ಆಪರೇಷನ್ ಗ್ರೀನ್ : ಬಿದಿರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ
ಬೆಂಗಳೂರು, ಫೆಬ್ರವರಿ 01: ನರೇಂದ್ರ ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗುತ್ತಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನಿರೀಕ್ಷೆಯಂತೆ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೃಷಿ ವಲಯದ ಪ್ರಮುಖ ಘೋಷಣೆಗಳಲ್ಲಿ ಬಿದಿರು ಮಿಷನ್ ಮುಖ್ಯವಾಗಿದೆ.
ಕರ್ನಾಟಕ ಸೇರಿದಂತೆ 8 ರಾಜ್ಯಗಳ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಮಂಡಿಸಲಿರುವ 2018-19ನೇ ಸಾಲಿನ ಬಜೆಟ್ ಜನಸ್ನೇಹಿ, ಪ್ರಗತಿಪರ, ಕೃಷಿಕ ಸ್ನೇಹಿ ಎನಿಸಿಕೊಳ್ಳುತ್ತಿದೆ.

ಕೃಷಿ ವಲಯದ ಪ್ರಮುಖ ಘೋಷಣೆಗಳು:
* 1,290 ಕೋಟಿ ರು ಬಿದಿರು ಮಿಷನ್ ಗಾಗಿ ಮೀಸಲು. ಬಿದಿರನ್ನು ಹಸಿರು ಚಿನ್ನ ಎಂದು ಪರಿಗಣಿಸಲಾಗುತ್ತದೆ, ಬಿದಿರು ಕೃಷಿಗೆ ಸಬ್ಸಿಡಿ, ಹೆಚ್ಚಿನ ಅನುದಾನ ಸಿಗಲಿದೆ.
* ಮೀನುಗಾರಿಕೆ, ಜಲ ಕೃಷಿ, ಪಶುಪಂಗೋಪಣೆ ವಲಯಕ್ಕೆ 10,000 ಕೋಟಿ ರು ಮೀಸಲು.
* ಅಪರೇಷನ್ ಗ್ರೀನ್ ಯೋಜನೆಗಾಗಿ 500 ಕೋಟಿ ರು ಮೀಸಲು.
Restructured #NationalBambooMission to be launched with an allocation of Rs. 1290 crore to promote bamboo sector in a holistic manner. Rs. 500 crore to be allocated for #OperationGreen: FM Shri @arunjaitley #NewIndiaBudget pic.twitter.com/JWmOtmzv7k
— BJP (@BJP4India) February 1, 2018
* ಇನ್ಯಾಮ್ ನೆಟ್ವರ್ಕ್ 2018ರಲ್ಲಿ ಪೂರ್ಣಗೊಳ್ಳಲಿದ್ದು, 470 ಎಪಿಎಂಸಿಗಳು ಸದ್ಯಕ್ಕೆ ಜೋಡಣೆಯಾಗಿವೆ.
* ಕೃಷಿ ಮಾರುಕಟ್ಟೆ ಅಭಿವೃದ್ಧಿ ನಿಧಿಯನ್ನು 2000 ಕೋಟಿ ರುಗೆ ಏರಿಸಲಾಗಿದೆ.












Click it and Unblock the Notifications