ಎಬೋಲಾ ವೈರಾಣು ಭೀತಿ 'ಸೆಕ್ಸ್'ಗೂ ಕೊಕ್ಕೆ
ಕೋಲ್ಕತ್ತಾ, ಅ.18: ಭಾರತದಲ್ಲಿ ಎಬೋಲಾ ವೈರಾಣು ಶಂಕಿತರ ಬಗ್ಗೆ ದಿನದಿಂದ ದಿನಕ್ಕೆ ಸುದ್ದಿ ಬರುತ್ತಲೇ ಇದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಂತೂ ಎಬೋಲಾ ಭೀತಿ ಬೇಡ ಎಂದಿದ್ದಾರೆ. ಅದರೆ, ಕೋಲ್ಕತ್ತಾದ ಕುಖ್ಯಾತ ಕಾಮಟಿಪುರದಲ್ಲಿ ಎಬೋಲಾ ಭೀತಿ ಹೆಚ್ಚಾಗಿದ್ದು, ಆಫ್ರಿಕಾ ಮೂಲದ ಕಾಮಾರ್ಥಿಗಳಿಗೆ ನೋ ಸೆಕ್ಸ್ ಪ್ಲೀಸ್ ಎನ್ನುವ ಭಿತ್ತಿಫಲಕ ತೋರಿಸಲಾಗುತ್ತಿದೆ.
ಕೋಲ್ಕತ್ತಾದ ಅತಿದೊಡ್ಡ ರೆಡ್ ಲೈಟ್ ಪ್ರದೇಶವಾದ ಸೊನಾಗಾಚ್ಚಿಯಲ್ಲಿನ ವೇಶ್ಯೆಯರಿಗೆ ಎಬೋಲಾ ವೈರಾಣು ಬಗ್ಗೆ ಅರಿವು ಮೂಡಿಸಲು ಎನ್ ಜಿಒ ಯತ್ನಿಸುತ್ತಿದೆ. ಎಬೋಲಾ ರೋಗದ ಸೋಂಕು ಹರಡುವ ಬಗ್ಗೆ ತಿಳಿ ಹೇಳಿದ್ದು, ಅಫ್ರಿಕಾ ಮೂಲದ ಗ್ರಾಹಕರನ್ನು ಪುರಸ್ಕರಿಸಬೇಡಿ, ಕಾಮದಾಹ ತೀರಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ. [ಎಬೋಲಾ : 24/7 ಭಾರತ ಸಹಾಯವಾಣಿ]
ಸುಮಾರು 1,30,000 ಸೆಕ್ಸ್ ವರ್ಕರ್ಸ್ ಗಳಿಗೆ ದರ್ಬಾರ್ ಮಹಿಳಾ ಸಮನ್ವಯ ಸಮಿತಿ (ಡಿಎಂಎಸ್ ಸಿ) ಈ ರೀತಿ ಎಚ್ಚರಿಕೆ ನೀಡಿದೆ. ಆಫ್ರಿಕಾ ಮೂಲದ ಪುರುಷರ ಜೊತೆ ಮಲಗುವ ಮುನ್ನ ಯೋಚಿಸಿ. ಎಬೋಲಾ ವೈರಾಣು ಸೋಂಕು ತಗುಲಿದರೆ ನಿಮ್ಮ ಬದುಕು ನಾಶವಾಗುತ್ತದೆ ಎಂದು ತಿಳಿ ಹೇಳಲಾಗಿದೆ ಎಂದು ಡಿಎಂ ಎಸ್ ಸಿಯ ಸದಸ್ಯೆ ಮಹಾಶ್ವೇತಾ ಹೇಳಿದ್ದಾರೆ.

ಆಫ್ರಿಕಾ ಖಂಡದ ಗಿನಿಯಾ, ನೈಜೀರಿಯಾ, ಸಿಯಾರಾ ಲಿಯೋನ್ ಮುಂತಾದ ಕಡೆಗಳಲ್ಲಿ ಎರಡು ದಿನಗಳ ನಡುವಿನಲ್ಲೇ ಸುಮಾರು 56ಕ್ಕೂ ಜನರನ್ನು ಎಬೋಲಾ ಇದುವರೆವಿಗೂ ಬಲಿ ತೆಗೆದುಕೊಂಡಿದೆ. ಒಟ್ಟಾರೆ 1,975 ಪ್ರಕರಣಗಳು ದಾಖಲಾಗಿದ್ದು, 1,059 ಜನ ಸಾವನ್ನಪ್ಪಿದ್ದಾರೆ.
ಎಬೋಲಾ ವೈರಸ್ ಗಾಳಿ ಅಥವಾ ನೀರಿನ ಮೂಲಕ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ರೋಗ ಪೀಡಿತ ರಕ್ತ, ಜಿಹ್ವಾರಸ, ಮೂತ್ರ ಮುಂತಾದವುಗಳ ಸೋಕುವಿಕೆಯಿಂದ ಹರಡುತ್ತದೆ. ಮಲೇರಿಯಾ, ಕಾಲರ, ವೈರಲ್ ಫೀವರ್ ಮಾದರಿಯಲ್ಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ಗಂಟಲು ನೋವು, ಕೈಕಾಲು ನೋವು, ತಲೆನೋವಿನೊಂದಿಗೆ ಆರಂಭವಾಗಿ ಆಮಶಂಕೆ, ಕರಳು ಬೇನೆ, ಕಿಡ್ನಿ ವೈಫಲ್ಯ ಉಂಟಾಗಲಿದೆ. ಕೊನೆ ಕೊನೆಗೆ ರಕ್ತ ಸ್ರಾವ ಉಂಟಾಗಿ ರೋಗಿ ಸಾವನ್ನಪ್ಪುತ್ತಾನೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications