Zomato: ಟೀಕೆಗಳ ಬಳಿಕ ಎಚ್ಚೆತ್ತ ಜೊಮ್ಯಾಟೋ; ಕೆಲವೆ ಗಂಟೆಗಳಲ್ಲಿ ಹಸಿರು ಡ್ರೆಸ್ ಕೋಡ್ ವಾಪಸ್!
ನವದೆಹಲಿ, ಮಾರ್ಚ್ 20: 'ಪ್ಯೂರ್ ವೆಜ್' ಬ್ರಾಂಡ್ ವಿತರಣಾ ಸೇವೆಗಳನ್ನು ಪ್ರಾರಂಭಿಸುವ ಜೊಮ್ಯಾಟೋ ಪ್ಲ್ಯಾನ್ಗೆ ಸಾಕಷ್ಟು ಪ್ರತಿಕ್ರಿಯೆ, ಮತ್ತು ಟೀಕೆಗಳು ಬಂದ ನಂತರ ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್ ಹೊಸ ಘೋಷಣೆ ಮಾಡಿದ್ದಾರೆ. ನಿನ್ನೆಯಷ್ಟೇ ಆರಂಭಿಸಿದ್ದ ಶುದ್ಧ ಸಸ್ಯಾಹಾರಿ ಸೇವೆಗಳ ಹಸಿರು ಡ್ರೆಸ್ ಕೋಡ್ಗೆ ಬಾಯ್ ಹೇಳಿದ್ದಾರೆ.
ಜೊಮ್ಯಾಟೋದ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್ಗೆ ಸಾಕಷ್ಟು ಟೀಕೆಗಳು ಬರುತ್ತಿವೆ. ಆದರೂ, ಶುದ್ಧ ಸಸ್ಯಹಾರಿ ಸರ್ವಿಸ್ ಮುಂದುವರೆಸಿರುವ ಸಂಸ್ಥೆ ಸಮವಸ್ತ್ರ ಮಾತ್ರ ಬದಲಾಯಿಸಿದೆ. ವೆಜ್, ನಾನ್ ವೆಜ್ ಎಲ್ಲಾ ಬಗೆಯ ಆಹಾರ ಡೆಲಿವರಿ ಮಾಡುವವರು ಕೂಡ ಕೆಂಪು ಸಮವಸ್ತ್ರ ಧರಿಸುತ್ತಾರೆ ಎಂದು ಹೇಳಿದೆ.

"ನಾವು ಸಸ್ಯಾಹಾರಿಗಳಿಗಾಗಿ ಸರ್ವಿಸ್ ಅನ್ನು ಮುಂದುವರಿಸಲಿದ್ದೇವೆ. ಹಸಿರು ಬಣ್ಣದ ಬಟ್ಟೆ ಧರಿಸಿ ಈ ಸರ್ವಿಸ್ ನೀಡುವ ಯೋಜನೆಯನ್ನು ವಾಪಸ್ ಪಡೆಯಲು ನಾವು ನಿರ್ಧರಿಸಿದ್ದೇವೆ. ನಮ್ಮ ಎಲ್ಲಾ ರೈಡರ್ಗಳು ನಮ್ಮ ನಿಯಮಿತ ಸರ್ವಿಸ್ ಮತ್ತು ಸಸ್ಯಾಹಾರಿಗಳಿಗಾಗಿ ಕೆಂಪು ಬಟ್ಟೆಯನ್ನೇ ಧರಿಸುತ್ತಾರೆ" ಎಂದು ಗೋಯಲ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ.
ಜೊಮ್ಯಾಟೋ ಪ್ಲಾಟ್ಫಾರ್ಮ್ ತನ್ನ ಗ್ರಾಹಕರಿಗೆ ಶುದ್ಧ ಸಸ್ಯಾಹಾರಿ ಆಹಾರದ ಆದ್ಯತೆಗಳೊಂದಿಗೆ ವಿತರಣೆಯನ್ನು ಸುಲಭಗೊಳಿಸಲು ವೆಜ್ ಮೋಡ್ ಅನ್ನು ಪ್ರಾರಂಭಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಬಂದಿದೆ. ಭಾರತದಲ್ಲಿ ತನ್ನ 100% ಸಸ್ಯಾಹಾರಿ ಗ್ರಾಹಕರಿಗೆ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್ ಅನ್ನು ಪರಿಚಯಿಸುವುದಾಗಿ ಘೋಷಿಸಿದೆ.

ಸಂಸ್ಥೆ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ತಮ್ಮ ಸಾಮಾಜಿಕ ಜಾಲತಾಣಗಲ್ಲಿ, ಜಾಗತಿಕವಾಗಿ ಭಾರತವು ಶೇಕಡಾವಾರು ಅತಿ ಹೆಚ್ಚು ಸಸ್ಯಾಹಾರಿಗಳನ್ನು ಹೊಂದಿದೆ ಮತ್ತು ಅವರ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಹೊಸ ಸರ್ವಿಸ್ ಅನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
"ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಸಸ್ಯಾಹಾರಿಗಳನ್ನು ಹೊಂದಿದೆ. ನಮಗೆ ಅವರಿಂದ ಸಿಕ್ಕ ಪ್ರಮುಖ ಪ್ರತಿಕ್ರಿಯೆಯೆಂದರೆ, ಅವರು ತಮ್ಮ ಆಹಾರವನ್ನು ಹೇಗೆ ಬೇಯಿಸುತ್ತಾರೆ ಎಂಬುದರ ಕುರಿತು ಅವರು ತುಂಬಾ ನಿರ್ದಿಷ್ಟವಾಗಿರುತ್ತಾರೆ. ದೇಶದ ಸಸ್ಯಾಹಾರಿಗಳಿಂದ ಬಂದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಅವರ ಆಹಾರದ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಇಂದು, 100 % ಸಸ್ಯಾಹಾರಿ ಆಹಾರದ ಆದ್ಯತೆಯನ್ನು ಹೊಂದಿರುವ ಗ್ರಾಹಕರಿಗಾಗಿ ಜೊಮಾಟೊದಲ್ಲಿ "ಶುದ್ಧ ವೆಜ್ ಫ್ಲೀಟ್" ಜೊತೆಗೆ "ಪ್ಯೂರ್ ವೆಜ್ ಮೋಡ್" ಅನ್ನು ಪ್ರಾರಂಭಿಸುತ್ತಿದ್ದೇವೆ" ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ.
ಇನ್ನು, ಹೊಸದಾಗಿ ಪ್ರಾರಂಭಿಸಲಾದ ಈ ಶುದ್ಧ ವೆಜ್ ಮೋಡ್ ಅಥವಾ ಪ್ಯೂರ್ ವೆಜ್ ಫ್ಲೀಟ್ ಸೇವೆಯು ಯಾವುದೇ ಧಾರ್ಮಿಕ ಅಥವಾ ರಾಜಕೀಯ ಪ್ರೇರಿತವಾಗಿಲ್ಲ. ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications