Get Updates
Get notified of breaking news, exclusive insights, and must-see stories!

ನಾಯಿ ಮರಿಗಳಿಗೆ ವಿಷ ಹಾಕಿ ಕೊಂದ: ಬೆಂಕಿ ಹಾಕಿ ಸುಟ್ಟ ರಾಕ್ಷಸ!

ಗೋರಖ್‌ಪುರ: ಮನುಷ್ಯನು ಅಭಿವೃದ್ಧಿ ಹೊಂದಿದಂತೆ ಮಾನವೀಯತೆ ಕೂಡ ಮರೆಯಾಗಿ ಹೋಗುತ್ತಿದೆ. ಅದರಲ್ಲೂ ಮೂಖ ಪ್ರಾಣಿಗಳ ಮೇಲೆ ಪದೇ ಪದೆ ದಾಳಿಗಳು ನಡೆಯುವ, ಮನಕಲಕುವ ಘಟನೆಗಳು ವರದಿ ಆಗುತ್ತಿವೆ. ಉತ್ತರ ಪ್ರದೇಶದಲ್ಲಿ ಇದೇ ರೀತಿ ಬರೋಬ್ಬರಿ 7 ನಾಯಿ ಮರಿಗಳಿಗೆ ವಿಷ ಹಾಕಿದ ರಕ್ಕಸನೊಬ್ಬ, ಮುಗ್ಧ ಮರಿಗಳನ್ನು ಕೊಂದಿದ್ದಾನೆ.

ಹೌದು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಾಯಿಯೊಂದು 7 ನಾಯಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಅಲ್ಲೊಬ್ಬ ಮನುಷ್ಯತ್ವ ಇಲ್ಲದವನ ಕಣ್ಣಿಗೆ ನಾಯಿ ಮರಿಗಳು ಕಂಡವು. ಕೂಡಲೇ ಆತನ ತಲೆಯಲ್ಲಿ ಮನುಷ್ಯತ್ವ ಮೀರಿದ ಆಲೋಚನೆ ಮೂಡಿತ್ತು. ಅಂದಹಾಗೆ ಉತ್ತರ ಪ್ರದೇಶದ ಗೋರಖ್‌ಪುರದ ಸ್ಥಳೀಯ ವ್ಯಾಪಾರಿ ನಾಯಿ ಮತ್ತು ಅದರ ಏಳು ಮರಿಗಳಿಗೆ ವಿಷ ಹಾಕಿ ಕೊಂದಿದ್ದಾನೆ. ನಂತರ ಅವುಗಳ ಮೃತದೇಹವನ್ನು ಸುಟ್ಟು ಹಾಕಿರುವ ಭೀಕರ ಘಟನೆ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Allegedly Mother Dog and 7 Puppies poisoned in UP

ನಾಯಿ ಕೊಲ್ಲಲು ಕಾರಣ ಏನು?

ಇನ್ನು ನಾಯಿ ಮತ್ತು ಅದರ 7 ಮರಿಗಳಿಗೆ ವಿಷ ಹಾಕಿ ಕೊಂದ ಘಟನೆ ಗೊತ್ತಾಗುತ್ತಿದ್ದಂತೆ ಜನರು ರೊಚ್ಚಿಗೆದ್ದಿದ್ದಾರೆ. ಸ್ಥಳೀಯರು ಈ ಘಟನೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯಿಂದ ಜನರು ಕೂಡ ವಿಚಲಿತರಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕೂಡಲೇ ಜಿಲ್ಲಾ ಪೊಲೀಸ್ ಘಟಕಕ್ಕೆ ತೆರಳಿ, ವ್ಯಾಪಾರಿ ಗುರುಮುಖ್ ಗಂಗಾರಾಮ್ ವಿರುದ್ಧ ಐಪಿಸಿ ಸೆಕ್ಷನ್ 428 ಮತ್ತು 429 ಅಡಿ ಕೇಸು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 428 ಮತ್ತು 429 ಪ್ರಕಾರ ಕೊಲೆ ಹಾಗೂ ವಿಷಪ್ರಾಶನದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದ್ರೆ ಈ ಘಟನೆಗೆ ಕಾರಣ ಏನು ಎಂಬುದನ್ನು ತಿಳಿದು ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಬಿಸ್ಕೆಟ್ ಒಳಗೆ ವಿಷ ಹಾಕಿದ್ದ!

ತನಿಖೆ ನಡೆಸಿರುವ ಅಧಿಕಾರಿಗಳ ಪ್ರಕಾರ, ಆರೋಪಿ ಗಂಗಾರಾಮ್ ಇಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದಾರೆ. ಕಳೆದ ಶುಕ್ರವಾರ ಇದೇ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ನಾಯಿ ಒಟ್ಟು 7 ನಾಯಿ ಮರಿಗಳಿಗೆ ಜನ್ಮ ನೀಡಿತ್ತು. ಆಗಲೇ ಅವನ ತಲೆಯಲ್ಲಿ ನಾಯಿ ಮತ್ತು ಅದರ ಮರಿಗಳನ್ನು ಹತ್ಯೆ ಮಾಡುವ ಕೆಟ್ಟ ಆಲೋಚನೆ ಹೊಳೆದಿತ್ತು. ಮೃತ ನಾಯಿ ಹಾಗೂ ಮರಿಗಳಿಗೆ ವಿಷ ಬೆರೆಸಿದ್ದ ಬಿಸ್ಕೆಟ್ ಹಾಕಿದ್ದಾನೆ ಆರೋಪಿ. ಬಿಸ್ಕೆಟ್ ತಿಂದ ನಾಯಿ ಮತ್ತು ಮರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯ ಸಂಪೂರ್ಣ ದೃಶ್ಯವು ರೆಕಾರ್ಡ್ ಆಗಿದೆ. ಅಲ್ಲದೆ ನಾಯಿಗಳನ್ನ ಕೊಂದ ಆರೋಪಿ ಅವುಗಳ ದೇಹಕ್ಕೆ ಬೆಂಕಿ ಕೂಡ ಹಚ್ಚಿದ್ದಾನಂತೆ.

ಒಟ್ನಲ್ಲಿ ಮಾನವೀಯತೆ ಮರೆತು ಭೀಕರ ಕೃತ್ಯ ನಡೆಸಿದವನ ವಿರುದ್ಧ ಸ್ಥಳೀಯರು ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ಗಂಗಾರಾಮ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಭಾರಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಏನೂ ಅರಿಯದ ಮುಗ್ಧ ನಾಯಿ ಮರಿಗಳ ಹತ್ಯೆಯ ಬಗ್ಗೆ ಜನರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. ಹಾಗೇ ಆರೋಪಿ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಮುಂದೆ ಈ ಪ್ರಕರಣ ಯಾವ ರೀತಿ ತಿರುವು ಪಡೆಯುತ್ತೆ, ತಪ್ಪು ಮಾಡಿದ ವ್ಯಕ್ತಿಗೆ ನಿಜವಾಗೂ ಶಿಕ್ಷೆ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+