ಅಯ್ಯೋ ಶಿವನೇ.. ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಅಂದ್ರೆ ಹೀಗಾ ಮಾಡೋದು?!
ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಪ್ರಧಾನಿ ಮೋದಿ ನಿನ್ನೆ (ಮಾರ್ಚ್ 22) ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಜೊತೆಗೆ ಸಂಜೆ 5 ಗಂಟೆಗೆ ಮನೆಯಲ್ಲೇ ಚಪ್ಪಾಳೆ ತಟ್ಟಿ ಆರೋಗ್ಯ ಇಲಾಖೆಯವರಿಗೆ ಗೌರವ ಸಲ್ಲಿಸಿ ಎಂದು ನರೇಂದ್ರ ಮೋದಿ ಕೇಳಿಕೊಂಡಿದ್ದರು.
ಅದರಂತೆ, ನಿನ್ನೆ ಜನತಾ ಕರ್ಫ್ಯೂಗೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಯ್ತು. 5 ಗಂಟೆಗೆ ಸರಿಯಾಗಿ ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ವೈದ್ಯಕೀಯ ಸಿಬ್ಬಂದಿಗೆ ಜನತೆ ಕೃತಜ್ಞತೆ ಅರ್ಪಿಸಿದರು.
ಈ ಮಧ್ಯೆ ಹೆಲ್ತ್ ವರ್ಕರ್ಸ್ ಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ, ಕೆಲವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಏನೇನೆಲ್ಲಾ ಬಡಿದು ಹಾಕಿದ್ದಾರೆ ಗೊತ್ತಾ.? ನಿಮ್ಮನ್ನ ನಗೆಗಡಲಲ್ಲಿ ತೇಲಿಸುವ ಅಂತಹ ವಿಡಿಯೋಗಳ ಕಲೆಕ್ಷನ್ ಇಲ್ಲಿದೆ, ನೋಡಿ... ನಕ್ಕುಬಿಡಿ...
|
ಹಿಂಗೂ ಬಡಿ ಅಂತ ಹೇಳಿದ್ರಾ.?
ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಅಂದ್ರೆ.. ಇಲ್ಲೋರ್ವ ಯುವಕ ಬಾಲ್ಕನಿಯಲ್ಲಿ ನಿಂತು ತಟ್ಟೆ ಮತ್ತು ಸೌಟು ತಗೊಂಡು ಬ್ಯಾಂಡ್ ಬಾರಿಸುವ ರೀತಿಯಲ್ಲಿ ಬಾರಿಸಿದ್ದಾನೆ. ಆ ಸೌಂಡ್ ತಡೆಯಲಾರದೆ, ಮನೆಯವರು ಆ ಯುವಕನನ್ನು ಒಳಗೆ ಎಳೆದುಕೊಂಡು ಹೋದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
|
ಕೊರೊನಾ ಜೊತೆಗೆ ಅದರ ಅಪ್ಪನೂ ಸಾಯುತ್ತೆ.!
ಹೀಗೆ ಬಡಿದರೆ, ಕೊರೊನಾ ಮಾತ್ರ ಅಲ್ಲ.. ಅದರ ಅಪ್ಪ ಕೂಡ ಶಬ್ಧಕ್ಕೆ ಸಾಯಲೇ ಬೇಕು!
|
ಖಂಡಿತ ಚಪ್ಪಾಳೆ ಹೊಡೆಯಬೇಕು.!
ಆರೋಗ್ಯ ಇಲಾಖೆಯವರಿಗೆ ಚಪ್ಪಾಳೆ ಹೊಡೆಯುವುದು ಹಾಗಿರಲಿ, ತಟ್ಟೆ ಮತ್ತು ಫ್ಯಾನ್ ಬಳಸಿ ಹೀಗೆ ಆಟೋಮ್ಯಾಟಿಕ್ ಆಗಿ ಸೌಂಡ್ ಬರುವ ಹಾಗೆ ಮಾಡಿದವನಿಗೆ ಮೊದಲು ಚಪ್ಪಾಳೆ ತಟ್ಟಿ.!
|
ತೂತಾದ ಕಂಚಿನ ತಟ್ಟೆ
5 ಗಂಟೆಗೆ 5 ನಿಮಿಷ ತಟ್ಟೆ ಬಾರಿಸಿದ್ದಕ್ಕೆ, ತಟ್ಟೆಯ ಸ್ಥಿತಿ ಏನಾಗಿದೆ ಅಂತ ನೀವೇ ನೋಡಿ.... ಅಂದ್ಹಾಗೆ, ಕಂಚಿನ ತಟ್ಟೆಯನ್ನ ಸುತ್ತಿಗೆಯಿಂದ ಬಡಿದ ಪುಣ್ಯಾತ್ಮ ಯಾರು ಅಂತ ನಮಗೂ ಗೊತ್ತಾಗಿಲ್ಲ.!
|
ಕೊರೊನಾ ಗ್ಯಾರೆಂಟಿ ಓಡಿ ಹೋಗುತ್ತೆ.!
ಬೃಹತ್ ಪಾತ್ರೆಗಳನ್ನ ಹಿಡಿದುಕೊಂಡು ಓರ್ವ ಅಜ್ಜಿ ಬಡಿದ ಶಬ್ದಕ್ಕೆ ಕೊರೊನಾ ಖಂಡಿತ ಹೆದರಿಕೊಂಡು ಓಡಿ ಹೋಗಿರುತ್ತೆ.!
|
5 ಗಂಟೆ ಮುಂಚೆ, 5 ಗಂಟೆ ಆದ್ಮೇಲೆ!
5 ಗಂಟೆಗೆ ಮುಂಚೆ ಇದ್ದ ತಟ್ಟೆ, 5 ಗಂಟೆ ಆದ್ಮೇಲೆ ಹೇಗೆ ಪರಿವರ್ತನೆ ಆಗಿದೆ ಅಂತ ನೀವೇ ನೋಡಿ..
|
ಮನಮಿಡಿಯುವ ವಿಡಿಯೋ
ಮೇಲಿನ ಎಲ್ಲಾ ಕಾಮಿಡಿ ವಿಡಿಯೋಗಳ ಮಧ್ಯೆ ಸಿಕ್ಕಾಪಟ್ಟೆ ವೈರಲ್ ಆಗಿರುವ ಮನಮಿಡಿಯುವ ವಿಡಿಯೋ ಅಂದ್ರೆ ಇದೇ ನೋಡಿ... ಸೀರಿಯಸ್ ವಿಚಾರದಲ್ಲೂ ಸಂಭ್ರಮ ಮೆರೆಯುವ ವಿದ್ಯಾವಂತ ನಾಗರೀಕರಿಗೆ ಮಾದರಿಯಾಗುವಂತೆ ನಡೆದುಕೊಂಡಿದ್ದಾನೆ ಈ ನಿರ್ಗತಿಕ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications