Get Updates
Get notified of breaking news, exclusive insights, and must-see stories!

ಸಿಎಂ ಭಾವಚಿತ್ರದ ಬಾಕ್ಸ್‌ಗಳಲ್ಲಿದ್ದ ಲಕ್ಷಾಂತರ ಮೌಲ್ಯದ 5,472 ಸೀರೆ ಜಪ್ತಿ

ಆಂಧ್ರಪ್ರದೇಶ, ಮಾರ್ಚ್ 22: ಆಂಧ್ರಪ್ರದೇಶ ರಾಜ್ಯದ ಪಲ್ನಾಡು ಜಿಲ್ಲೆಯಲ್ಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಲೇಬಲ್ ಇದ್ದ ಸಾವಿರಾರು ಸೀರೆಗಳನ್ನು ಚುನಾವಣೆ ಆಯೋಗದ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದೆ. ಈ ಕುರಿತು ಪೋಲೀಸ್ ಮೂಲಗಳು ಮಾಹಿತಿ ನೀಡಿವೆ.

ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಲೇಬಲ್ ಹೊಂದಿರುವ 5,472 ಸೀರೆಗಳನ್ನು ಚುನಾವಣಾ ಆಯೋಗ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಆಯೋಜನೆಗೊಂಡು ಪೊಲೀಸರು ಸೇರಿದಂತೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ತಂಡ ಪಲ್ನಾಡು ಜಿಲ್ಲೆಯಲ್ಲಿನ ಕೈಗಾರಿಕಾ ಪ್ರದೇಶದಲ್ಲಿನ ಗೋದಾಮಿನ ಮೇಲೆ ಸಂಜೆ 5.30ಕ್ಕೆ ದಾಳಿ ನಡೆಸಿದರು.

Andhra Pradesh Jagan Mohan Reddy s YSRCP label boxes worth 5472 sarees worth Rs 33 crore seized

ಇಲ್ಲಿ ಸಂಗ್ರಹಿಸಿ ಇಡಲಾಗಿದ್ದ ಲಕ್ಷಾಂತರ ರೂಪಾಯಿಯ ಸಾವಿರಾರು ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

₹33.6 ಲಕ್ಷ ಮೌಲ್ಯದ ಸೀರೆಗಳು ವಶ

ಸುಳಿವಿನ ಮೇರೆಗೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಪೊಲೀಸರು ಕೈಗಾರಿಕಾ ಪ್ರದೇಶದಲ್ಲಿನ ಗೋದಾಮು (ಗೋದಾಮು) ಮೇಲೆ ದಾಳಿ ನಡೆಸಿದರು. ಅವರು ₹33.6 ಲಕ್ಷ ಮೌಲ್ಯದ YSRCP ಲೇಬಲ್ ಹೊಂದಿರುವ 5,472 ಸೀರೆಗಳನ್ನು ಜಪ್ತಿ ಮಾಡಿದರೆಂದು ಪಿಟಿಐ ವರದಿ ಮಾಡಿದೆ.

ಗೋದಾಮಿನಲ್ಲಿ 48 ಸೀರೆಗಳಿದ್ದ 114 ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರತಿಯೊಂದು ಸೀರೆ ಪೆಟ್ಟಿಗೆಯ ಮೇಲೆ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಚಿತ್ರವಿದೆ ಎಂದು ಸ್ಕ್ವಾಡ್ ಸಿಬ್ಬಂದಿ ತಿಳಿಸಿದರು.

Andhra Pradesh Jagan Mohan Reddy s YSRCP label boxes worth 5472 sarees worth Rs 33 crore seized

ಗುತ್ತಿಗೆ ಪಡೆದಿದ್ದ ಗೋದಾಮಿನಲ್ಲಿ ಸೀರೆ ಸಂಗ್ರಹ

ಪೆರುಮಲ್ಲ ಗೋಪಾಲ್ ಅವರ ಒಡೆತನದಲ್ಲಿರುವ ಈ ಗೋದಾಮನ್ನು ವೈಎಸ್‌ಆರ್‌ಸಿಪಿ ಮುಖಂಡ ಸತ್ತೇನಪಲ್ಲಿಯ ಬಾವಿಸೆಟ್ಟಿ ವೆಂಕಟ ಸುಬ್ರಮಣ್ಯಂ ಎಂಬವರಿಗೆ ಗುತ್ತಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಪೊಲೀಸರು ಇನ್ನೂ ಬಂಧಿಸಿಲ್ಲ ಆದರೆ ಸುಬ್ರಮಣ್ಯಂ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಅವರು ಐಪಿಸಿ ಸೆಕ್ಷನ್ 188 ಮತ್ತು 171 (ಇ) ಅಡಿಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ.

₹176 ಕೋಟಿ ನಗದು ಜಪ್ತಿ

ಸೀರೆ ಹೊರತುಪಡಿಸಿ, ಆಂಧ್ರ ಪ್ರದೇಶದಲ್ಲಿ ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜನವರಿ 1 ರಿಂದ ಚುನಾವಣಾ ಆಯೋಗ ₹176 ಕೋಟಿ ಮೌಲ್ಯದ ನಗದು, ಬೆಲೆಬಾಳುವ ಲೋಹಗಳು, ಮಾದಕ ದ್ರವ್ಯ ಮತ್ತು ಇನ್ನಿತರ ವಸ್ತುಗಳನ್ನು ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಮುಖೇಶ್ ಕುಮಾರ್ ಮೀನಾ ಗುರುವಾರ ಪ್ರಕಾಶಂ, ಪಲ್ನಾಡು ಮತ್ತು ನಂದ್ಯಾಲ್‌ನ ಪೊಲೀಸ್ ವರಿಷ್ಠಾಧಿಕಾರಿಗಳನ್ನು (ಎಸ್‌ಪಿ) ಕರೆಸಿಕೊಂಡು ತಮ್ಮ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಘಟನೆಗಳ ಕುರಿತು ಮಾಹಿತಿ ನೀಡುವಂತೆ ಕೇಳಿದ್ದಾರೆ.

ಆಂಧ್ರಪ್ರದೇಶದ 175 ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಮೇ 13 ರಂದು ನಿಗದಿ ಆಗಿದೆ. ಈ ಚುನಾವಣೆಗಳ ಫಲಿತಾಂಶ ಜೂನ್ 4 ರಂದು ಪ್ರಕಟಗೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+