳೆದುಕೊಂಡಾಗ ನನಗೆ ಐದು ವರ್ಷ. ಯಾವುದೋ ಕೆಲಸದ ನಿಮಿತ್ತ ಮಹಾರಾಷ್ಟ್ರದ ಭುಸ್ವಾಲ್ಗೆ ಹೋಗುತ್ತಿರುವುದಾಗಿ ತಾಯಿ ಹೇಳಿದ್ದರು. ಕುಟುಂಬದ ಏಕೈಕ ಸಂಪಾದನೆ ಸದಸ್ಯರಾಗಿದ್ದರು. ಅವರ ದೇಹವನ್ನು ಗುರುತಿಸಲು ಸಾಧ್ಯವಾಗದ ಕಾರಣ ನನ್ನ ತಾಯಿ ಇಷ್ಟು ವರ್ಷ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಪ್ರಕರಣಕ್ಕಾಗಿ ಕೆಲವೊಮ್ಮೆ 150 ಕಿ.ಮೀ ದೂರದ ಜಾರ್ಗ್ರಾಮ್ ನ್ಯಾಯಾಲಯಕ್ಕೆ ಹೋಗಬೇಕಾಗಿತ್ತು. ಈಗ ನಾನು ಅದರ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಸಂತ್ರಸ್ತೆಯ ಮಗಳು ಪೌಲಮಿ ಅತ್ತಾ ಹೇಳಿದರು.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications