ವಿರೋಧಿಗಳಿಗೆ ದೀಪಿಕಾ ಪಡುಕೋಣೆ ಖಡಕ್ ಪ್ರತ್ಯುತ್ತರ
Recommended Video
ಮುಂಬೈ, ಜನವರಿ 31: ದೀಪಿಕಾ ಪಡುಕೋಣೆ ಇತ್ತೀಚೆಗೆ ಜೆಎನ್ಯು ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇದು ಬಿಜೆಪಿ ಬೆಂಬಲಿಗರಿಗೆ ಅಸಮಾಧಾನ ಉಂಟು ಮಾಡಿತ್ತು. ದೀಪಿಕಾ ಪಡುಕೋಣೆ ಮೇಲೆ ಉರಿದು ಬಿದ್ದಿದ್ದರು. ಅಂದಿನಿಂದಲೂ ಮೌನವಾಗಿಯೇ ಇದ್ದ ದೀಪಿಕಾ ಈಗ ಮಾತನಾಡಿದ್ದಾರೆ.
ಜೆಎನ್ಯು ಗೆ ದೀಪಿಕಾ ಭೇಟಿ ನೀಡಿದ ನಂತರ ಬಿಡುಗಡೆ ಆದ ದೀಪಿಕಾ ಪಡುಕೋಣೆ ಚಿತ್ರ 'ಚಪಾಕ್' ಗೆ ಉದ್ದೇಶಪೂರ್ವಕವಾಗಿ ರೇಟಿಂಗ್ ಕಡಿಮೆ ಮಾಡಲಾಗಿತ್ತು. ಟ್ರೋಲ್ಗಳು ದೀಪಿಕಾ ಚಿತ್ರಕ್ಕೆ ಉದ್ದೇಶಪೂರ್ವಕವಾಗಿ ಕಡಿಮೆ ರೇಟಿಂಗ್ ನೀಡಿದ್ದರು. ಹಾಗಾಗಿ ಐಎಂಡಿಬಿ ಯಲ್ಲಿ 'ಚಪಾಕ್' ಚಿತ್ರದ ರೇಟಿಂಗ್ ಕಡಿಮೆ ಆಗಿತ್ತು.
ಈ ಬಗ್ಗೆ ರೇಡಿಯೋಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ ತಮಾಷೆಯಾಗಿಯೇ ಆದರೆ ಅಷ್ಟೆ ಖಡಕ್ ಆಗಿ ತನ್ನ ವಿರುದ್ಧದ ಟ್ರೋಲ್ಗಳಿಗೆ, ಪಿತೂರಿಗೆ ಪ್ರಯತ್ಯುತ್ತರ ನೀಡಿದ್ದಾರೆ.

ಸಂದರ್ಶನದಲ್ಲಿ ಸಂದರ್ಶಕಿ, 'ನಿಮಗೆ ವಾಸ್ತವ ಗೊತ್ತಿದೆ, ಆದರೆ ಬೇರೊಂದು ವಾಸ್ತವವೂ ಗೊತ್ತಿದೆ..' ಎಂದು ಪರೋಕ್ಷವಾಗಿ ದೀಪಿಕಾ ವಿರುದ್ಧ ಬಿಜೆಪಿ ಬೆಂಬಲಿಗರ ಪಿತೂರಿಯ ಬಗ್ಗೆ, ಟ್ರೋಲ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ನಗುತ್ತಲೇ ತಮಾಷೆಯ ಧಾಟಿಯಲ್ಲಿ ಉತ್ತರಿಸುವ ದೀಪಿಕಾ, 'ಅವರು ನನ್ನ ಐಎಂಬಿಡಿ ರೇಟಿಂಗ್ ಬದಲಾಯಿಸಬಹುದು, ಆದರೆ ನನ್ನ ಮನಸನ್ನಲ್ಲಾ' ಎಂದಿದ್ದಾರೆ.
ದೀಪಿಕಾ ಪಡುಕೋಣೆ ಅವರು ಈ ಹೇಳಿಕೆ ಮೂಲಕ 'ನಾನು ನನ್ನ ನಿಲುವಿಗೆ ಬದ್ಧ' ಎಂಬ ಸಂದೇಶವನ್ನು ವಿರೋಧಿಗಳಿಗೆ ರವಾನಿಸಿದ್ದಾರೆ.
ಚಪಾಕ್ ಸಿನಿಮಾ ಬಿಡುಗಡೆಗೆ ಮುನ್ನಾ ದೀಪಿಕಾ ಪಡುಕೋಣೆ ಅವರು ಜೆಎನ್ಯು ಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳು ತಮ್ಮ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಮಾಡುತ್ತಿದ್ದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದರು. ಇದು ಭಾರಿ ಸುದ್ದಿಯಾಗಿತ್ತು.
ಜೆಎನ್ಯು ಭೇಟಿ ನಂತರ ಒಂದು ವರ್ಗದ ಮಂದಿ (ಬಹುತೇಕ ಬಿಜೆಪಿ ಬೆಂಬಲಿಗರು) ದೀಪಿಕಾ ಪಡುಕೋಣೆ ಬಗ್ಗೆ ನಕಾರಾತ್ಮಕ ಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭಿಸಿದ್ದರು. ಅವರ ಸಿನಿಮಾ ಟಿಕೆಟ್ ರದ್ದುಗೊಳಿಸುವುದು, ರೇಟಿಂಗ್ ಕಡಿಮೆ ಗೊಳಿಸುವುದು, ದೀಪಿಕಾ ಜಾಹೀರಾತು ನೀಡುವ ವಸ್ತುಗಳನ್ನು ಬಳಸದಂತೆ ಕರೆ ನೀಡುವುದು ಹೀಗೆ ಹಲವು ಪಿತೂರಿಗಳನ್ನು ಮಾಡಿದ್ದರು. ಈಗ ಅವೆಲ್ಲವಕ್ಕೂ ದೀಪಿಕಾ ತಕ್ಕ ಉತ್ತರ ನೀಡಿದ್ದಾರೆ.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications