ಮನೆ ಕಟ್ಟಲು, ಖರೀದಿಸಲು ಕಾರ್ಮಿಕ ಭವಿಷ್ಯ ನಿಧಿ ಯೋಜನೆ
ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟದಿಂದ ಗೃಹ ಖರೀದಿಗೆ ಸಂಬಂಧಿಸಿದ ಹಾಗೆ ಮಹತ್ವದ ಯೋಜನೆಯೊಂದು ಮಾರ್ಚ್ ನಲ್ಲಿ ಘೋಷಣೆಯಾಗಲಿದೆ. ಇದರಿಂದ ನಾಲ್ಕು ಕೋಟಿ ಮಂದಿಗೆ ಅನುಕೂಲವಾಗಲಿದೆ. ಅದೇನು ಅನುಕೂಲ ಅಂತ ತಿಳಿಯಲು ವರದಿ ಓದಿ..
ನವದೆಹಲಿ, ಫೆಬ್ರವರಿ 24: ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟದ(ಇಪಿಎಫ್ ಒ) ಸದಸ್ಯರಿಗೆ ತುಂಬ ನೆಮ್ಮದಿ ಹಾಗೂ ಸಂತಸ ಕೊಡುವ ಸುದ್ದಿ ಇದು. ಇಪಿಎಫ್ ಒ ಗೃಹ ಯೋಜನೆ ಜಾರಿಗೆ ತರಲಿದೆ. ಈ ಯೋಜನೆ ಜಾರಿಗೆ ಬಂದರೆ ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟದ ನಾಲ್ಕು ಕೋಟಿ ಸದಸ್ಯರಿಗೆ ಅನುಕೂಲವಾಗಲಿದೆ.
ಅದೇನು ಅಂಥ ಅನುಕೂಲ ಅಂತೀರಾ? ಮನೆ ಖರೀದಿಗೆ ಆರಂಭದ ಮೊತ್ತ ಮತ್ತು ತಿಂಗಳು ಕಂತನ್ನು ಇಪಿಎಫ್ ಒ ಖಾತೆಯಿಂದ ಪಾವತಿಸಬಹುದಾಗಿದೆ. ಐದು ರಾಜ್ಯಗಳ ಚುನಾವಣೆ ಮುಗಿಯುವ ಮಾರ್ಚ್ 8ರ ನಂತರ ಈ ಯೋಜನೆಯನ್ನು ಯಾವಾಗ ಬೇಕಾದರೂ ಘೋಷಿಸಬಹುದು ಎಂದು ಮೂಲಗಳು ತಿಳಿಸಿವೆ.[ಎಸ್ ಬಿಐ, ಐಸಿಐಸಿಐ ಬ್ಯಾಂಕ್ ನಿಂದ ಗೃಹಸಾಲದ ಸಕತ್ ಆಫರ್]

ಸದಸ್ಯರು ಇನ್ನೂ ಸೇವೆಯಲ್ಲಿ ಇರುವಾಗಲೇ ಮನೆ ಖರೀದಿಸಲು ಇಪಿಎಫ್ ಒ ಸಹಾಯಕವಾಗಿ ಕೆಲಸ ಮಾಡಲಿದೆ. ಇಪಿಎಫ್ ಒ ಸದಸ್ಯರು ಅಥವಾ ಸಂಸ್ಥೆಯ ಮಾಲೀಕರು ಒಂದು ಹೌಸಿಂಗ್ ಸೊಸೈಟಿ ಮಾಡಿಕೊಳ್ಳಬೇಕು. ಬ್ಯಾಂಕ್ ಮತ್ತು ಕಟ್ಟಡ ನಿರ್ಮಾಣ ಮಾಡುವವರ ಜೊತೆಗೆ ಅಥವಾ ಮನೆ ಮಾರಾಟಗಾರರ ಬಳಿ ಸದಸ್ಯರು ಒಪ್ಪಂದ ಮಾಡಿಕೊಳ್ಳಬೇಕು. ಆ ಮೂಲಕ ಮನೆ ಖರೀದಿಸಬಹುದು.
ಅದರೆ, ಈ ಯೋಜನೆಯ ಲಾಭ ಪಡೆಯಲು ಹೌಸಿಂಗ್ ಸೊಸೈಟಿಯಲ್ಲಿ ಕನಿಷ್ಠ ಇಪ್ಪತ್ತು ಸದಸ್ಯರಿರಬೇಕು. ಇನ್ನೊಂದು ವಿಚಾರ ಏನೆಂದರೆ, ಕೇಂದ್ರ ಹಾಗೂ ರಾಜ್ಯ ಸರಕಾರದ ಗೃಹ ಯೋಜನೆಗಳನ್ನು ಕೂಡ ಹೊಸ ಯೋಜನೆ ಜತೆಗೆ ಸೇರಿಸಿಕೊಳ್ಳಬಹುದು. ಎಲ್ಲರಿಗೂ ಮನೆ ಇರಬೇಕು ಎಂಬ ಕಾರಣಕ್ಕೆ ಈ ಯೋಜನೆ ತರಲಾಗುತ್ತಿದೆ.[ಮೋದಿ ಆಶಯದಂತೆ ಟಾಟಾದಿಂದ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ]
ಸದಸ್ಯರ ಕಂತು ಹಾಗೂ ಸಾಲ ಮರುಪಾವತಿಸುವ ಸಾಮರ್ಥ್ಯದ ಬಗ್ಗೆ ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟವು ಪ್ರಮಾಣಪತ್ರ ವಿತರಿಸುತ್ತದೆ. ಮುಂದೆ ಯಾವುದಾದರೂ ಕಾನೂನು ಸಮಸ್ಯೆ ಎದುರಾದಲ್ಲಿ ಹೊಣೆಯಾಗುವುದಿಲ್ಲ. ಹೌಸಿಂಗ್ ಸೊಸೈಟಿಯವರೇ ಬ್ಯಾಂಕರ್, ಕಟ್ಟಡ ನಿರ್ಮಾತೃಗಳು ಅಥವಾ ಮಾರಾಟಗಾರರ ಜೊತೆಗಿನ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬೇಕು.
ವ್ಯಾಜ್ಯ ಏರ್ಪಟ್ಟ ಸಂದರ್ಭದಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರ ಮನವಿ ಮೇರೆಗೆ ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟವು ಗೃಹ ಖರೀದಿಯ ಆರಂಭಿಕ ಮೊತ್ತವನ್ನು ಅಥವಾ ಸಾಲದ ಮೇಲಿನ ತಿಂಗಳ ಕಂತನ್ನು ತಡೆಹಿಡಿಯಬಹುದಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications