70 ವರ್ಷಗಳ ಬಳಿಕ 'ಭಾರತ-ಬಾಂಗ್ಲಾದೇಶ' ರೈಲು ಸಂಪರ್ಕ, 5 ಮುಖ್ಯಾಂಶಗಳು
ನವದೆಹಲಿ, ನವೆಂಬರ್ 01: ಸುಮಾರು 70 ವರ್ಷಗಳ (ಏಳು ದಶಕ) ಭಾರತ ಈಶಾನ್ಯ ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರ- ಬಾಂಗ್ಲಾದೇಶಕ್ಕೆ ರೈಲು ಸಂಪರ್ಕ ಸೇವೆ ಸಾಧಿಸಲಾಗಿದೆ. ಈ ಮೂಲಕ ಭಾರತೀಯ ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಈ ನೂತನ ರೈಲು ಸಂಪರ್ಕವು ಅಖೌರಾ-ಅಗರ್ತಲಾ ಗಡಿಯಾಚೆಗಿನ ರೈಲು ಸಂಪರ್ಕ, ಕೋಲ್ಕತ್ತಾ ಮತ್ತು ಅಗರ್ತಲಾ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಈ ಭಾಗದ ವ್ಯಾಪಾರ ವಹೀವಾಟನ್ನು ಸಧಾರಿಸಲಿದೆ.
ಹಾಗಾದರೆ ಬಹುವರ್ಷಗಳ ಬಳಿಕ ಎರಡು ದೇಶಗಳ ಮಧ್ಯೆ ಆರಂಭವಾದ ಈ ಭಾರತ-ಬಾಂಗ್ಲಾದೇಶ ಮಧ್ಯೆದ ರೈಲು ಪ್ರಯಾಣ ಹೇಗಿರಲಿದೆ ಎಂಬ ಐದು ಪ್ರಮುಖ ಅಂಶಗನ್ನು ಇಲ್ಲಿ ತಿಳಿಯೋಣ.

* ಕೋಲ್ಕತ್ತಾದಿಂದ ತ್ರಿಪುರಾದ ರಾಜಧಾನಿ ಅಗರ್ತಲಾಕ್ಕೆ ರೈಲು ಮಾರ್ಗದ ಮೂಲಕ ಪ್ರಯಾಣಿಸುವವರು ಉತ್ತರ ಪಶ್ಚಿಮ ಬಂಗಾಳದ ಮೂಲಕ ಅಸ್ಸಾಂನ ಗುವಾಹಟಿಗೆ ಸರ್ಕ್ಯೂಟ್ ಮಾರ್ಗದಲ್ಲಿ ಪ್ರಯಾಣ ಮಾಡಬಹುದಾಗಿದೆ. ಅಲ್ಲಿಂದ ಮುಂದೆ ದಕ್ಷಿಣದ ಕಡೆಗೆ ರೈಲು ಪ್ರಯಾಣ ಮಾಡಿ ತ್ರಿಪುರಾ ಕಡೆಗೆ ತಿರುಗುತ್ತದೆ. ಈ ಪ್ರಯಾಣದ ಸಮಯ ಸುಮಾರು 38 ಗಂಟೆಗಳು ಎಂದು ಇಲಾಖೆ ತಿಳಿಸಿದೆ.
* ಅಖೌರಾ-ಅಗರ್ತಲಾ ಕ್ರಾಸ್-ಬಾರ್ಡರ್ ರೈಲು ಸಂಪರ್ಕ ಸಂಪರ್ಕ ಇದೆ. ನೂತನ ಮಾರ್ಗದ ರೈಲುಗಳು ಕೋಲ್ಕತ್ತಾದಿಂದ ಬಾಂಗ್ಲಾದೇಶದ ಮೂಲಕ ಅಗರ್ತಲಾಕ್ಕೆ ಚಲಿಸಬಹುದು. ಬಾಂಗ್ಲಾ ದೇಶಕ್ಕೆ ಭಾರತದ ಈಶಾನ್ಯ ಮತ್ತು ದೇಶದ ಉಳಿದ ಭಾಗಗಳ ನಡುವಿನ ಭೂಪ್ರದೇಶದ ವ್ಯಾಪ್ತಿಯಲ್ಲಿ ಸಂಪರ್ಕಿಸುತ್ತದೆ.
* ಬಾಂಗ್ಲಾ ದೇಶಕ್ಕೆ ಸಂಪರ್ಕಿಸುವ ಈ ರೈಲು ಪ್ರಯಾಣದ ಸಮಯವನ್ನು ಹಿಂದಿನ 38 ಗಂಟೆಗಳಿಂದ 12 ಗಂಟೆಗೆ ಇಳಿಕೆ ಮಾಡುತ್ತದೆ. ಹೀಗಾಗಿ ಇದು ಪ್ರಯಾಣಿಕರ ದಟ್ಟಣೆಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಳದ ನಿರೀಕ್ಷೆ ಇದೆ.
* ದಿನಗಳ ಕಾಲ ಈ ಮಾರ್ಗದಲ್ಲಿ ಪ್ರಯಾಣಿಸುವ ಮಾರ್ಗ ಬಿಟ್ಟು ಪ್ರಯಾಣಿಕರ ಇನ್ನುಮುಂದೆ ಈ ಹೊಸ ಮಾರ್ಗವನ್ನು ಹೆಚ್ಚು ಪ್ರಾಯೋಗಿಕ ಮತ್ತು ಅನುಕೂಲಕರವೆಂದು ಬಳಕೆ ಮಾಡಲು ಶುರು ಮಾಡುತ್ತಾರೆ.
* ಭಾರತ-ಬಾಂಗ್ಲಾ ಈ ರೈಲು ಸಂಪರ್ಕದಿಂದ ಪ್ರಯಾಣಿಕರಿಗೆ ಮಾತ್ರವಲ್ಲದೇ ಬೃಹತ್ ಪ್ರಮಾಣದ ಸರಕುಗಳನ್ನು ಸಾಗಿಸಬಹುದಾಗಿದೆ. ಇದರಿಂದ ವ್ಯಾಪಾರವು ಈ ಪ್ರದೇಶದಲ್ಲಿ ಅಭಿವೃದ್ಧಿ ಹೊಂದಲಿವೆ. ಈ ರೈಲು ಸಂಪರ್ಕದ ಒಟ್ಟ ಉದ್ದ 12.24 ಕಿಮೀ ಇದೆ. ಬಾಂಗ್ಲಾದೇಶದಲ್ಲಿ 6.78 ಕಿಮೀ ಡ್ಯುಯಲ್ ಗೇಜ್ ರೈಲು ಮಾರ್ಗ ಮತ್ತು ತ್ರಿಪುರಾದಲ್ಲಿ 5.46 ಕಿಮೀ. ಉದ್ದವಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
-
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು












Click it and Unblock the Notifications