BSNL: ಕೈಗೆಟುಕುವ ಬೆಲೆಗೆ 30 ದಿನಗಳ ಭರ್ಜರಿ ಪ್ಲಾನ್, ಬಳಕೆದಾರರ ಗಮನಕ್ಕೆ
ಬೆಂಗಳೂರು, ಜೂನ್ 02: ಕೇಂದ್ರ ಸರ್ಕಾರಿ ಸ್ವಾಧೀನದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶಾದ್ಯಂತ 4ಜಿ ಸೇವೆ ಜೊತೆಗೆ ಟವರ್ ನಿರ್ಮಾಣದಲ್ಲಿ ಪ್ರಗತಿ ಸಾಧಿಸುತ್ತಿದೆ. ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಜನಸ್ನೇಹಿ ಯೋಜನೆ ಘೋಷಿಸಿತ್ತುದೆ. ಇದೀಗ ಕೈಗೆಟುಕುವ ಬೆಲೆಗೆ ಬರೋಬ್ಬರಿ 30 ದಿನ ವ್ಯಾಲಿಡಿಟಿಯ ಪ್ಲಾನ್ ನೀಡುತ್ತಿದೆ. ಈ ಹಿಂದೆಯು ಇದೇ ರೀತಿ ಕಡಿಮೆ ಬೆಲೆಗೆ ನೀಡಿದ್ದ ಉತ್ತಮ ಯೋಜನೆಗಳ ಸಾಲಿಗೆ ಮತ್ತೊಂದು ಹೊಸ ಪ್ಲಾನ್ ಸೇರ್ಪಡೆ ಆದಂತಾಗಿದೆ.
ಬಳಕೆದಾರರಿಗೆ ಕಡಿಮೆ ಬೆಲೆಗೆ ಉತ್ತಮ ಯೋಜನೆ ತಂದಿರುವ BSNL ಕೇವಲ 147 ರೂಪಾಯಿಗೆ ಯೋಜನೆ ಒಂದು ತಿಂಗಳ ಅವಧಿಗೆ (30 ದಿನಗಳ) ಸಕ್ರಿಯವಿರುವ ಯೋಜನೆ ಪರಿಚಯಿಸಿದೆ. ಬಜೆಟ್ ಸ್ನೇಹಿ ಪ್ರಿಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿಕೊಳ್ಳುವ ಗ್ರಾಹಕರಿಗೆ ಇದೊಂದು ಉತ್ತಮ ಪ್ಯಾನ್ ಆಗಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

BSNL ಕೇವಲ 147 ರೂಪಾಯಿ ರೀಚಾರ್ಜ್ ಮಾಡಿದರೆ 10 ಜಿಬಿ 4ಜಿ ಇಂಟರ್ನೆಟ್ ಡೇಟಾದೊಂದಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯಗಳು ಇವೆ. ಡೇಟಾ ಪ್ರಯೋಜನದ ನಂತರ ಬಳಕೆದಾರರಿಗೆ ಲಭ್ಯವಿರುವ ವೇಗವು 40 ಕೆಬಿಪಿಎಸ್ ವರೆಗೆ ಲಭ್ಯ ಇರುತ್ತದೆ. ಇಷ್ಟು ಕಡಿಮೆ ಬೆಲೆಗೆ ಉತ್ತಮ ಪ್ಲಾನ್ ಪಡೆಯಬೇಕಿದ್ದರೆ, ಕೂಡಲೇ ರೀಚಾರ್ಜ್ ಮಾಡಿಸಿಕೊಳ್ಳಬಹುದು.
ಇತರ ಕೈಗೆಟುಕುವ ರೀಚಾರ್ಜ್ ಯೋಜನೆ ಬೇಕಾದಲ್ಲಿ ರೂಪಾಯಿ 247 ಮತ್ತು 299 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ಪಡೆಯಬಹುದಾಗಿದೆ. ಇವು ಸಹ ಉತ್ತಮ ಆಯ್ಕೆಗಳಾಗಿವೆ ಎಂದು ಕಂಪನಿ ತಿಳಿಸಿದೆ. ಬಿಎಸ್ಎನ್ಎಲ್ 247 ರೂಪಾಯಿ ರಿಚಾರ್ಜ್ ಮಾಡಿಸಿದರೆ ನೀವು 30 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳನ್ನು ಮಾಡಬಹುದು. ಜೊತೆಗೆ 50 GB FUP (ಫೇರ್ ಯೂಸೇಜ್ ಪಾಲಿಸಿ) ಡೇಟಾದೊಂದಿಗೆ ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯ ಪಡೆಯಬಹುದಾಗಿದೆ. ಒಂದು ವೇಳೆ ನೀಡಲಾದ ಇಂಟರ್ನೆಟ್ ಸೇವೆ ಕೊನೆಗೊಂಡರೂ ಸಹಿತ ನೀವು 40 ಕೆಬಿಪಿಎಸ್ ವರೆಗೆ ಡೇಟಾ ಲಭ್ಯ ಇದೆ.
ಬಿಎಸ್ಎನ್ಎಲ್ ರೂ. 299 ಪ್ಲಾನ್ ವಿವರ
BSNL ಮತ್ತೊಂದು ಬೆಸ್ಟ್ ಪ್ಲಾನ್ 299 ರೂಪಾಯಿಗೆ ಸಿಗುತ್ತದೆ. ಯೋಜನೆಯು 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಉಚಿತ ಅನ್ಲಿಮಿಟೆಡ್ ನಿತ್ಯ 3ಜಿಬಿ ಇಂಟರ್ನೆಟ್, ದೈನಂದಿನ 100 ಸಂದೇಶ ಸೌಲಭ್ಯಗಳು ಇರುತ್ತದೆ. ಡೇಟಾ ಖಾಲಿಯಾದರೆ ತುರ್ತು ಸೇವೆಗೆ 40 ಕೆಬಿಪಿಎಸ್ ವರೆಗೆ ಇಂಟರ್ನೆಟ್ ಸೇವೆ ಸಿಗುತ್ತದೆ. ಗ್ರಾಹಕರು ಕೂಡಲೇ ಅಗತ್ಯತೆ ನೋಡಿಕೊಂಡು ಈ ಮೇಲಿನ ರೀಚಾರ್ಜ್ ಯೋಜನೆ ಮಾಡಿಕೊಳ್ಳಬಹುದು.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications