Get Updates
Get notified of breaking news, exclusive insights, and must-see stories!

Jagan Mohan Reddy: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

ಅಮರಾವತಿ, ಜುಲೈ. 12: ಟಿಡಿಪಿ ಶಾಸಕರೊಬ್ಬರ ದೂರಿನ ಮೇರೆಗೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿದಂತೆ ಐವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಸಿಐಡಿ ಮಾಜಿ ಮುಖ್ಯಸ್ಥ ಪಿವಿ ಸುನೀಲ್ ಕುಮಾರ್ ಮತ್ತು ಗುಪ್ತಚರ ಮಾಜಿ ಮುಖ್ಯಸ್ಥ ಪಿಎಸ್ಆರ್ ಆಂಜನೇಯುಲು ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಉಂಡಿ ಶಾಸಕ ಕೆ ರಘುರಾಮ ಕೃಷ್ಣರಾಜು ಅವರು ತಮ್ಮ ದೂರಿನಲ್ಲಿ 2021 ರಲ್ಲಿ ಸಿಐಡಿ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Attempt to murder case filed against Former Andhra Pradesh CM YS Jagan Mohan Reddy

ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ತಮ್ಮ ವಿರುದ್ಧ ಕ್ರಿಮಿನಲ್ "ಪಿತೂರಿ" ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಹಿಂದೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಲ್ಲಿದ್ದ ಕೆ ರಘುರಾಮ ಕೃಷ್ಣರಾಜು, ಬಂಧನದ ನಂತರ ಅವರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿಲ್ಲ. ಸಿಐಡಿಗೆ ಟ್ರಾನ್ಸಿಟ್ ಅರೆಸ್ಟ್ ವಾರೆಂಟ್ ಇಲ್ಲ ಎಂದು ಅವರು ಪ್ರತಿಪಾದಿಸಿದರು ಮತ್ತು ಅವರನ್ನು ಗುಂಟೂರಿನ ಏಜೆನ್ಸಿಯ ಕಚೇರಿಗೆ ಸ್ಥಳಾಂತರಿಸಲಾಯಿತು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

"ಮೇ 14, 2021 ರಂದು, ನನ್ನನ್ನು ಸರಿಯಾದ ಪ್ರಕ್ರಿಯೆಯಿಲ್ಲದೆ ಬಂಧಿಸಲಾಯಿತು. ನನ್ನನ್ನು ಬೆದರಿಸಲಾಯಿತು, ಕಾನೂನುಬಾಹಿರವಾಗಿ ದೈಹಿಕವಾಗಿ ಪೊಲೀಸ್ ವಾಹನದೊಳಗೆ ಎಳೆದುಕೊಂಡು ಹೋಗಲಾಯಿತು. ಅದೇ ರಾತ್ರಿ ಬಲವಂತವಾಗಿ ಗುಂಟೂರಿಗೆ ಕರೆದೊಯ್ಯಲಾಯಿತು" ಎಂದು ಕೆ ರಘುರಾಮ ಕೃಷ್ಣರಾಜು ದೂರಿನಲ್ಲಿ ಆರೋಪಿಸಿದ್ದಾರೆ.

Attempt to murder case filed against Former Andhra Pradesh CM YS Jagan Mohan Reddy

ಪಿವಿ ಸುನೀಲ್ ಕುಮಾರ್, ಪಿಎಸ್ಆರ್ ಆಂಜನೇಯುಲು ಮತ್ತು ಇತರ ಪೊಲೀಸ್ ಅಧಿಕಾರಿಗಳು ಬೆಲ್ಟ್ ಮತ್ತು ದೊಣ್ಣೆಗಳಿಂದ ನನ್ನನ್ನು ಥಳಿಸಿದರು ಮತ್ತು ಹೃದಯ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳಲು ಸಹ ಅವಕಾಶ ನೀಡಲಿಲ್ಲ ಎಂದು ಕೆ ರಘುರಾಮ ಕೃಷ್ಣರಾಜು ಹೇಳಿದ್ದಾರೆ. ಇದರ ಜೊತೆಗೆ ತಾನು ಬೈಪಾಸ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಅಧಿಕಾರಿಗಳಿಗೆ ತಿಳಿದಿತ್ತು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಕೆಲವು ಅಧಿಕಾರಿಗಳು ಆತನ ಎದೆಯ ಮೇಲೆ ಕುಳಿತುಕೊಂಡು ತನ್ನನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾರೆ. ನನಗೆ ಹೃದಯಾಘಾತವಾಗುವಂತೆ ಒತ್ತಡ ಹೇರಿದರು ಎಂದು ಅವರು ಆರೋಪಿಸಿದ್ದಾರೆ. ತನ್ನ ಫೋನ್ ತೆಗೆದುಕೊಂಡು ಹೋಗಲಾಯಿತು ಮತ್ತು ಅದರ ಪಾಸ್‌ವರ್ಡ್ ಅನ್ನು ಬಹಿರಂಗಪಡಿಸುವವರೆಗೂ ಅವರನ್ನು ಥಳಿಸಲಾಯಿತು ಎಂದು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಥಳಿಸಿದ ನಂತರ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯೆ ಪ್ರಭಾವತಿ ಅವರಿಗೆ ಕಳಪೆ ಚಿಕಿತ್ಸೆ ನೀಡಿದರು ಎಂದು ಟಿಡಿಪಿ ಶಾಸಕರು ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳ ನಿದರ್ಶನದ ಮೇರೆಗೆ ವೈದ್ಯರು ನಕಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಅಲ್ಲದೇ ಅಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಟೀಕಿಸಿದರೆ ಕೊಲೆ ಮಾಡುವುದಾಗಿ ಪಿವಿ ಸುನೀಲ್ ಕುಮಾರ್ ಬೆದರಿಕೆ ಹಾಕಿದ್ದರು ಎಂದಿರುವ ಅವರು, ಈ ಪ್ರಕರಣದಲ್ಲಿ ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಯ ಮಾಜಿ ಅಧೀಕ್ಷಕಿ ಪ್ರಭಾವತಿ, ನಿವೃತ್ತ ಪೊಲೀಸ್ ಅಧಿಕಾರಿ ವಿಜಯ್ ಪಾಲ್ ಅವರನ್ನೂ ಹೆಸರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+