ತ್ರಿವಳಿ ತಲಾಖ್ ತೀರ್ಪು ಸ್ವಾಗತಿಸಿದ ಫತ್ವಾ ಇಲಾಖೆ ಮುಖ್ಯಸ್ಥ
ದಿಯೋಬಂದ್(ಉತ್ತರ ಪ್ರದೇಶ), ಆಗಸ್ಟ್ 22: ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಫತ್ವಾ ಇಲಾಖೆಯ ಅಧ್ಯಕ್ಷ ಅರ್ಷದ್ ಫಾರೂಖಿ ಸ್ವಾಗತಿಸಿದ್ದಾರೆ.
ನಾವೆಲ್ಲರೂ ಸುಪ್ರೀಂಕೋರ್ಟ್ ನ ತೀರ್ಪನ್ನು ಸ್ವಾಗತಿಸುತ್ತೇವೆ. ಇದನ್ನೇ ನಮ್ಮ ಸಮುದಾಯ ಕಾತರದಿಂದ ಕಾಯುತ್ತಿತ್ತು. ತಲಾಖ್ ಅನ್ನು ದುರುಪಯೋಗ ಪಡಿಸಿಕೊಂಡು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವುದನ್ನು ಈ ತೀರ್ಪಿನಿಂದ ತಡೆಯಬಹುದು ಎಂದು ಅವರು ಹೇಳಿದ್ದಾರೆ.

ಇಂದು(ಆಗಸ್ಟ್ 22) ಸುಪ್ರೀಂಕೋರ್ಟ್ ನ ಪಂಚ ಸದಸ್ಯ ಪೀಠ ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದು ಕರೆದು, ತಲಾಖ್ ಪದ್ಧತಿಗೆ ಕಾನೂನಿನ ಚೌಕಟ್ಟು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಕಾನೂನು ಜಾರಿಗೆ ಆರು ತಿಂಗಳ ಸಮಯಾವಕಾಶ ನೀಡಲಾಗಿದ್ದು, ಆರು ತಿಂಗಳೊಳಗೆ ಕಾನೂನು ಜಾರಿಗೆ ಬರುವವರೆಗೆ ತಲಾಖ್ ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿದೆ.












Click it and Unblock the Notifications