Get Updates
Get notified of breaking news, exclusive insights, and must-see stories!

Yogi Adityanath: ಕೋವಿಡ್ ಅನಾಥರಿಗೆ ಸಹಾಯ ಹಸ್ತ ನೀಡಿದ ಸಿಎಂ ಯೋಗಿ ಸರ್ಕಾರ

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಸಿಕ ನೆರವು ನೀಡುವ ಮೂಲಕ ಕೋವಿಡ್ ಅನಾಥರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಲಕ್ನೋ ಮಾರ್ಚ್ 9: ಎರಡು ವರ್ಷಗಳ ಹಿಂದೆ ದೇಶವನ್ನು ಬೆಚ್ಚಿಬೀಳಿಸಿದ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಉತ್ತರ ಪ್ರದೇಶದಲ್ಲೂ ಸಾವಿರಾರು ಸಾವುಗಳು ಸಂಭವಿಸಿವೆ. ಕೋವಿಡ್‌ನ ಪ್ರಭಾವದಿಂದ ತಮ್ಮ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿರುವ ಅನೇಕ ಜನರಿದ್ದಾರೆ. ಸರ್ಕಾರಗಳು ಅವರಿಗೆ ಮಾನವೀಯ ನೆರವು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಈ ನಿಟ್ಟಿನಲ್ಲಿ ಹಲವು ಸರಕಾರಗಳು ನಿರ್ಧಾರ ಕೈಗೊಂಡಿವೆ. ಆದರೆ ಅದೆಲ್ಲಕ್ಕಿಂತ ಭಿನ್ನವಾಗಿ ಯುಪಿಯಲ್ಲಿ ಯೋಗಿ ಸರ್ಕಾರ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಕೋವಿಡ್‌ನಿಂದಾಗಿ ಒಬ್ಬ ಅಥವಾ ಇಬ್ಬರು ಪೋಷಕರ ಸಾವಿನಿಂದ ಅನಾಥರಾದ ಮಕ್ಕಳಿಗೆ ಅನೇಕ ಸರ್ಕಾರಗಳು ಏಕರೂಪದ ಪರಿಹಾರವನ್ನು ಒದಗಿಸಿವೆ. ಇನ್ನೂ ಕೆಲವು ಸರಕಾರಗಳು ಹಣದ ಕೊರತೆಯ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿವೆ. ಆದರೆ ಯುಪಿಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಕೋವಿಡ್‌ನಿಂದ ಅನಾಥರಾದವರಿಗೆ ನಿಯಮಿತ ಕಲ್ಯಾಣ ಯೋಜನೆಯನ್ನು ಲಭ್ಯಗೊಳಿಸಿದೆ. ತಮ್ಮ ಸರ್ಕಾರ ಯುಪಿಯಲ್ಲಿ ಇರುವವರೆಗೂ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಘೋಷಿಸಿದ್ದರು.

CM Yogi Adityanath government has extended a helping hand to covid orphans

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗಾಗಿ ಯುಪಿ ಸರ್ಕಾರ ಹೊಸ ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸ್ವಕ್ಷೇತ್ರ ಗೋರಖ್‌ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇದಕ್ಕೆ ಚಾಲನೆ ನೀಡಿದರು. ಈ ಯೋಜನೆಯ ಭಾಗವಾಗಿ, ಕೋವಿಡ್-19 ಅವಧಿಯಲ್ಲಿ ಒಬ್ಬರು ಅಥವಾ ಇಬ್ಬರ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಯುಪಿ ಸರ್ಕಾರ ಮಾಸಿಕ ರೂ. 4,000 ನೀಡುತ್ತದೆ. ಈಗಾಗಲೇ ನೀಡಿರುವ ಪಿಂಚಣಿಗಳ ಮಾದರಿಯಲ್ಲಿಯೇ ಈ ಮೊತ್ತವನ್ನು ಸರಕಾರ ವರ್ಷವಿಡೀ ನೀಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+