ದಯಾನಿಧಿಯ ಬಯಲಿಗೆಳೆದಿದ್ದಕ್ಕೆ ಪಿಂಚಣಿಗೆ ಸಂಚಕಾರ

ಆದರೆ ವಿಷಯ ಅದಲ್ಲ. ರಹಸ್ಯ ಮಾಹಿತಿದಾರರೊಬ್ಬರು 'ದಯಾನಿಧಿ ಮಾರನ್ ಭಾರಿ ಅಕ್ರಮವೆಸಗಿದ್ದಾರೆ' ಎಂದು ಸುಪ್ರೀಂಕೋರ್ಟ್ ಗೆ ವಿಷಯ ಮುಟ್ಟಿಸಿದ್ದರು. ಆತ ಬಿಎಸ್ಎನ್ಎಲ್ ಸಬ್ ಡಿವಿಶನಲ್ ಇಂಜಿನಿಯರ್.
ಮಾಹಿತಿ ನೀಡಿದ್ದು ಇದೇ ಇಂಜಿನಿಯರ್ ಎಂಬ ವಿಷಯ ಬಹಿರಂಗವಾಗಿ ಇದೀಗ ಇಂಜಿನಿಯರ್ ಪಿಂಚಣಿಗೆ ಸಂಚಕಾರ ಬಂದಿದೆ. 2013ರ ಜೂನ್ ನಲ್ಲಿ ನಿವೃತ್ತಿ ಹೊಂದಿದ ಸಿಕೆ ಮಟ್ಟವಣ್ಣನ್ ಎಂಬ ಈ ಮಾಹಿತಿದಾರನ ವಿರುದ್ಧ ಶಿಸ್ತುಕ್ರಮ ಅನ್ವಯಿಸಿ ಆತನ ಪಿಂಚಣಿಯನ್ನು ಮೊಟಕುಗೊಳಿಸಲಾಗಿದೆ. ಆದರೆ ಸರಕಾರಿ ಸಂಸ್ಥೆಯಲ್ಲಿ ನಡೆದಿದ್ದ 440 ಕೋಟಿ ರೂ. ಮೊತ್ತದ ಭ್ರಷ್ಟಾಚಾರವನ್ನು ಬಯಲಿಗೆಳೆದ ಸಂತೃಪ್ತಿ ತನ್ನದಾಗಿದೆ ಎಂದು ಸಂತಸಪಟ್ಟಿದ್ದಾರೆ.
ಅಂದಹಾಗೆ ದಯಾನಿಧಿ ಮಾರನ್ Boat Club ಮನೆಯಲ್ಲಿ ಸ್ಥಾಪಿತವಾಗಿದ್ದ ಹೈಸ್ಪೀಡ್ ಟೆಲಿಫೋನ್ ಲೈನ್ಸ್ ಆತನ ಅಣ್ಣ ಕಲಾನಿಧಿ ಮಾರನ್ ಒಡೆತನದ ಸನ್ ಟಿವಿ ಚಾನೆಲ್ ಸಮೂಹದ ಸೇವೆಗೆ ಮೀಸಲಾಗಿದ್ದವು.
ಮಾರನ್ ಕೇಂದ್ರ ದೂರಸಂಪರ್ಕ ಖಾತೆ ಸಚಿವರಾಗಿದ್ದ ವೇಳೆ ಚೆನ್ನೈನಲ್ಲಿನ ತಮ್ಮ ಮನೆಗೆ ಅಕ್ರಮವಾಗಿ 323 ಟೆಲಿಫೋನ್ ಲೈನ್ಗಳನ್ನು ಎಳೆದುಕೊಂಡಿದ್ದರು. ಅತ್ಯಂತ ತ್ವರಿತವಾಗಿ, ಭಾರೀ ಪ್ರಮಾಣದ ಟಿವಿ ದತ್ತಾಂಶಗಳನ್ನು ಸಾಗಿಸುವ ಸಾಮರ್ಥ್ಯವುಳ್ಳ ಐಎಸ್ಡಿಎನ್ ಲೈನ್ ಗಳು ದುಬಾರಿಯಾಗಿದ್ದರೂ, ಇದನ್ನು ಅಕ್ರಮವಾಗಿ ಮಾರನ್ ತಮ್ಮ ಮನೆಗೆ ಅಳವಡಿಸಿಕೊಂಡಿದ್ದರು. ಈ ಮೂಲಕ ತಮ್ಮ ಸೋದರನ ಸನ್ ಟೀವಿ ನೆಟ್ವರ್ಕ್ನ ಕಾರ್ಯಕ್ರಮಗಳು ಇಡೀ ಜಗತ್ತಿನಾದ್ಯಂತ ಅತ್ಯಂತ ತ್ವರಿತವಾಗಿ ಪ್ರಸಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದರು.
2ಜಿ ಪ್ರಕರಣದ ವಿಚಾರಣೆ ನಡೆಸುವಾಗ ಮಾರನ್ ಮನೆಯಲ್ಲೇ ಇಂತಹದ್ದೊಂದು ಟೆಲಿಫೋನ್ ಎಕ್ಸ್ಚೇಂಜ್ ನಿರ್ಮಿಸಿದ್ದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 2011ರಲ್ಲಿ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿ, ಕಳೆದ ಜುಲೈನಲ್ಲಷ್ಟೇ ತನಿಖೆ ಮುಗಿಸಿತ್ತು. ಈ ವೇಳೆ ಮೇಲ್ನೋಟಕ್ಕೆ ಅಪರಾಧ ಎಸಗಿರುವುದು ಖಚಿತಪಟ್ಟ ಹಿನ್ನೆಲೆಯಲ್ಲಿ ಇದೀಗ ಕೇಸು ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ದಯಾನಿಧಿ ಮಾರನ್ ಜೊತೆಗೆ ಬಿಎಸ್ಎನ್ಎಲ್ ಅಧಿಕಾರಿಗಳಾದ ಕೆ. ಬ್ರಹ್ಮನಾಥನ್ ಮತ್ತು ವೇಲುಸ್ವಾಮಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications