ಸಾಮಾಜಿಕ ನ್ಯಾಯದ ಹರಿಕಾರ ಬಾಬಾ ಸಾಹೇಬ್ ಗೆ ಗಣ್ಯರ ನಮನ
ನವದೆಹಲಿ, ಏಪ್ರಿಲ್ 14: ಸಾಮಾಜಿಕ ಅಸಮತೋಲನದ ವಿರುದ್ಧ ಹೋರಾಡಿದ, ಜಾತ್ಯಾತೀತ ನಾಯಕ ಡಾ. ಭೀಮರಾವ್ ಅಂಬೇಡ್ಕರ್(14 ಏಪ್ರಿಲ್ 1891 - 6 ಡಿಸೆಂಬರ್ 1956) ಅವರ ಜನ್ಮದಿನವನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಭಾರತೀಯ ಸಂವಿಧಾನದ ನಿರ್ಮಾತೃರಾಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಇನ್ನು ಕೆಲವೇ ಮತ, ಜಾತಿಯ ಸ್ವತ್ತು ಎಂಬಂತೆ ನೋಡುತ್ತಿರಬಹುದು. ಆದರೆ ಅವರು ಯಾವೊಂದು ಜಾತಿಗೂ, ಮತಕ್ಕೂ ಸೀಮತಿತರಲ್ಲ. ಒಬ್ಬ ಸಂವಿಧಾನ ಶಿಲ್ಪಿಯಾಗಿ, ಕಡುಬಡತನದಲ್ಲೂ ಓದಿ ಸ್ನಾತಕೋತ್ತರ ಪದವಿ ಗಳಿಸಿ, ಅದಮ್ಯ ಪುಸ್ತಕ ಪ್ರೇಮಿಯಾಗಿ, ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದುನಿಂತ ಹೋರಾಟಗಾರರಾಗಿ, ಅಸ್ಪೃಶ್ಯತೆಯೆಂಬ ಅನಿಷ್ಟವನ್ನು ಹೊಡೆದೋಡಿಸಲು ಕಂಕಣಬದ್ಧರಾದ ಸಾಮಾಜಿಕ ಸುಧಾರಕರಾಗಿ ಅವರು ಇಡೀ ದೇಶದ ಸ್ವತ್ತು.
ಇಂದು ದೇಶದಾದ್ಯಂತ ಅಂಬೇಡ್ಕರ್ ಪ್ರತಿಮೆಯನ್ನು ದ್ವಂಸಮಾಡುವಂಥ ಘಟನೆಗಳು ಹಲವೆಡೆ ನಡೆದಿವೆ. ಒಂದು ಜಾತಿ, ಪಂಥದ ನಾಯಕ ಎಂಬಂತೆ ಅವರನ್ನು ಬಿಂಬಿಸುವ, ಅಥವಾ ಅವರ ಕೊಡುಗೆಯನ್ನು ಪೂರ್ವಗ್ರಹದ ತಕ್ಕಡಿಯಲ್ಲಿಟ್ಟು ತೂಗುವ ಪ್ರಯತ್ನ ಮಾಡದೆ ಮಹಾನ್ ನಾಯಕನನ್ನು ಪ್ರತಿಯೊಬ್ಬರೂ ಗೌರವಿಸುವ ಅಗತ್ಯವಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
|
ಬಹುಮುಖಿ ವ್ಯಕ್ತಿತ್ವದ ಬಾಬಾ ಸಾಹೇಬ್
ಆಧುನಿಕ ಭಾರತವನ್ನು ಜಾತಿ ಮತ್ತು ಪೂರ್ವಗ್ರಹದಿಂದ ಮುಕ್ತವಾಗಿಸಲು ಜೀವನದುದ್ದಕ್ಕೂ ಸಾಕಷ್ಟು ಬೆಲೆತೆತ್ತ ಬಹುಮುಖೀ ವ್ಯಕ್ತಿತ್ವ ಬಾಬಾ ಸಾಹೇಬ್ ಅವರದು. ಸೌಲಭ್ಯವಂಚಿತರಿಗೆ ಮತ್ತು ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಗುರಿಯೂ ಅವರ ಮನಸ್ಸಿನಲ್ಲಿತ್ತು. ಅಂಥ ಅಮೋಘ ವ್ಯಕ್ತಿಯ ಜನ್ಮದಿನದಂದು ಅವರಿಗೆ ನನ್ನ ನಮನ ಎಂದಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್.
|
ನಾವು ಅವರ ಋಣದಲ್ಲಿದ್ದೇವೆ
ಪೂಜ್ಯ ಬಾಬಾ ಸಾಹೇಬ್ ಅವರು ಈ ಸಮಾಜದ ಕಡುಬಡವ ಮತ್ತು ಸಾಧಾರಣ ವರ್ಗದ ಜನರಿಗೆ ಹೊಸ ಭರವಸೆಯನ್ನು ನೀಡಿದವರು. ನಮ್ಮ ಸಂವಿಧಾನವನ್ನು ನಿರ್ಮಿಸುವಲ್ಲಿ ಅವರು ನೀಡಿದ ಅನನ್ಯ ಕೊಡುಗೆಯನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ನಾವು ಅವರ ಋಣದಲ್ಲಿದ್ದೇವೆ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಎಂದು ಬಾಬಾ ಸಾಹೇಬ್ ರನ್ನು ತುಂಬು ಮನಸ್ಸಿನಿಂದ ನೆನೆದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
— Siddaramaiah (@siddaramaiah) April 14, 2018 |
ಸಾಮಾಜಿಕ ನ್ಯಾಯದ ಹರಿಕಾರ
ಬಾಬಾಸಾಹೇಬ್ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರ, ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ . ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳನ್ನು ಶೋಷಿತ ವರ್ಗಕ್ಕೆ ನೀಡಿದ ಯುಗಪುರುಷ. ಈ ಕಾರಣಕ್ಕಾಗಿಯೇ ಇಂದು ಜಗತ್ತು ಅಂಬೇಡ್ಕರ್ ಅವರಿಗೆ ತಲೆಬಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಜನಮಾನಸದಲ್ಲಿ ಅವರು ಜೀವಂತ
ಡಾ.ಬಿ ಆರ್ ಅಂಬೇಡ್ಕರ್ ಅವರ ಜಯಂತಿಯಂದು ನಾನು ಅವರಿಗೆ ತಲೆಬಾಗುತ್ತೇನೆ. ಸಮಾಜದ ಬಡ ಮತ್ತು ಸಾಮಾನ್ಯ ವರ್ಗದ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಸಂವಿಧಾನ ಶಿಲ್ಪಿಗೆ ನನ್ನ ನಮನ. ಅವರು ತಮ್ಮ ಸೇವಾಕಾರ್ಯದಿಂದ ಕೋಟಿ ಕೋಟಿ ಭಾರತೀಯರ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂದಿದ್ದಾರೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications