ಪ್ರವಾಹದ ಲಾಭ ಪಡೆದ ಮಿಷನರಿಗಳು: ಎಗ್ಗಿಲ್ಲದೆ ಸಾಗಿದೆ ಮತಾಂತರದ ಹಾವಳಿ
ನವದೆಹಲಿ, ಸೆಪ್ಟೆಂಬರ್ 9: ಮಹತ್ವದ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಚಾಂಡ್ವಾಕ್ ಪೊಲೀಸರು ಕ್ರೈಸ್ತ ಧರ್ಮದ ಮತಾಂತರದ ಪ್ರಚಾರ ನಡೆಸುತ್ತಿದ್ದ 271 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಿಂದುತ್ವದ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿದ್ದ ಮತ್ತು ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಜನರಿಗೆ ಆಮಿಷವೊಡ್ಡುತ್ತಿದ್ದ ಆರೋಪ ದಾಖಲಿಸಲಾಗಿದೆ.
ಇಂತಹ ಘಟನೆಗಳು ದೇಶದಲ್ಲಿ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ. ಮಿಷನರಿಗಳು ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಪ್ರದೇಶಗಳಿಗೆ ತೆರಳಿ ಮತಾಂತರದ ಚಟುವಟಿಕೆಗಳನ್ನು ನಡೆಸುವುದು ಮಿಷನರಿಗಳ ಗುರಿ. ಈಗ ಕೇರಳ ಮತ್ತು ಕೊಡಗು ಈ ಸಮಸ್ಯೆಯ ಇತ್ತೀಚಿನ ಬಲಿಪಶುಗಳಾಗುತ್ತಿವೆ ಎನ್ನುತ್ತವೆ ಸುದ್ದಿಸಂಸ್ಥೆ ಮೂಲಗಳು.
ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ತೆಲಂಗಾಣಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಚಟುವಟಿಕೆ ಅತ್ಯಧಿಕ ಪ್ರಮಾಣದಲ್ಲಿದೆ ಎಂದು ಅಂಕಿ ಅಂಶಗಳು ದೃಢಪಡಿಸುತ್ತವೆ. ಪೂರ್ವದ ರಾಜ್ಯಗಳಲ್ಲಿ ಇದು ಇನ್ನಷ್ಟು ಮಿತಿ ಮೀರಿದೆ.

ಭಾರತದಲ್ಲಿ ಧರ್ಮ ಪರಿವರ್ತನೆ
ವರ್ಷಗಳು ಕಳೆದಂತೆ ಈ ಮಿಷಿನರಿಗಳು ಹೆಚ್ಚು ಕಾರ್ಯೋನ್ಮುಖವಾಗಿವೆ. ಸಮಾಜದ ಕೇಂದ್ರಭಾಗಕ್ಕೆ ನುಗ್ಗಲು ಪ್ರಯತ್ನಿಸುತ್ತಿರುವ ಅವರು ವಂಚನೆಗೆ ಒಳಗಾಗುವಂತಹ ಜನರ ಮೇಲೆ ಬಲವಂತವಾಗಿ ಕ್ರೈಸ್ತ ಧರ್ಮವನ್ನು ಹೇರುತ್ತಿದ್ದಾರೆ ಎನ್ನುತ್ತವೆ ಮೂಲಗಳು.
ಉದಾಹರಣೆಗೆ, ಬೈಬಲ್ ಅನ್ನು ಭಾರತದ ಪ್ರತಿ ಸ್ಥಳೀಯ ಭಾಷೆಗೂ ಭಾಷಾಂತರಿಸಿ ಅದನ್ನು ಹಂಚಲಾಗುತ್ತಿದೆ.
ಇತ್ತೀಚೆಗೆ ಕೊಡವ ಭಾಷೆಯಲ್ಲಿ ಬೈಬಲ್ನ ಚಿತ್ರಗಳು ಹರಿದಾಡುತ್ತಿರುವುದು ಪತ್ತೆಯಾಗಿತ್ತು. ಕೊಡಗು ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದಾಗ ಸಾವಿರಾರು ಜನರು ವಂಚನೆಗೆ ಒಳಗಾಗುತ್ತಿದ್ದರು.
ಇದೇ ಪರಿಸ್ಥಿತಿ ಪ್ರವಾಹದಿಂದ ತತ್ತರಿಸಿದ ಕೇರಳದಲ್ಲಿಯೂ ಇದೆ. ಸುನಾಮಿ ನಂತರ ಜನರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿಯೂ ಮತಾಂತರ ನಡೆದ ಪ್ರಕರಣಗಳು ವರದಿಯಾಗಿದ್ದವು.

ಕ್ಷೋಭೆ ಮೂಡಿಸುವ ಗುರಿ
ರಾಜ್ಯದಲ್ಲಿನ ಮಿಷನರಿ ಚಟುವಟಿಕೆಗಳ ಬಗ್ಗೆ ವರದಿ ನೀಡುವಂತೆ ಮಧ್ಯಪ್ರದೇಶ ಸರ್ಕಾರ ಕೇಳಿದೆ. ಏಳು ಸದಸ್ಯರ ಸಮಿತಿಯು 77 ಕೇಂದ್ರಗಳ 700 ಗ್ರಾಮಗಳಿಗೆ ತೆರಳಿ 1 ಸಾವಿರಕ್ಕೂ ಅಧಿಕ ಮಂದಿಯ ಮಾತುಗಳನ್ನು ಆಲಿಸಿದೆ.
ಕ್ರೈಸ್ತ ಧರ್ಮವನ್ನು ವಿಸ್ತರಿಸುವ ಸಮಾನ ಜಾಗತಿಕ ನೀತಿಯ ಭಾಗವಾಗಿ, ಆಧ್ಯಾತ್ಮಿಕ ಮಾರ್ಗದಲ್ಲಿ ಅಲ್ಲದೆ ಪಾಶ್ಚಿಮಾತ್ಯ ಪ್ರಾಬಲ್ಯವನ್ನು ಮರುಸ್ಥಾಪಿಸಲು ಭಾರತದಲ್ಲಿ ಧರ್ಮ ಪರಿವರ್ತನೆಯ ಚಟುವಟಿಕೆಗಳು ನಡೆಯುತ್ತಿವೆ.
ಕ್ರೈಸ್ತ ಧರ್ಮೇತರ ಸಮಾಜಗಳಲ್ಲಿನ ಸಮಗ್ರತೆಯಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುವುದು ಇದರ ಉದ್ದೇಶ. ಇದಕ್ಕಾಗಿ ಲೆಕ್ಕವಿಲ್ಲದಷ್ಟು ವಿದೇಶಿ ಹಣ ಭಾರತಕ್ಕೆ ಹರಿದುಬರುತ್ತಿದೆ. ಈ ಹಣವನ್ನು ಬಳಸಿಕೊಂಡು ವಿವಿಧ ಸಂಸ್ಥೆಗಳು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿಯನ್ನು ಮತಾಂತರಗೊಳಿಸುವಲ್ಲಿ ಯಶಸ್ವಿಯಾಗಿವೆ. ಈ ಚಟುವಟಿಕೆಗಳು ದೇಶದ ಭದ್ರತೆಗೂ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ವಿಭಿನ್ನ ತಂತ್ರಗಳು
ಮತಾಂತರವನ್ನು ಹೇರಲು ಮಿಷನರಿಗಳು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿವೆ. ನೈಸರ್ಗಿಕ ವಿಕೋಪಗಳು ಸಂಭವಿಸಿದ ಸ್ಥಳಗಳಿಗೆ ತಕ್ಷಣವೇ ತಲುಪುತ್ತಾರೆ ಮತ್ತು ಅಲ್ಲಿನ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಾರೆ. ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವಾಗುವ ನೆಪದಲ್ಲಿ ದೊಡ್ಡ ಪ್ರಮಾಣದ ಹಣ ಹರಿದುಬರುತ್ತದೆ. ಅದು ಧಾರ್ಮಿಕ ಕಾರ್ಯದ ಉದ್ದೇಶಕ್ಕೆ ಬಳಕೆಯಾಗುತ್ತದೆ.
ಕೊಡಗಿನಲ್ಲಿ ಈ ಹಿಂದೆಯೂ ಮತಾಂತರದ ಇಂತಹ ಪ್ರಯತ್ನಗಳು ನಡೆದಿದ್ದವು. ಆದರೆ, ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಅವಘಡ ಸಂಭವಿಸಿರುವುದು ಇದೇ ಮೊದಲು. ಅದರರ್ಥ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ.

ಹಿಂದೆಯೂ ನಡೆದಿದ್ದವು
ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 'ಕೂರ್ಗಿ ಕ್ರಿಶ್ಚಿಯನ್ ಫೆಲೋಷಿಪ್' ಎಂಬ ಚಟುವಟಿಕೆಯೊಂದು ಕಾಣಿಸಿಕೊಂಡಿತ್ತು. ಮಾಧ್ಯಮಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದ್ದಂತೆಯೇ ಆ ಅಂಗಡಿಯನ್ನು ಮುಚ್ಚಲಾಯಿತು.
2010ರಲ್ಲಿ ಪೊನ್ನಂಪೇಟೆಯಲ್ಲಿ ಮತಾಂತರದ ಚಟುವಟಿಕೆ ಪತ್ತೆಯಾಗಿತ್ತು. ಕಾಲೋನಿಯೊಂದರಲ್ಲಿ 13 ಮಂದಿ ಮುಗ್ಧ ಆದಿವಾಸಿಗಳನ್ನು ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದರು. ನಗದು ಹಣ ಮತ್ತು ಉಡುಗೊರೆಗಳ ಆಮಿಷವೊಡ್ಡುತ್ತಿದ್ದರು. ಅವರಿಗೆ ಹುಣಸೂರು, ಹಾಸನ ಮತ್ತು ಇತರೆ ಭಾಗಗಳಿಂದ ಜನರು ನೆರವು ನೀಡುತ್ತಿದ್ದರು.
ಕೊಡಗು ಮತ್ತು ಕೇರಳಗಳಲ್ಲಿನ ತಂತ್ರವೂ ಇದೇ ಸ್ವರೂಪದ್ದು. ಕೇರಳದಲ್ಲಿ ಇಂತಹ ಘಟನೆಗಳು ಸಾಕಷ್ಟು ವರದಿಯಾಗಿದ್ದವು. ಆದರಿಲ್ಲಿ ಪ್ರವಾಹ ಸಂತ್ರಸ್ತರು ಸುಲಭವಾಗಿ ಸಿಗುತ್ತಿದ್ದಾರೆ.

ಜನರ ಮನವೊಲಿಕೆ
ಚಾಂಡ್ವಾಕ್ ಚೌಕ್ ಪ್ರಕರಣದಲ್ಲಿ, ಜೌನ್ಪುರ, ವಾರಣಾಸಿ, ಅಜಮ್ಗಡ ಮತ್ತು ಘಾಜಿಪುರ ಜಿಲ್ಲೆಗಳಲ್ಲಿ ಕೆಲವು ವರ್ಷಗಳಿಂದ ಜನರನ್ನು ಬಾಲ್ದೆಹ್ ಗ್ರಾಮದಲ್ಲಿರುವ ಚರ್ಚ್ಗೆ ಬಂದು ಅಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಮನವೊಲಿಸಲಾಗುತ್ತಿದೆ ಎಂದು ವಕೀಲ ಬ್ರಿಜೇಶ್ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ.
ಕ್ರೈಸ್ತ ಧರ್ಮದೆಡೆಗೆ ಸೆಳೆಯಲು ಮತಾಂತರಿಗಳು ಹಿಂದುತ್ವದ ಬಗ್ಗೆ ವಿವಿಧ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ.
ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಮಾಡಲು ಜನರನ್ನು ಪ್ರಭಾವಿಸುವ ಸಲುವಾಗಿ ನಿಷೇಧಿತ ಔಷಧಗಳನ್ನು ಹಂಚುತ್ತಿದ್ದಾರೆ.

ಹಿಂದುತ್ವದ ಬಗ್ಗೆ ಅಪಪ್ರಚಾರ
ಅಲ್ಪಸಂಖ್ಯಾತ ಧರ್ಮದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಏಳು ಸದಸ್ಯರ ಸಮಿತಿ ವರದಿ ನೀಡಿದೆ. ಭಾರತದಲ್ಲಿನ ಮಿಷನರಿ ಸಂಘಟನೆಗಳಲ್ಲಿ ಅಮೆರಿಕದ ಸಿಬ್ಬಂದಿಯ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ.
ಪತ್ರಿಕೆ, ರೇಡಿಯೋ ಮತ್ತು ಟೆಲಿವಿಷನ್ಗಳಿಂದ ಸಾಮೂಹಿಕ ಮತಾಂತರಕ್ಕೆ ಮುಕ್ತವಾಗಿರುವ ದೇಶಗಳಲ್ಲಿ ಅಂತಾರಾಷ್ಟ್ರೀಯ ಮಿಷನರಿ ಕೌನ್ಸಿಲ್ಗಳ ಉದ್ದೇಶಪೂರ್ವಕ ನೀತಿಯ ಫಲವಾಗಿ ಈ ಹೆಚ್ಚಳ ಉಂಟಾಗಿದೆ.
ಧರ್ಮ, ಜಾತಿ, ಸಮುದಾಯ, ಭಾಷೆ, ಜನಾಂಗಗಳಲ್ಲಿನ ಲೋಪದ ಎಳೆಗಳನ್ನು ಹುಡುಕಿ ಅದನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುವುದು ಮಿಷನರಿಗಳ ಗುರಿಯಾಗಿದೆ. ಈ ಲೋಪದೋಷಗಳನ್ನು ಹುಡುಕುವ ಮತಾಂತರ ಕಾರ್ಖಾನೆಗಳನ್ನು ರಚಿಸಲಾಗಿದೆ. ಇವು ಮತಾಂತರವಾಗದ ಪ್ರಬಲ ಸಮುದಾಯಗಳ ನಡುವೆ ದ್ವೇಷ ಮತ್ತು ವಿಭಜನೆ ಮೂಡಿಸುವುದು ಅವುಗಳ ಗುರಿ.

ಈಶಾನ್ಯ ರಾಜ್ಯಗಳಲ್ಲಿ ಕ್ರಿಯಾಶೀಲ
ಶಸ್ತ್ರಾಸ್ತ್ರ ಹೋರಾಟಗಳು ತೀವ್ರವಾಗಿರುವ ಈಶಾನ್ಯ ರಾಜ್ಯಗಳಲ್ಲಿ ಈ ಪ್ರಯತ್ನಗಳು ಹೆಚ್ಚು ಫಲಪ್ರದವಾಗಿವೆ. ಈ ಸಮಸ್ಯೆ ಎಷ್ಟು ಆಳವಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೇ ಭಾರತ ಸರ್ಕಾರಕ್ಕೆ ಸಾಕಷ್ಟು ಸಮಯ ಬೇಕಾಗಿದೆ. ಏಕೆಂದರೆ, ಈ ಹೋರಾಟ, ಸಂಘರ್ಷಗಳು ರಾಜಕೀಯ ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದೇ ಮೇಲ್ನೋಟಕ್ಕೆ ಕಂಡುಬರುತ್ತವೆ. ಆದರೆ, ಅದರಾಚೆಗೆ ಬೃಹತ್ ಸಂಚು ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.
ಸಂಘರ್ಷಗಳು ಅಥವಾ ಹೋರಾಟಗಳನ್ನು ನಡೆಸುವುದು ಮಾತ್ರವಲ್ಲ, ಇಂತಹ ವಿವಿಧ ಸನ್ನಿವೇಶಗಳನ್ನು ಬಳಸಿಕೊಂಡು ಮತಾಂತರ ಕಾರ್ಖಾನೆಗಳು ತಮ್ಮ ಗುರಿ ಈಡೇರಿಸಲು 24*7 ಕ್ರಿಯಾಶೀಲವಾಗುತ್ತಿವೆ. ಕ್ರೈಸ್ತ ಧರ್ಮವು ಅತ್ಯಂತ ಪ್ರಭಾವಶಾಲಿ ಧರ್ಮ ಎಂಬ ಭಾವನೆಯನ್ನು ಅನೇಕ ಹಿಂದೂಗಳ ಮನಸ್ಸಿನಲ್ಲಿ ಮೂಡಿಸಿ ಅವರನ್ನು ಮತಾಂತರಿಸಲಾಗಿದೆ. ಹಿಂದುತ್ವ ಕೆಟ್ಟದ್ದು ಎಂದು ನಂಬಿಸುವ ವ್ಯವಸ್ಥಿತ ಪಿತೂರಿಯೂ ಎಗ್ಗಿಲ್ಲದೆ ನಡೆಯುತ್ತಿದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್












Click it and Unblock the Notifications