Get Updates
Get notified of breaking news, exclusive insights, and must-see stories!

ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ ನಾಗರಿಕ ಸಾವು

ಶ್ರೀನಗರ್, ಜೂನ್ 7: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಅಡಗಿದ್ದ ಉಗ್ರರ ಶೋಧ ಕಾರ್ಯಾಚರಣೆ ವೇಳೆ ಉಂಟಾದ ಗಲಭೆ ಸಂದರ್ಭದಲ್ಲಿ ಮಂಗಳವಾರ ಸಂಜೆ ಒಬ್ಬ ನಾಗರಿಕ ಮೃತಪಟ್ಟಿದ್ದಾನೆ.

ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಯುವಕರು ಗುಂಪೊಂದು ಪ್ರತಿಭಟನೆ ನಡೆಸಿತು. ಸಂಜೆ ಇನ್ನೇನು ರಂಜಾನ್ ನ ರೋಜಾ ಉಪವಾಸ ಮುಗಿಯುವುದರಲ್ಲಿತ್ತು. ಆ ವೇಳೆ ಪ್ರತಿಭಟನಾಕಾರರ ಗುಂಪಿನತ್ತ ರಕ್ಷಣಾ ಪಡೆಯು ಗುಂಡು ಹಾರಿಸಿತು.[ಏಟಿಗೆ ಎದುರೇಟು, ನಾಲ್ವರು ಉಗ್ರರನ್ನು ಹೊಡೆದುರಿಳಿಸಿದ ಭಾರತೀಯ ಸೇನೆ]

ಸಿಕ್ಕಿಬಿದ್ದ ಉಗ್ರಗಾಮಿಗಳು ತಪ್ಪಿಸಿಕೊಳ್ಳುವುದಕ್ಕೆ ಆ ಗುಂಪು ಬೆಂಬಲ ನೀಡುತ್ತಿತ್ತು. ಹನ್ನೆರಡನೇ ತರಗತಿ ವಿದ್ಯಾರ್ಥಿ, ಗನವ್ ಪೋರ್ ನ ನಿವಾಸಿ ಅದಿಲ್ ಫಾರೂಕ್ ಮಗ್ರೆ ಎಂಬಾತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಮೃತಪಟ್ಟಿದ್ದ. ಆತನಿಗೆ ಗುಂಡು ತಗುಲಿತು ಎಂದು ಆರೋಪಿಸಲಾಗಿದೆ. ಇನ್ನು ನಾಲ್ವರು ನಾಯಕರಿಗೆ ಗಾಯಗಳಾಗಿವೆ.

jammu and Kashmir

ಹಿಜ್ಬುಲ್ ಮುಜಾಹಿದೀನ್ ನ ಇಬ್ಬರು ಉಗ್ರರು, ಆ ಪೈಕಿ ಒಬ್ಬ ಕಮ್ಯಾಂಡರ್ ಅಲ್ಲಿ ಅಡಗಿದ್ದ ಎಂದು ವರದಿಯಾಗಿದೆ. ರಾಷ್ಟ್ರೀಯ ರೈಫಲ್ಸ್, ಸಿಆರ್ ಪಿಎಫ್ ಯೋಧರು ಹಾಗೂ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+