Get Updates
Get notified of breaking news, exclusive insights, and must-see stories!

UP Encounter: ಪೋಲಿಸ್‌ ಗುಂಡಿಗೆ ಹಾರ್ಡ್‌ಕೋರ್‌ ಕ್ರಿಮಿನಲ್‌ ಆದಿತ್ಯ ರಾಣಾ ಬಲಿ- ಯೋಗಿ ಸರ್ಕಾರಕ್ಕೆ ಮೆಚ್ಚುಗೆ

ಲಕ್ನೋ ಏಪ್ರಿಲ್ 13: ಉತ್ತರ ಪ್ರದೇಶದ ಸಿಯೋಹರಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಾ ನಾಂಗ್ಲಾ ನಿವಾಸಿ ಕ್ರಿಮಿನಲ್ ಆದಿತ್ಯ ರಾಣಾ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ.

ಬುಧನ್‌ಪುರ ಪೊಲೀಸ್‌ ಪೋಸ್ಟ್‌ನ ಅರಣ್ಯದಲ್ಲಿ ಆದಿತ್ಯ ರಾಣಾ ಕಾಣಿಸಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣ ಅರಣ್ಯಕ್ಕೆ ಪೊಲೀಸರು ಮುತ್ತಿಗೆ ಹಾಕಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳದಂತೆ ಸೂಚಿಸಿದರೂ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರಿಂದ ಗುಂಡಿನ ದಾಳಿ ನಡೆದಿದೆ. ದಾಳಿ ವೇಳೆ ಆರೋಪಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಕ್ರಿಮಿನಲ್ ಆದಿತ್ಯ ರಾಣಾ ಸಾವನ್ನಪ್ಪಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

Encounter: First criminal killed in Yogi adityanath government: Big relief for 50 leaders

ಈ ಘರ್ಷಣೆಯಲ್ಲಿ ಐವರು ಪೊಲೀಸರೂ ಗಾಯಗೊಂಡಿದ್ದಾರೆ. ಆದಿತ್ಯ ಆಗಸ್ಟ್ 23, 2022 ರಂದು ಬಿಜ್ನೋರ್‌ನಿಂದ ಲಕ್ನೋ ಜೈಲಿಗೆ ಕರೆದೊಯ್ಯುವಾಗ ಶಹಜಹಾನ್‌ಪುರದಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದನು. ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆದಿತ್ಯ ರಾಣಾ ಬಗ್ಗೆ ಸುಳಿವು ನೀಡಿದವರಿಗೆ ಎರಡೂವರೆ ಲಕ್ಷ ಬಹುಮಾನವನ್ನು ಘೋಷಣೆ ಮಾಡಲಾಗಿತ್ತು.

ಮೊರಾದಾಬಾದ್‌ನ 50ಕ್ಕೂ ಹೆಚ್ಚು ನಾಯಕರು, ಈತನ ವಿರುದ್ಧದ ಸಾಕ್ಷಿಗಳನ್ನು ಹತ್ಯೆ ಮಾಡುವ ಸಂಚಿನಲ್ಲಿ ಕ್ರಿಮಿನಲ್ ಹೊಂಚು ಹಾಕಿದ್ದನು. ಇವರೆಲ್ಲರನ್ನೂ ಕೊಂದು ಜಿಲ್ಲೆಯಲ್ಲಿ ತನ್ನ ಗ್ಯಾಂಗ್ ಸ್ಥಾಪಿಸಿ ತನ್ನ ಆಡಳಿತವನ್ನು ಸ್ಥಾಪಿಸಲು ಬಯಸಿದ್ದ. ಅಲ್ಲದೆ, ಮಾಜಿ ಬ್ಲಾಕ್ ಅಧ್ಯಕ್ಷರ ಹತ್ಯೆಯ ಸೇಡು ತೀರಿಸಿಕೊಳ್ಳಲು ಆತ ಬೌಂಟಿ ಕಿಡಿಗೇಡಿ ಸುಮಿತ್ ಅವರನ್ನು ಕೊಲ್ಲಲು ಬಯಸಿದ್ದರು.

ಈ ಕಿರಾತಕ ಬಿಜ್ನೋರ್-ಮೊರಾದಾಬಾದ್‌ನಲ್ಲಿ ಅನೇಕ ಪ್ರಮುಖ ವ್ಯಕ್ತಿಗಳಿಂದ ಪ್ರೋತ್ಸಾಹಿಸಲ್ಪಟ್ಟಿದ್ದ. ತನ್ನ ಭಯವನ್ನು ಹರಡಲು ಜಿಲ್ಲೆಯಲ್ಲಿ ನಿರಂತರವಾಗಿ ಪ್ರತಿಭಟನೆಗಳನ್ನು ಮಾಡಿಸಿದ್ದನು. ವಕೀಲರೊಬ್ಬರಿಗೂ ಬೆದರಿಕೆ ಕೂಡ ಹಾಕಲಾಗಿತ್ತು. ಆದರೆ ಈತನ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತಮ್ಮ ಕಾರ್ಯ ಆರಂಭಿಸಿ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

Encounter: First criminal killed in Yogi adityanath government: Big relief for 50 leaders

ಆದಿತ್ಯ ರಾಣಾ ಸಾವಿನ ನಂತರ, ಅನೇಕ ಜನರ ಪೊಲೀಸ್ ರಕ್ಷಣೆಯನ್ನು ತೆಗೆದುಹಾಕಲಾಯಿತು. ಕ್ರಿಮಿನಲ್ ಹತ್ಯೆಯ ಬಳಿಕ ಯೋಗಿ ಸರ್ಕಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇಲ್ಲಿಯವರೆಗೂ ನಡೆದ ಎನ್‌ಕೌಂಟರ್‌ಗಳಲ್ಲಿ ಯಾವುದೇ ದುಷ್ಕರ್ಮಿಗಳು ಸಾವನ್ನಪ್ಪಿಲ್ಲ. ಅರ್ಧದಷ್ಟು ಎನ್‌ಕೌಂಟರ್‌ ನಡೆದಿದೆ. ಹತ್ತು ವರ್ಷಗಳ ಹಿಂದೆ ಕಿರಾತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೆಟ್ರೋಲ್ ಪಂಪ್‌ನಲ್ಲಿ ದರೋಡೆ ಮಾಡಿ ಓಡಿ ಹೋಗಿದ್ದ ಮುಜಾಫರ್‌ನಗರದ ದುಷ್ಕರ್ಮಿ ಸಂದೀಪ್ ಎನ್‌ಕೌಂಟರ್‌ನಲ್ಲಿ ಹತನಾದ ನಂತರ ಇದೀಗ ಆದಿತ್ಯನ ಎನ್‌ಕೌಂಟರ್ ನಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+