ನೆಸ್ಲೆ ನಂತರ ಅಡಿಡಾಸ್ ಜತೆ ರಾಮ್ ದೇವ್ ಪೈಪೋಟಿ?
ಬೆಂಗಳೂರು, ನ.17: ಪತಂಜಲಿ ಆಟ್ಟಾ ನ್ಯೂಡಲ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬೆನ್ನಲ್ಲೇ ಯೋಗಭ್ಯಾಸಿಗಳು ಬಳಸುವ ದಿರಿಸಿನ ಬ್ರ್ಯಾಂಡ್ ಪರಿಚಯಿಸುವುದಾಗಿ ಯೋಗಗುರು ಬಾಬಾ ರಾಮ್ ದೇವ್ ಘೋಷಿಸಿದ್ದಾರೆ. ನೆಸ್ಲೆ ಮ್ಯಾಗಿ ಜೊತೆ ಪೈಪೋಟಿಗೆ ಇಳಿದಿರುವ ರಾಮ್ ದೇವ್ ಅವರು ಈಗ ಅಡಿಡಾಸ್ ಹಾಗೂ ನೈಕಿ ವಿರುದ್ಧ ತಮ್ಮ ಬ್ರ್ಯಾಂಡ್ ಹೊರ ತರಲಿದ್ದಾರೆ.
ಅಟ್ಟಾ ನ್ಯೂಡಲ್ಸ್ ನಂತರ ಯೋಗ ದಿರಿಸುಗಳ ಬ್ರ್ಯಾಂಡ್ ಆಮೇಲೆ ಕಡಿಮೆ ಬೆಲೆಯಲ್ಲಿ ಆರೋಗ್ಯಕರ ಪೇಯ, ಬೇಬಿ ಕೇರ್ ಅಲ್ಲದೆ ಸೌಂದರ್ಯವರ್ಧಕ ಉತ್ಪನ್ನಗಳನ್ನು ಹೊರ ತರಲು ಪತಂಜಲಿ ಸಂಸ್ಥೆ ಸಿದ್ಧವಾಗಿದೆ.
ಖಾದಿಗೆ ಬೆಲೆ ಸಿಗಬೇಕಿದೆ: ಖಾದಿಗೆ ಬೆಲೆ ಸಿಗಬೇಕಿದೆ ಹೀಗಾಗಿ ಖಾದಿಯಿಂದ ಮಾಡಿದ ಯೋಗದಿರಿಸುಗಳನ್ನು ಮಾಡಿ ಮಾರುಕಟ್ಟೆಗೆ ಬಿಡಲಾಗುವುದು. ದೇಶಿ ಉತ್ಪನ್ನಗಳನ್ನು ಹೆಚ್ಚೆಚ್ಚು ಬಳಸಿದರೆ ದೇಶದ ಆರ್ಥಿಕ ಪ್ರಗತಿ ದರ ಹೆಚ್ಚಾಗಲಿದೆ ಎಂದಿದ್ದಾರೆ.

ಪತಂಜಲಿ ಆಯುರ್ವೇದದ 250 ಗ್ರಾಂನಷ್ಟು ಜೇನುತುಪ್ಪದ ಬೆಲೆ 70 ರು ಮಾತ್ರ ಇದೆ. ನ್ಯೂಡಲ್ಸ್ ಕೂಡಾ 15 ರುನಂತೆ ನೀಡಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವುದು ನಮ್ಮ ಉದ್ದೇಶ ಎಂದರು.
ಪತಂಜಲಿ ಸಂಸ್ಥೆ ಈ ವರ್ಷ ಸುಮಾರು 2,000 ಕೋಟಿ ರು ಆದಾಯ ಗಳಿಕೆ ನಿರೀಕ್ಷೆಯಲ್ಲಿದೆ. ನ್ಯೂಡಲ್ಸ್ ಮಾರುಕಟ್ಟೆ ಹೆಚ್ಚಿಸಲು ಬಿಯಾನಿ ಸಮೂಹದೊಡನೆ ಒಪ್ಪಂದ ಮಾಡಿಕೊಂಡಿದ್ದು, ರಿಲಯನ್ಸ್ ಫ್ರೆಶ್, ಬಿಗ್ ಬಜಾರ್ ಹಾಗೂ ನೀಲ್ ಗಿರೀಸ್ ನಲ್ಲೂ ನ್ಯೂಡಲ್ಸ್ ಲಭ್ಯವಿದೆ.
ಕರ್ನಾಟಕದಲ್ಲೂ ಘಟಕ: ದೆಹಲಿ ಎನ್ ಸಿಆರ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು. ಹರ್ಯಾಣದ ವಿಶ್ವಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಪತಂಜಲಿ ಉತ್ಪನ್ನಗಳ ರಾಯಭಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ.
-
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ












Click it and Unblock the Notifications