BJP Foundation Day : ಸಂಸ್ಥಾಪನಾ ದಿನಾಚರಣೆ: ಯುದ್ಧದ ಭಾರತದ ನಿಲುವಿನ ಬಗ್ಗೆ ಮೋದಿ ಭಾಷಣ
ನವದೆಹಲಿ, ಏಪ್ರಿಲ್ 6: ''ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ಯಾವುದೇ ಜಾಗತಿಕ ಒತ್ತಡಕ್ಕೆ ಮಣಿಯದೆ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡಿದೆ, ಭಾರತದ ಬಲವಾದ ಅಲಿಪ್ತ ನೀತಿ, ತಟಸ್ಥ ನಿಲುವನ್ನು ಮುಂದುವರೆಸಿಕೊಂಡು ಹೋಗಲಿದೆ'' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಬಿಜೆಪಿಯ 42 ನೇ ಸಂಸ್ಥಾಪನಾ ದಿನದಂದು ಪ್ರಧಾನಿ ಮೋದಿ ಮಾತನಾಡಿ, "ಈ ವರ್ಷದ ಸಂಸ್ಥಾಪನಾ ದಿನವು ಮೂರು ಕಾರಣಗಳಿಂದ ಬಹಳ ಮಹತ್ವದ್ದಾಗಿದೆ. ಮೊದಲನೆಯದಾಗಿ, ನಾವು ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸುತ್ತಿದ್ದೇವೆ; ಇದು ಸ್ಫೂರ್ತಿಗಾಗಿ ಪ್ರಮುಖ ಸಂದರ್ಭವಾಗಿದೆ. ಎರಡನೆಯದಾಗಿ, ವೇಗವಾಗಿ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿ, ಭಾರತಕ್ಕೆ ನಿರಂತರವಾಗಿ ಹೊಸ ಅವಕಾಶಗಳು ಬರುತ್ತಿವೆ'' ಎಂದರು.
''ಜಗತ್ತು ಎರಡು ಬಣಗಳಾಗಿ ವಿಭಜಿಸಲ್ಪಟ್ಟಿರುವ ಸಮಯದಲ್ಲಿ, ಭಾರತವು ಮಾನವೀಯತೆಯ ಸ್ವತಂತ್ರ ನಿಲುವನ್ನು ತೆಗೆದುಕೊಳ್ಳಬಹುದು. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುಂಚೂಣಿಯಲ್ಲಿ ಇರಿಸಿದೆ,'' ಎಂದು ಹೇಳಿದರು.

ಬಿಜೆಪಿಯ 42 ನೇ ಸಂಸ್ಥಾಪನಾ ದಿನ
ಏಪ್ರಿಲ್ 7 ರಿಂದ 20ರ ವರೆಗೆ ದೇಶಾದ್ಯಂತ ಸಭೆ ಆಯೋಜನೆ ಮಾಡಲಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಸಭೆ, ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಹಿರಿಯ ನಾಯಕರೂ ಆಗಿರುವ ಅರುಣ್ ಸಿಂಗ್ ಮಾಹಿತಿ ನೀಡಿದ್ದಾರೆ. ಸಂಸ್ಥಾಪನಾ ದಿನದಂದು, ಬಿಜೆಪಿಯು ಜನ ಸಾಮಾನ್ಯರಿಂದ ಅಲ್ಪ ಪ್ರಮಾಣ ದೇಣಿಗೆ ಅಭಿಯಾನವನ್ನು ಪ್ರಾರಂಭಿಸಿದೆ. ಜನತೆಯಿಂದ 5 ರೂ.ಗಳನ್ನು ದೇಣಿಗೆಯಾಗಿ ಪಕ್ಷ ಪಡೆಯುತ್ತಿದೆ.
ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ. ಭಾರತದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯು 1980ರಲ್ಲಿ ಜನ್ಮ ತಾಳಿದೆ. 4 ದಶಕಗಳ ಹಿಂದೆ ಆರಂಭವಾದ ಪಕ್ಷವನ್ನು ಹಲವು ನಾಯಕರು ಕಾರ್ಯ ಮುನ್ನಡೆಸಿಕೊಂಡು ಬಂದಿದ್ದಾರೆ. ಹಲವು ಹಿರಿ- ಕಿರಿಯ ನಾಯಕರು ಸಂಘಟಿಸಿದ ಬಿಜೆಪಿ ಇದೀಗ ಪ್ರಮುಖ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ ಎಂದು ಅರುಣ್ ಸಿಂಗ್ ಹೇಳಿದರು.

ಭಾರತದ 75 ನೇ ಸ್ವಾತಂತ್ರ್ಯದ ಅಮೃತಕಾಲ
''ಇದು ಭಾರತದ 75 ನೇ ಸ್ವಾತಂತ್ರ್ಯದ ಅಮೃತಕಾಲ. ಅದಕ್ಕಾಗಿಯೇ ನಾವು ಸ್ಥಳೀಯ [ಉತ್ಪನ್ನಗಳನ್ನು] ಜಾಗತಿಕ [ಪ್ರಮಾಣದಲ್ಲಿ] ತೆಗೆದುಕೊಂಡು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಬೇಕು. ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವ ಬಿಜೆಪಿಯು 'ಏಕ ಭಾರತ, ಶ್ರೇಷ್ಠ ಭಾರತ (ಒಂದು ಭಾರತ, ಅತ್ಯುತ್ತಮ ಭಾರತ)' ಎಂಬ ತನ್ನ ಧ್ಯೇಯವಾಕ್ಯವನ್ನು ನಿರಂತರವಾಗಿ ಬಲಪಡಿಸುತ್ತಿದೆ,'' ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತವು ಇತ್ತೀಚೆಗೆ USD 400 ಬಿಲಿಯನ್ ರಫ್ತು ಗುರಿಯನ್ನು ಪೂರೈಸಿದೆ,. "ಸಾಂಕ್ರಾಮಿಕ ರೋಗದ ನಡುವೆ ಈ ಸಾಧನೆಯು ಭಾರತದ ಉನ್ನತ ಸಾಮರ್ಥ್ಯಗಳನ್ನು ತೋರಿಸುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತೀಯರು ಹಸಿವಿನಿಂದ ಮಲಗಬಾರದು
100 ವರ್ಷಗಳಲ್ಲಿ ಅತಿದೊಡ್ಡ ಜಾಗತಿಕ ಬೆದರಿಕೆಯ ನಡುವೆ ಸಮಾಜದ ಬಡ ವರ್ಗದ 80 ಕೋಟಿ ಜನರಿಗೆ ಭಾರತ ಉಚಿತ ಪಡಿತರವನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಯಾವುದೇ ಭಾರತೀಯರು ಹಸಿವಿನಿಂದ ಮಲಗಬಾರದು ಎಂದು ಖಚಿತಪಡಿಸಿಕೊಳ್ಳಲು ಕೇಂದ್ರವು ಸುಮಾರು 3.5 ಲಕ್ಷ ಕೋಟಿ ಖರ್ಚು ಮಾಡುತ್ತಿದೆ ಎಂದು ತಿಳಿಸಿದರು. ಬಿಜೆಪಿ ನೇತೃತ್ವದ ಸರ್ಕಾರದ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' ಮಂತ್ರವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.
|
ವಿಪಕ್ಷಗಳ ಮೇಲೆ ಮೋದಿ ಕಿಡಿ
"ಅಧಿಕಾರದಲ್ಲಿದ್ದರೂ ಭಾರತವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬ ನಂಬಿಕೆಗೆ ಜನರು ರಾಜೀನಾಮೆ ನೀಡಿದ ಸಮಯವಿತ್ತು. ಆದರೆ ಇಂದು ಭಾರತವು ಕ್ಷಿಪ್ರಗತಿಯಲ್ಲಿ ಮುನ್ನಡೆಯುತ್ತಿದೆ ಎಂದು ಪ್ರತಿಯೊಬ್ಬ ಭಾರತೀಯನು ಹೆಮ್ಮೆಯಿಂದ ಹೇಳುತ್ತಾನೆ,'' ಎಂದು ಹೇಳಿದರು.
'ದಶಕಗಳ ಕಾಲ ಕೆಲವು ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ಕೆಲವರಿಗೆ ಕಲ್ಯಾಣ ಭರವಸೆ ನೀಡಿ ಬಹುಸಂಖ್ಯಾತರನ್ನು ಸಂಕಷ್ಟದಲ್ಲಿರಿಸುತ್ತಿದ್ದವು. ತಾರತಮ್ಯ ಮತ್ತು ಭ್ರಷ್ಟಾಚಾರ ವೋಟ್ ಬ್ಯಾಂಕ್ ರಾಜಕಾರಣದ ಫಲಿತಾಂಶವಾಗಿದೆ. ಆದರೆ ಬಿಜೆಪಿ ಅಂತಹ ರಾಜಕೀಯವನ್ನು ಸ್ಪಷ್ಟ ಮತ್ತು ಶುದ್ಧ ಉದ್ದೇಶಗಳೊಂದಿಗೆ ಎದುರಿಸಿ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.












Click it and Unblock the Notifications