ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡಿಸಬೇಡಿ ಎಂದ ಮಹಿಳಾ ಆಯೋಗ : ಕಾರಣ ಇಲ್ಲಿದೆ
ಭಾರತೀಯರಲ್ಲಿ ಮದುವೆ ಎಂದರೆ ಅದನ್ನು ಜೀವನದ ಬಹುಮುಖ್ಯ ಘಟನೆ, ಮದುವೆಯ ಪ್ರತಿ ಕ್ಷಣವನ್ನು ಫೋಟೊ, ವಿಡಿಯೋದಲ್ಲಿ ನೆನಪಿಗಾಗಿ ಸೆರೆಹಿಡಿಯುವುದು ಸಾಮಾನ್ಯ. ಇತ್ತೀಚೆಗೆ ಪ್ರಿ ವೆಡ್ಡಿಂಗ್ ಶೂಟ್ ಎನ್ನುವುದು ಸಾಕಷ್ಟು ಜನಪ್ರಿಯವಾಗಿದೆ. ದೇಶ-ವಿದೇಶಗಳ ಮನಮೋಹಕ ಸ್ಥಳಗಳಲ್ಲಿ ಹುಡುಗ-ಹುಡುಗಿ ಫೋಟೊ ಶೂಟ್ ಮಾಡಿಸಲು ಇಷ್ಟ ಪಡುತ್ತಾರೆ. ಇದರಲ್ಲೂ ವಿನೂತನ ಐಡಿಯಾಗಳನ್ನು ಬಳಸಿ ಪ್ರತಿ ಕ್ಷಣಗಳನ್ನು ಸುಂದರವಾಗಿಸಿಕೊಳ್ಳಲು ಬಯಸುತ್ತಾರೆ. ಆದರೆ ಮಹಿಳಾ ಆಯೋಗ ಪ್ರಿ ವೆಡ್ಡಿಂಗ್ ಶೂಟ್ ಬಗ್ಗೆ ಕಿಡಿ ಕಾರಿದೆ.
ಹೌದು, ಛತ್ತೀಸ್ಗಢದ ಮಹಿಳಾ ಆಯೋಗದ ಅಧ್ಯಕ್ಷೆ ಕಿರಣ್ಮಯಿ ನಾಯಕ್ ಅವರು ಮದುವೆಗೆ ಮುಂಚಿನ ಚಿತ್ರೀಕರಣವು ಮಹಿಳೆಯರಿಗೆ ಹಾನಿಯಾಗಬಹುದು ಮತ್ತು ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಂಡರೆ ಅದು ವಿವಾದಕ್ಕೆ ಕಾರಣವಾಗಬಹುದು ಎಂದು ಹೇಳಿದೆ.

ಕಿರಣ್ಮಯಿ ನಾಯಕ್ ಅವರ ಅಧ್ಯಕ್ಷತೆಯಲ್ಲಿ, 172 ನೇ ಸಾರ್ವಜನಿಕ ವಿಚಾರಣೆಯ ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ನಡೆಯಿತು. ಈ ಸಾರ್ವಜನಿಕ ವಿಚಾರಣೆಯಲ್ಲಿ ಒಟ್ಟು 25 ಪ್ರಕರಣಗಳನ್ನು ವಿಚಾರಣೆಗೆ ನಿಗದಿಪಡಿಸಲಾಗಿತ್ತು ಮತ್ತು ಅವುಗಳಲ್ಲಿ ಹೆಚ್ಚಿನವು ಮದುವೆಯ ನಂತರ ದಂಪತಿಗಳ ನಡುವಿನ ವಿವಾದಗಳಿಗೆ ಸಂಬಂಧಿಸಿವೆ.
ಇಂತಹ ಒಂದು ಪ್ರಕರಣದಲ್ಲಿ ದಿನಾಂಕ ನಿಗದಿಯಾದ ಬಳಿಕ ಮದುವೆ ಮುರಿದುಬಿದ್ದಿದೆ. ಇದಕ್ಕಾಗಿ ಅರ್ಜಿದಾರರು ಆಯೋಗಕ್ಕೆ ದೂರು ನೀಡಿದ್ದರು. ವಿಚಾರಣೆಯ ಸಂದರ್ಭದಲ್ಲಿ ಇಬ್ಬರೂ ಕೂಡ ಪ್ರಕರಣವನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದರು. ಮದುವೆಗೆ ಖರ್ಚು ಮಾಡಲಾಗಿದ್ದ ಹಣವನ್ನು ಸಂಪೂರ್ಣವಾಗಿ ವಾಪಸ್ ನೀಡಲಾಗಿದೆ, ಅಲ್ಲದೆ, ಪ್ರಿ ವೆಡ್ಡಿಂಗ್ ಫೋಟೊ ಮತ್ತು ವಿಡಿಯೋಗಳಿಗಾಗಿ ಮಾಡಿದ್ದ ಖರ್ಚನ್ನು ವಾಪಸ್ ನೀಡಿದ್ದು, ಫೋಟೊ ಮತ್ತು ವಿಡಿಯೋವನ್ನು ಅಳಿಸಲಾಗಿದೆ" ಎಂದು ಅರ್ಜಿದಾರರು ವಿವರ ನೀಡಿದ್ದಾರೆ,
ಈ ಸಂದರ್ಭದಲ್ಲಿ ಗಂಡಿನ ಕಡೆಯವರಿಗೆ ಹುಡುಗಿಯ ಒಪ್ಪಿಗೆ ಇಲ್ಲದೆ, ಪ್ರಿ ವೆಡ್ಡಿಂಗ್ ಶೂಟ್ನ ಯಾವುದೇ ಫೋಟೊ ಅಥವಾ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರೆ ಅಥವಾ ಹಂಚಿಕೊಂಡರೆ, ಹುಡುಗಿಯ ಕಡೆಯವರು ಸೈಬರ್ ಕ್ರೈಮ್ ಎಂದು ದೂರು ನೀಡಬಹುದು ಎಂದು ಹುಡುಗನ ಕಡೆಯವರಿಗೆ ಎಚ್ಚರಿಕೆ ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ, ಇದು ನಮ್ಮ ಭಾರತೀಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಿರಣ್ಮಯಿ ನಾಯಕ್ ವಿಚಾರಣೆಯ ಸಂದರ್ಭದಲ್ಲಿ ಹೇಳಿದರು.
"ಮ್ಮ ಹೆಣ್ಣುಮಕ್ಕಳಿಗೆ ಹಾನಿಕಾರಕವಾಗಬಹುದಾದ್ದರಿಂದ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರಿ ವೆಡ್ಡಿಂಗ್ ಶೂಟ್ ಅನ್ನು ತಪ್ಪಿಸಬೇಕು ಎಂದು ನಾನು ಪೋಷಕರನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications