ಅಪ್ಪನನ್ನೇ ಗೌರವಿಸದವನು ಇನ್ಯಾರನ್ನು ಗೌರವಿಸೋಕೆ ಸಾಧ್ಯ?: ಮುಲಾಯಂ
ಸ್ವಂತ ತಂದೆಯನ್ನೇ ಗೌರವಿಸದ ಮಗ ಇನ್ಯಾರನ್ನು ಗೌರವಿಸುವುದಕ್ಕೆ ಸಾಧ್ಯ? ಎಂದು ತಮ್ಮ ಮಗ ಅಖಿಲೇಶ್ ಯಾದವ್ ಮೇಲಿನ ಅಸಮಾಧಾನವನ್ನು ಮುಲಾಯಂ ಸಿಂಗ್ ಯಾದವ್ ಸಾರ್ವಜನಿಕವಾಗಿಯೇ ಹೊರಹಾಕಿದ್ದಾರೆ.
ಲಕ್ನೊ, ಏಪ್ರಿಲ್ 1: ಸ್ವಂತ ತಂದೆಯನ್ನೇ ಗೌರವಿಸದ ಮಗ ಇನ್ಯಾರನ್ನು ಗೌರವಿಸುವುದಕ್ಕೆ ಸಾಧ್ಯ? ಎಂದು ತಮ್ಮ ಮಗ ಅಖಿಲೇಶ್ ಯಾದವ್ ಮೇಲಿನ ಅಸಮಾಧಾನವನ್ನು ಮುಲಾಯಂ ಸಿಂಗ್ ಯಾದವ್ ಸಾರ್ವಜನಿಕವಾಗಿಯೇ ಹೊರಹಾಕಿದ್ದಾರೆ.[ಪುತ್ರ ವ್ಯಾಮೋಹ ನಿರಂತರ: ನನ್ನ ಮಗನೇ ರಾಜ್ಯದ ಮುಂದಿನ ಸಿಎಂ]
ಉತ್ತರ ಪ್ರದೇಶದ ಮೈನ್ ಪುರಿ ಎಂಬಲ್ಲಿ ನಡೆದ ಸಮಾಜವಾದಿ ಪಕ್ಷದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅವರು, 'ತಮ್ಮ ಮಗನ ಇತ್ತೀಚಿನ ನಡೆಯ ಮೇಲಿನ ಬೇಸರವನ್ನು ಹೊರಹಾಕಿದರು. ನನ್ನ ಮಗನನ್ನು ಉತ್ತರ ಪ್ರದೇಶದಂಥ ದೊಡ್ಡ ರಾಜ್ಯಕ್ಕೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಜೀವಂತವಾಗಿರುವ ಯಾವ ತಂದೆ ತಾನೇ ತನ್ನ ಮಗನಿಗಾಗಿ ಇಂಥ ತ್ಯಾಗ ಮಾಡುತ್ತಾನೆ? ಆದರೆ ನಾನು ಈ ಯಾವುದನ್ನೂ ಲೆಕ್ಕಿಸದೆ ನನ್ನ ಮಗನಿಗಾಗಿ ಆ ಸ್ಥಾನವನ್ನು ಬಿಟ್ಟುಕೊಟ್ಟೆ. ಆದರೆ ಅವನು ಮಾಡಿದ್ದೇನು?' ಎಂದು ನೋವಿನಿಂದ ಹೇಳಿದರು.[ತಾವೂ ಮುಳುಗಿ ಎಸ್ಪಿಯನ್ನೂ ಮುಳುಗಿಸಿದ ರಾಹುಲ್!]

'ನನ್ನ ಮಗನಿಂದ ಬೇಸರವಾದಷ್ಟು ನನಗೆ ಬೇರೆ ಯಾರಿಂದಲೂ ಬೇಸರವಾಗಿಲ್ಲ' ಎಂದು ತಮ್ಮ ಅಳಲನ್ನು ಕಾರ್ಯಕರ್ತರೆದುರು ತೋಡಿಕೊಂಡರು. ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯ ಹೀನಾಯ ಸೋಲಿನಲ್ಲೂ ಕುಟುಂಬದ ಈ ಎಲ್ಲ ನಡೆಯ ಪ್ರಭಾವ ಢಾಳಾಗಿ ಕಾಣುತ್ತಿತ್ತು ಎಂಬುದು ಅವರ ಮಾತಿನಿಂದ ಸ್ಫುಟವಾಗಿರುವುದು ಸತ್ಯ.[ಉತ್ತರ ಪ್ರದೇಶ ಮುಖ್ಯಮಂತ್ರಿ ಪಟ್ಟಕ್ಕೆ ಅಖಿಲೇಶ್ ರಾಜಿನಾಮೆ]
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications