ಟಾಯ್ಲೆಟ್ ಕ್ಲೀನ್ ಇಲ್ಲ ಅಂದಿದ್ದಕ್ಕೆ ಏರ್ ಏಷ್ಯಾ ಸಿಬ್ಬಂದಿಯಿಂದ ಅತ್ಯಾಚಾರದ ಬೆದರಿಕೆ!
ನವದೆಹಲಿ, ನವೆಂಬರ್ 11: ರಾಂಚಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಏಷ್ಯಾ ವಿಮಾನವೊಂದರಲ್ಲಿ ಟಾಯ್ಲೆಟ್ ಕ್ಲೀನ್ ಇಲ್ಲ ಎಂದು ಮಹಿಳಾ ಪ್ರಯಾಣಿಕರೊಬ್ಬರು ದೂರು ಹೇಳಿದ್ದಕ್ಕಾಗಿ ಮೂವರು ಏರ್ ಏಷ್ಯಾ ಸಿಬ್ಬಂದಿಗಳು ಮಹಿಳೆಗೆ ಅತ್ಯಾಚಾರದ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.
ಘಟನೆ ನವೆಂಬರ್ 3 ರಂದೇ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಮೂವರು ಏರ್ ಏಷ್ಯಾ ಸಿಬ್ಬಂದಿಗಳ ಮೇಲೆ ಅಸಭ್ಯ ವರ್ತನೆ ಮತ್ತು ಲೈಂಗಿಕ ದೌರ್ಜನ್ಯದ ದೂರು ನೀಡಿರುವುದರಿಂದ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇಂಥ ಹಲವು ಮುಜುಗರದ ಸನ್ನಿವೇಶ ಅನುಭವಿಸುವಂತಾಗಿದ್ದು, ವಿಮಾನ ಪ್ರಯಾಣದ ಅಭದ್ರತೆಯ ಬಗ್ಗೆ ಯೋಚಿಸಬೇಕಾದ ಜರೂತರತ್ತನ್ನು ಕೂಗಿಹೇಳಿದೆ.
|
ಅಲ್ಲಿ ನಡೆದಿದ್ದೇನು?
ರಾಂಚಿಯಿಂದ ಬೆಂಗಳೂರಿಗೆ ಹೊರಟಿದ್ದ ಮಹಿಳೆಯೊಬ್ಬರು ವಿಮಾನದಲ್ಲಿರುವ ಟಾಯ್ಲೆಟ್ ಸ್ವಚ್ಛವಾಗಿಲ್ಲ ಎಂದು ವಿಮಾನದಲ್ಲಿದ್ದ ಸಿಬ್ಬಂದಿಯೊಬ್ಬರಿಗೆ ದೂರು ನೀಡಿದರು. ಮಹಿಳೆ ದೂರು ನೀಡುತ್ತಿದ್ದಂತೆಯೇ ಸಿಬ್ಬಂದಿ ಆಕೆಗೇ ಹಿಂತಿರುಗಿ ಬೈದು, ಆಕೆಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಆ ಸಮಯದಲ್ಲಿ ಮಹಿಳೆಯ ಸಹಾಯಕ್ಕೆ ಇನ್ನೊಬ್ಬರು ಮಹಿಳೆ ಬಂದಿದ್ದಾರೆ. ಅವರಿಗೂ ಸಿಬ್ಬಂದಿ ಬೈದಿದ್ದಾರೆ.
|
ವಿಮಾನದಿಂದ ಆಚೆ ಹಾಕುವುದಾಗಿ ಬೆದರಿಕೆ!
"ಹೆಚ್ಚು ಮಾತನಾಡಿದರೆ ವಿಮಾನದಿಂದ ಆಚೆ ಹಾಕುವುದಾಗಿ ನನ್ನನ್ನು ಬೆದರಿಸಿದ್ದಾರೆ. ಬಾಯಿಮುಚ್ಚಿಕೊಂಡಿರದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಜೋರು ದನಿಯಲ್ಲಿ ಮಾತನಾಡಿದ್ದಾರೆ" ಎಂದು ಮಹಿಳೆ ಪೊಲೀಸರ ಮುಂದೆ ಅಲವತ್ತುಕೊಂಡಿದ್ದಾರೆ. ಸಿಬ್ಬಂದಿಗಳು ಪೊಲೀಸರ ಮುಂದೆಯೂ ಆಕೆಯನ್ನು ಹಿಯಾಳಿಸಿ ಮಾತನಾಡಿದ್ದಾರೆ.

ಬೆಂಗಳೂರಿನಲ್ಲೂ ಕಿರುಕುಳ
"ವಿಮಾನ ಬೆಂಗಳೂರು ತಲುಪಿದ ನಂತರ ಅಲ್ಲಿಯೂ ನನಗೆ ಕಿರುಕುಳ ನೀಡಿದ್ದಾರೆ. ಬೆಂಗಳೂರಿನ ಏರ್ ಏಷ್ಯಾ ಸಿಬ್ಬಂದಿಯೊಬ್ಬರು ತನ್ನನ್ನು ಅತ್ಯಾಚಾರ ಮಾಡುವುದಾಗಿಯೂ ಬೆದರಿಸಿದ್ದಾರೆ. ಮೂವರು ಸಿಬ್ಬಂದಿಗಳು ನನ್ನ ಸುತ್ತ ನಿಂತುಕೊಂಡು, ನಾವ್ಯಾರು ಅನ್ನೋದು ನಿನಗಿನ್ನೂ ಗೊತ್ತಿಲ್ಲ ಎಂದು ರೌಡಿಗಳಂತೆ ಪೋಸ್ ಕೊಟ್ಟಿದ್ದರು" ಎಂದೂ ಆಕೆ ಹೇಳಿಕೊಂದಿದ್ದಾರೆ.

ಮರುಕಳಿಸುತ್ತಿವೆ ಇಂಥ ಘಟನೆಗಳು
ಇತ್ತೀಚೆಗೆ ತಾನೇ, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿಯೊಬ್ಬ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಹಲ್ಲೆಗೊಳಗಾದ ವಿನಯ್ ಕತಿಯಾಲ್ ಎಂಬುವವರ ದೂರಿನ ಮೇಲೆ ಇಂಡಿಗೂ ವಿಮಾನ ಯಾನ ಆಡಳಿತ ಮಂಡಳಿ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ










Click it and Unblock the Notifications