ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹರ್ಯಾಣದಲ್ಲಿ ಕಂಪಿಸಿದ ಭೂಮಿ, ಭಯಭೀತರಾದ ಜನ
ಚಂಡೀಗಢ, ಜುಲೈ 1: ಉತ್ತರ ಭಾರತದ ರಾಜ್ಯಗಳಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿದ್ದು, ಈ ಬಾರಿಯ ಸರದಿ ಹರ್ಯಾಣದ್ದಾಗಿದೆ.
ಹರ್ಯಾಣದಲ್ಲಿ ಇಂದು ಭೂಕಂಪನದ ಅನುಭವವಾಗಿದೆ. ಇದರಿಂದ ಭಯಭೀತಗೊಂಡ ಜನರು ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.0 ದಾಖಲಾಗಿದೆ.
ಭೂಗರ್ಭ ಇಲಾಖೆ ಪ್ರಕಾರ ಭೂಕಂಪದ ಕೇಂದ್ರ ಸೋನಿಪತ್ ನಲ್ಲಿ ದಾಖಲಾಗಿದೆ. ಮಧ್ಯಾಹ್ನ 3 ಗಂಟೆ 37 ನಿಮಿಷಕ್ಕೆ ಭೂಕಂಪ ಸಂಭವಿಸಿದೆ.
ಭೂಮಿ ಹರ್ಯಾಣದಲ್ಲಿ ಮಾತ್ರ ಕಂಪಿಸಿಲ್ಲ. ಭೂಕಂಪದ ಕೇಂದ್ರ ಬಿಂದು ಸೋನಿಪತ್ ನಲ್ಲಿ ಇದ್ದರೂ ಭೂಮಿ ಕಂಪಿಸಿದ ಅನುಭವ ದೆಹಲಿಯಲ್ಲೂ ಆಗಿದೆ. ರಾಷ್ಟ್ರ ರಾಜಧಾನಿ ಸುತ್ತ ಮುತ್ತಲಿನ ಪ್ರದೇಶಗಳಲ್ಲೂ ಸ್ವಲ್ಪ ಮಟ್ಟಿಗೆ ಭೂಮಿ ಕಂಪಿಸಿದೆ.
Comments
English summary
Earthquake of magnitude 4.0 hit Sonipat in Haryana at 3:37 pm, tremors were felt in adjoining areas of Delhi NCR.
Story first published: Sunday, July 1, 2018, 16:39 [IST]