ವಿರೋಧಿಗಳಿಗೆ ದೀಪಿಕಾ ಪಡುಕೋಣೆ ಖಡಕ್ ಪ್ರತ್ಯುತ್ತರ
Recommended Video
ಮುಂಬೈ, ಜನವರಿ 31: ದೀಪಿಕಾ ಪಡುಕೋಣೆ ಇತ್ತೀಚೆಗೆ ಜೆಎನ್ಯು ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇದು ಬಿಜೆಪಿ ಬೆಂಬಲಿಗರಿಗೆ ಅಸಮಾಧಾನ ಉಂಟು ಮಾಡಿತ್ತು. ದೀಪಿಕಾ ಪಡುಕೋಣೆ ಮೇಲೆ ಉರಿದು ಬಿದ್ದಿದ್ದರು. ಅಂದಿನಿಂದಲೂ ಮೌನವಾಗಿಯೇ ಇದ್ದ ದೀಪಿಕಾ ಈಗ ಮಾತನಾಡಿದ್ದಾರೆ.
ಜೆಎನ್ಯು ಗೆ ದೀಪಿಕಾ ಭೇಟಿ ನೀಡಿದ ನಂತರ ಬಿಡುಗಡೆ ಆದ ದೀಪಿಕಾ ಪಡುಕೋಣೆ ಚಿತ್ರ 'ಚಪಾಕ್' ಗೆ ಉದ್ದೇಶಪೂರ್ವಕವಾಗಿ ರೇಟಿಂಗ್ ಕಡಿಮೆ ಮಾಡಲಾಗಿತ್ತು. ಟ್ರೋಲ್ಗಳು ದೀಪಿಕಾ ಚಿತ್ರಕ್ಕೆ ಉದ್ದೇಶಪೂರ್ವಕವಾಗಿ ಕಡಿಮೆ ರೇಟಿಂಗ್ ನೀಡಿದ್ದರು. ಹಾಗಾಗಿ ಐಎಂಡಿಬಿ ಯಲ್ಲಿ 'ಚಪಾಕ್' ಚಿತ್ರದ ರೇಟಿಂಗ್ ಕಡಿಮೆ ಆಗಿತ್ತು.
ಈ ಬಗ್ಗೆ ರೇಡಿಯೋಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ ತಮಾಷೆಯಾಗಿಯೇ ಆದರೆ ಅಷ್ಟೆ ಖಡಕ್ ಆಗಿ ತನ್ನ ವಿರುದ್ಧದ ಟ್ರೋಲ್ಗಳಿಗೆ, ಪಿತೂರಿಗೆ ಪ್ರಯತ್ಯುತ್ತರ ನೀಡಿದ್ದಾರೆ.

ಸಂದರ್ಶನದಲ್ಲಿ ಸಂದರ್ಶಕಿ, 'ನಿಮಗೆ ವಾಸ್ತವ ಗೊತ್ತಿದೆ, ಆದರೆ ಬೇರೊಂದು ವಾಸ್ತವವೂ ಗೊತ್ತಿದೆ..' ಎಂದು ಪರೋಕ್ಷವಾಗಿ ದೀಪಿಕಾ ವಿರುದ್ಧ ಬಿಜೆಪಿ ಬೆಂಬಲಿಗರ ಪಿತೂರಿಯ ಬಗ್ಗೆ, ಟ್ರೋಲ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ನಗುತ್ತಲೇ ತಮಾಷೆಯ ಧಾಟಿಯಲ್ಲಿ ಉತ್ತರಿಸುವ ದೀಪಿಕಾ, 'ಅವರು ನನ್ನ ಐಎಂಬಿಡಿ ರೇಟಿಂಗ್ ಬದಲಾಯಿಸಬಹುದು, ಆದರೆ ನನ್ನ ಮನಸನ್ನಲ್ಲಾ' ಎಂದಿದ್ದಾರೆ.
ದೀಪಿಕಾ ಪಡುಕೋಣೆ ಅವರು ಈ ಹೇಳಿಕೆ ಮೂಲಕ 'ನಾನು ನನ್ನ ನಿಲುವಿಗೆ ಬದ್ಧ' ಎಂಬ ಸಂದೇಶವನ್ನು ವಿರೋಧಿಗಳಿಗೆ ರವಾನಿಸಿದ್ದಾರೆ.
ಚಪಾಕ್ ಸಿನಿಮಾ ಬಿಡುಗಡೆಗೆ ಮುನ್ನಾ ದೀಪಿಕಾ ಪಡುಕೋಣೆ ಅವರು ಜೆಎನ್ಯು ಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳು ತಮ್ಮ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಮಾಡುತ್ತಿದ್ದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದರು. ಇದು ಭಾರಿ ಸುದ್ದಿಯಾಗಿತ್ತು.
ಜೆಎನ್ಯು ಭೇಟಿ ನಂತರ ಒಂದು ವರ್ಗದ ಮಂದಿ (ಬಹುತೇಕ ಬಿಜೆಪಿ ಬೆಂಬಲಿಗರು) ದೀಪಿಕಾ ಪಡುಕೋಣೆ ಬಗ್ಗೆ ನಕಾರಾತ್ಮಕ ಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭಿಸಿದ್ದರು. ಅವರ ಸಿನಿಮಾ ಟಿಕೆಟ್ ರದ್ದುಗೊಳಿಸುವುದು, ರೇಟಿಂಗ್ ಕಡಿಮೆ ಗೊಳಿಸುವುದು, ದೀಪಿಕಾ ಜಾಹೀರಾತು ನೀಡುವ ವಸ್ತುಗಳನ್ನು ಬಳಸದಂತೆ ಕರೆ ನೀಡುವುದು ಹೀಗೆ ಹಲವು ಪಿತೂರಿಗಳನ್ನು ಮಾಡಿದ್ದರು. ಈಗ ಅವೆಲ್ಲವಕ್ಕೂ ದೀಪಿಕಾ ತಕ್ಕ ಉತ್ತರ ನೀಡಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications