Work From Jail: ‘ವರ್ಕ್ ಫ್ರಂ ಹೋಂ’ ಗೊತ್ತು, ‘ವರ್ಕ್ ಫ್ರಂ ಜೈಲ್’ ಗೊತ್ತಾ?
ದೆಹಲಿ ಅಬಕಾರಿ ಕೇಸ್ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ಕಿರಿಕ್ ಜೋರಾಗುತ್ತಿದೆ. ಇದೇ ಸಮಯದಲ್ಲಿ, ಎಎಪಿ ಪಕ್ಷ ಕೂಡ ರೊಚ್ಚಿಗೆದ್ದಿದೆ. ಅಕಸ್ಮಾತ್ ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದರೆ ಏನ್ ಮಾಡುತ್ತೇವೆ? ಅನ್ನೋದನ್ನೂ ತಿಳಿಸಿದೆ ಆಪ್. ಹಾಗೇ, 'ವರ್ಕ್ ಫ್ರಂ ಜೈಲ್' ಬಗ್ಗೆ ಇದೀಗ ಮುನ್ಸೂಚನೆ ಸಿಕ್ಕಿದೆ!
ಹೌದು, ದೆಹಲಿ ಅಬಕಾರಿ ಕೇಸ್ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಸಮನ್ಸ್ ಕೊಟ್ಟಿದೆ 'ಇಡಿ'. ಇದೇ ಕೇಸ್ನಲ್ಲಿ ಆಮ್ ಆದ್ಮಿ ಪಕ್ಷದ ಹಲವು ನಾಯಕರು ಮತ್ತು ಸಚಿವರು ಈಗ ಜೈಲು ಸೇರಿದ್ದಾರೆ. ಈ ಸಮಯದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಜೈಲು ಸೇರಬಹುದು ಎಂಬ ಭಯ ಆಪ್ ನಾಯಕರು & ದೆಹಲಿ ಸರ್ಕಾರಕ್ಕೆ ಕಾಡುತ್ತಿದೆ. ಆದ್ರೆ ಈ ರೀತಿ ಅಕಸ್ಮಾತ್ ಆಗೋದರೆ ತಮ್ಮ ರಣತಂತ್ರ ಏನು? ಅನ್ನೋದನ್ನು ಈಗ ಆಪ್ ತಿಳಿಸಿದೆ. ಹಾಗಾದರೆ ಅಕಸ್ಮಾತ್ ಕೇಜ್ರಿವಾಲ್ ಅವರು ಜೈಲಿಗೆ ಹೋದರೆ ಮುಂದೆ ಏನಾಗಬಹುದು?

'ವರ್ಕ್ ಫ್ರಂ ಜೈಲ್' ರಣತಂತ್ರ?
ಅಷ್ಟಕ್ಕೂ, ಅಕಸ್ಮಾತ್ ಅರವಿಂದ್ ಕೇಜ್ರಿವಾಲ್ ಅವರೇನಾದರೂ 'ಇಡಿ' ಕಡೆಯಿಂದ ಅರೆಸ್ಟ್ ಆದರೆ. ಕೇಜ್ರಿವಾಲ್ ಅವರು ಜೈಲಿನಿಂದಲೇ ಕಾರ್ಯನಿರ್ವಹಿಸಲು, ಕೋರ್ಟ್ ಪರ್ಮಿಷನ್ಗೆ ಅರ್ಜಿ ಹಾಕಬೇಕು ಎಂಬ ಚಿಂತನೆ ನಡೆಸಿದೆಯಂತೆ ಆಪ್. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಗರಂ ಆಗಿದೆ. ಅಷ್ಟಕ್ಕು ಇಂದು ನಡೆದ ಸಭೆ ವೇಳೆ ಈ ವಿಚಾರವು ಪ್ರಸ್ತಾಪವಾಗಿದೆ. ಅಕಸ್ಮಾತ್ ಕೇಂದ್ರ ತನಿಖಾ ಸಂಸ್ಥೆಗಳು ಕೇಜ್ರಿವಾಲ್ ಅವರನ್ನ ಬಂಧಿಸಿದರೆ, ಅವರು ಜೈಲಿನಿಂದ ಕಾರ್ಯನಿರ್ವಹಿಸಬೇಕು ಎಂದು ಆಪ್ ಶಾಸಕರು ಒತ್ತಾಯಿಸಿದ್ರು ಎಂದು ಇದೀಗ ವರದಿಯಾಗಿದೆ.
ಕೇಂದ್ರದ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗ?
ಹಾಗೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಸರ್ಕಾರದ ಸಚಿವೆ ಅತಿಶಿ ಅವರು, ನಾವು ಜನರ ನಡುವೆ ಹೋಗ್ತೀವಿ. ಆಪ್ & ಅರವಿಂದ್ ಕೇಜ್ರಿವಾಲ್ ವಿರುದ್ಧ ದೌರ್ಜನ್ಯ ನಡೆಸಲಾಗ್ತಿದೆ ಅಂತಾ ಆರೋಪ ಮಾಡಿದ್ದಾರೆ. ಹೀಗಾಗಿ ಅಕಸ್ಮಾತ್ ಮುಖ್ಯಮಂತ್ರಿಗಳು ಜೈಲಿಗೆ ಹೋದರೆ, ಆಗಲೂ ಅವರು ಸಿಎಂ ಆಗಿ ಉಳಿಯಬೇಕು ಎಂದು ಎಲ್ಲಾ ಶಾಸಕರು ಮನವಿ ಮಾಡಿದ್ದಾರೆ. ದೆಹಲಿ ಜನ ಅವರನ್ನ ಸಿಎಂ ಆಗಿ ಆಯ್ಕೆ ಮಾಡಿದ್ದಾರೆ & ಅವರು ಮುಖ್ಯಮಂತ್ರಿಯಾಗಿಯೇ ಉಳಿಯಬೇಕು ಎಂದಿದ್ದಾರೆ ಸಚಿವೆ ಅತಿಶಿ. ಈ ಮೂಲಕ ಇದೀಗ ಆಪ್ ಪಕ್ಷದ ನಾಯಕರು ಕೇಂದ್ರದ ವಿರುದ್ಧ ಬೇರೆಯದ್ದೇ ತಂತ್ರ ರೂಪಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.
ಪ್ರಕರಣದಲ್ಲಿ ಏನೆಲ್ಲಾ ನಡೆಯುತ್ತಿದೆ?
ಒಟ್ಟಾರೆ ಈ ಪ್ರಕರಣ ನೋಡುವುದಾರೆ, ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ. ಯಾಕೆ ಅಂದ್ರೆ ಅಬಕಾರಿ ನೀತಿ ಹಗರಣವನ್ನ ಅಕ್ರಮ ಹಣ ವರ್ಗಾವಣೆ ಆಯಾಮದಲ್ಲಿ ತನಿಖೆ ಮಾಡ್ತ ಇರುವ ಜಾರಿ ನಿರ್ದೇಶನಾಲಯ, ಸಿಎಂ ಕೇಜ್ರಿವಾಲ್ಗೆ ನ. 2ಕ್ಕೆ ತನ್ನ ಮುಂದೆ ಹಾಜರಾಗಲು ಸಮನ್ಸ್ ನೀಡಿತ್ತು. ಹೀಗಾದರೂ ಕೇಜ್ರಿವಾಲ್ ಅವರು ಹಾಜರಾಗಿಲ್ಲ. ಹೀಗಾಗಿ ಕೇಜ್ರಿವಾಲ್ ಅವರನ್ನು ಶೀಘ್ರದಲ್ಲೇ ಬಂಧಿಸಬಹುದು ಎಂಬ ಮಾತುಗಳು ಓಡಾಡುತ್ತಿವೆ. ಇದೇ ಪರಿಸ್ಥಿತಿ ವೇಳೆ, ಆಪ್ ನಾಯಕರು ಕೂಡ ಪ್ರತ್ಯಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಕಸ್ಮಾತ್ ಈಗ ಕೇಜ್ರಿವಾಲ್ ಜೈಲಿಗೆ ಹೋದರೆ ಜೈಲಿನಿಂದ ಅವರು ತಮ್ಮ ಸಿಎಂ ಕಾರ್ಯ ನಿರ್ವಹಿಸಲು ಅವಕಾಶ ನೀಡಲು ಕೋರಿ, ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications