ಬರಾಕ್ ಒಬಾಮ ಹೊಸ ಪುಸ್ತಕದಲ್ಲಿ ರಾಹುಲ್ ಗಾಂಧಿ ಬಗ್ಗೆ ಲೇವಡಿ
ನವದೆಹಲಿ, ನವೆಂಬರ್ 12: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೊಸ ಪುಸ್ತಕ 'ಎ ಪ್ರಾಮಿಸ್ಡ್ ಲ್ಯಾಂಡ್' ಈ ವಾರ ಪುಸ್ತಕ ಮಾರುಕಟ್ಟೆಯನ್ನು ಪ್ರವೇಶಿಸಿದೆ. 'ಡ್ರೀಮ್ಸ್ ಫ್ರಂ ಮೈ ಫಾದರ್', 'ದಿ ಅಡಿಕಸಿ ಆಫ್ ಹೋಪ್' ಮತ್ತು 'ಚೇಂಜ್ ವಿ ಕ್ಯಾನ್ ಬಿಲೀವ್ ಇನ್' ಎಂಬ ಕೃತಿಗಳನ್ನು ರಚಿಸಿದ್ದ ಒಬಾಮಾ, ಮತ್ತೊಂದು ಪುಸ್ತಕ ಹೊರತಂದಿದ್ದಾರೆ.
ಆಸಕ್ತಿಕರ ಸಂಗತಿಯೆಂದರೆ ಅವರ ಈ ಪುಸ್ತಕದಲ್ಲಿ ಯುಪಿಎ ಸರ್ಕಾರದಲ್ಲಿ ಎರಡು ಬಾರಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.
'ಎ ಪ್ರಾಮಿಸ್ಡ್ ಲ್ಯಾಂಡ್' ಕೃತಿಯಲ್ಲಿ ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸಿರುವ ಒಬಾಮಾ, 'ರಾಹುಲ್ ಗಾಂಧಿ ದಿಗಿಲಿನ, ರೂಪುಗೊಳ್ಳದ ಗುಣವನ್ನು ಹೊಂದಿದ್ದಾರೆ. ಅವರು ವಿದ್ಯಾರ್ಥಿಯಾಗಿದ್ದರೆ ಕೋರ್ಸ್ ಕೆಲಸ ಮುಗಿಸಿ ಶಿಕ್ಷಕರಿಂದ ಮೆಚ್ಚಿಸಿಕೊಳ್ಳಲು ಬಯಸಿರುವ ಆದರೆ ಬುದ್ಧಿಮತ್ತೆ ಅಥವಾ ವಿಷಯದಲ್ಲಿ ಪರಿಣತನಾಗುವ ಹಂಬಲದ ಕೊರತೆಯುಳ್ಳವರಂತೆ ಕಾಣಿಸುತ್ತಾರೆ' ಎಂದು ಬರೆದಿದ್ದಾರೆ.

ಲೇವಡಿ, ವಿರೋಧ
ಒಬಾಮಾ ಅವರ ಪುಸ್ತಕದಲ್ಲಿನ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿ ಅವರ ಸಾಮರ್ಥ್ಯವನ್ನು ಅತ್ಯಂತ ವಿಧೇಯವಾಗಿ ಒಬಾಮಾ ಅಣಕಿಸಿದ್ದಾರೆ ಎಂದು ರಾಹುಲ್ ಸೈದ್ಧಾಂತಿಕ ವಿರೋಧಿಗಳು ಟೀಕಿಸಿದ್ದಾರೆ. ಇನ್ನೊಂದೆಡೆ ಅನೇಕರು ಒಬಾಮಾ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬಾಮಾ ಮೇಲಿನ ಗೌರವ ಇದರಿಂದ ಕಳೆದುಹೋಯಿತು ಎಂದಿದ್ದಾರೆ.

ಮನಮೋಹನ್ ಸಿಂಗ್ ಭಾವುಕ
ಇನ್ನೊಂದೆಡೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಬಗ್ಗೆಯೂ ಒಬಾಮಾ ಉಲ್ಲೇಖಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು ಭಾವಪೂರ್ಣ ಸ್ವಭಾವದ ವ್ಯಕ್ತಿಯಂತೆ ಕಂಡುಬಂದಿದ್ದಾರೆ ಎಂದು ಅವರು ಬರೆದಿದ್ದಾರೆ.

ಬೈಡನ್ ಯೋಗ್ಯ ವ್ಯಕ್ತಿ
ಒಬಾಮಾ ಅವರ ಹೊಸ ಪುಸ್ತಕವು ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರನ್ನು ಸಹ ಉಲ್ಲೇಖಿಸಿದೆ. ತಮ್ಮ ಮಾಜಿ ಉಪಾಧ್ಯಕ್ಷರಾಗಿದ್ದ ಬೈಡನ್ ಅವರು ಬಹಳ ಯೋಗ್ಯ ಮನುಷ್ಯ. ತಮ್ಮ ಕಡೆಯಿಂದ ನೀಡಬೇಕಿರುವುದನ್ನು ಸಲ್ಲಿಸದೆ ಇದ್ದರೆ ತಪ್ಪಾಗುತ್ತದೆ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.

ರಾಜಕೀಯ ನಿಲುವು
ಇದೇ ರೀತಿ ಒಬಾಮಾ ಅವರು ತಮ್ಮ ಪುಸ್ತಕದಲ್ಲಿ ಅನೇಕ ನಾಯಕರ ಹೆಸರನ್ನು ಮತ್ತು ಅವರ ಸ್ವಭಾವವನ್ನು ವರ್ಣಿಸಿದ್ದಾರೆ. ಈ ಪುಸ್ತಕವು ಅವರ ವೈಯಕ್ತಿಕ ಜೀವನಕ್ಕಿಂತಲೂ ಅವರ ರಾಜಕೀಯ ನಿಲುವುಗಳ ಮೇಲೆ ಹೆಚ್ಚು ಗಮನ ಹರಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪುಸ್ತಕ ವಿಮರ್ಶೆ ಹೇಳಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications