ಬೆಂಗಾಳದಿಂದ ಬೆಂಗಳೂರು : ನಕಲಿ ನೋಟು ಜಾಲ ವಿಸ್ತರಿಸಿದ್ದ ಅಕ್ಬರ್
ನವದೆಹಲಿ, ಅಕ್ಟೋಬರ್ 19: ರಾಷ್ಟ್ರೀಯ ತನಿಖಾ ದಳ(ಎನ್ಐಎ) ದವರು ಇತ್ತೀಚೆಗೆ ಮೊಹಮ್ಮದ್ ಅಕ್ಬರ್ ಎಂಬಾತನನ್ನು ನಕಲಿ ನೋಟು ಜಾಲ ಪ್ರಕರಣದಲ್ಲಿ ಬಂಧಿಸಿದ್ದರು.
ವಿಶಾಖಪಟ್ಟಣಂನಲ್ಲಿ 2015ರಲ್ಲಿ ಬಂಧಿತನಾಗಿದ್ದ ಸದ್ದಾಂ ಹುಸೇನ್ ಎಂಬಾತನ ಜಾಲಕ್ಕೂ ಅಕ್ಬರ್ ಜಾಲಕ್ಕೂ ಸಂಪರ್ಕವಿರುವ ಬಗ್ಗೆ ಎನ್ಐಎ ಖಚಿತಪಡಿಸಿದೆ. ಸದಾಂನಿಂದ 5,01,500 ರು ಮೌಲ್ಯದ ಉತ್ತಮ ಗುಣಮಟ್ಟದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಪಶ್ಚಿಮ ಬಂಗಾಳದ ಮಾಲ್ಡದಿಂದ ಬೆಂಗಳೂರಿನ ತನಕ ಜಾಲ ವಿಸ್ತರಿಸಿದ್ದು ಸದ್ದಾಂ, ಇದಕ್ಕೆ ಅಮಿರುಲ್ ಹಕ್ ನಿರ್ದೇಶಕ ನಾಗಿದ್ದ. ಇದನ್ನು ಬೆಂಗಳೂರಿನಲ್ಲಿ ಹಂಚಿಕೆ ಮಾಡುವ ಕೆಲಸ ನಂತರ ನನಗೆ ಸಿಕ್ಕಿತು ಎಂದು ಅಕ್ಬರ್ ಹೇಳಿದ್ದಾನೆ. ಅಂತಾರಾಷ್ಟ್ರೀಯ ಗಡಿಭಾಗಗಳಲ್ಲಿ Fake Indian Currency Note (ಎಫ್ಐಸಿಎನ್) ಹಂಚುತ್ತಿದ್ದರು.

2007ರಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಬಂದ ಅಕ್ಬರ್, ಹೂ ಮಾರಾಟಗಾರರ ಜತೆ ಸೇರಿ ಅಂಗಡಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಎಫ್ ಐಸಿಎನ್ ವ್ಯವಹಾರಕ್ಕೆ ಈತನನ್ನು ದೂಡಿದ್ದು ಅದೇ ಹಕೀಂ, ಈ ಹಕೀಂ ಬೇರೆ ಯಾರು ಅಲ್ಲ ಅಕ್ಬರ್ ಅಲಿಯ ಅಂಕಲ್.
ಅಕ್ಬರ್ ಅಲಿ ನಂತರ ಬೆಂಗಳೂರಿನಲ್ಲಿ ಎಫ್ ಐ ಸಿಎನ್ ಗ್ಯಾಂಗ್ ರೂಪಿಸಿ, ಜಾಲವನ್ನು ವಿಸ್ತರಣೆ ಮಾಡಿದ. ಮಾಲ್ಡದಿಂದ ಬೆಂಗಳೂರಿಗೆ ಈ ಜಾಲವನ್ನು ಬೆಳೆಸಿದ.
ತನಿಖೆ ಕೈಗೊಂಡಾಗ ಮಾಲ್ಡ ಹಾಗೂ ಬೆಂಗಳೂರಿನ ಬ್ಯಾಂಕ್ ಖಾತೆಗಳಲ್ಲಿ ನಕಲಿ ನೋಟುಗಳನ್ನು ಜಮೆ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ತೀವ್ರಗೊಂಡಿದ್ದು, ಗ್ಯಾಂಗಿನ ಇತರೆ ಸದಸ್ಯರ ಹೆಸರಗಳು ಬಹಿರಂಗಗೊಳ್ಳುತ್ತಿದೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?












Click it and Unblock the Notifications