ಕೇರಳದ ಮೂಲಸೌಕರ್ಯಕ್ಕಾಗಿ ಅದಾನಿ ಗ್ರೂಪ್‌ನಿಂದ ₹30,000 ಕೋಟಿ ಹೂಡಿಕೆ

ಕೇರಳದ ಮೂಲಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆ ಉದ್ದೇಶದೊಂದಿಗೆ ಅದಾನಿ ಪೋರ್ಟ್ಸ್ ಮತ್ತು ಎಸ್‌ಇಝಡ್‌ ಲಿಮಿಟೆಡ್ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ₹30,000 ಕೋಟಿಗಳಷ್ಟು ಬೃಹತ್ ಹೂಡಿಕೆಯನ್ನು ಘೋಷಿಸಿದೆ. ಇನ್ವೆಸ್ಟ್ ಕೇರಳ ಗ್ಲೋಬಲ್ ಶೃಂಗಸಭೆ 2025 ರಲ್ಲಿ ಈ ಹೂಡಿಕೆ ನಡೆದಿದೆ. ಕೇರಳದಲ್ಲಿ ಬಂದರು ಅಭಿವೃದ್ಧಿ, ವಿಮಾನ ನಿಲ್ದಾಣ ವಿಸ್ತರಣೆ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಕೇರಳದ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ.

ಭಾರತದ ಅತಿ ದೊಡ್ಡ ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಆಗಿ ಹೊರಹೊಮ್ಮಲು ವಿಝಿಂಜಂ (Vizhinjam) ಬಂದರು ಹೂಡಿಕೆಯು ಈ ಯೋಜನೆಯಲ್ಲಿ ಪ್ರಮುಖವಾಗಿದೆ. ವಿಝಿಂಜಂ ಬಂದರಿಗೆ ₹20,000 ಕೋಟಿ ರೂಪಾಯಿ ಹಂಚಿಕೆಯಾಗಿದ್ದು, ಇದು ಅತಿದೊಡ್ಡ ಟ್ರಾನ್ಸ್‌ಶಿಪ್‌ಮೆಂಟ್ ಕೇಂದ್ರವಾಗಲಿದೆ. ವಿಶ್ವದ ಅತ್ಯಂತ ಜನನಿಬಿಡ ಹಡಗು ಮಾರ್ಗಗಳಲ್ಲಿ ಒಂದಾದ ಆಯಕಟ್ಟಿನ ಮೂಲಕ ಬಂದರು ಈಗಾಗಲೇ 24,000 ಕಂಟೇನರ್ ಸಾಮರ್ಥ್ಯದ ಹಡಗನ್ನು ಅಳವಡಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದು, ಇದು ಭಾರತೀಯ ಬಂದರಿನಲ್ಲಿ ದೊಡ್ಡ ಮೈಲಿಗಲ್ಲು ಎನ್ನಲಾಗಿದೆ.

Adani Ports Announces 30 000 Crore Investment In Kerala Infrastructure Development

ಅದಾನಿ ಗ್ರೂಪ್ ಈಗಾಗಲೇ ವಿಝಿಂಜಂ ಯೋಜನೆಗೆ 5,000 ಕೋಟಿಗಳನ್ನು ನೀಡಿದೆ. ಇದು ಕೇರಳದ ಕರಾವಳಿ ಆರ್ಥಿಕತೆಗೆ ನೆರವಾಗಲಿದೆ. "ಭಾರತದ ಕಡಲ ಭೂದೃಶ್ಯವನ್ನು ಮರುವ್ಯಾಖ್ಯಾನಿಸುವ ವಿಝಿಂಜಮ್ ಅನ್ನು ಜಾಗತಿಕ ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಮಾಡುವುದು ನಮ್ಮ ದೂರದೃಷ್ಟಿ" ಎಂದು ಅದಾನಿ ಪೋರ್ಟ್ಸ್ ಮತ್ತು ಎಸ್‌ಇಝಡ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ಹೇಳಿದ್ದಾರೆ.

ಕೇರಳದ ಏರ್ ಕನೆಕ್ಟಿವಿಟಿ ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್ ವಿಸ್ತರಣೆ:

ಬಂದರುಗಳ ಹೊರತಾಗಿಯೂ ಕೇರಳದ ಏರ್ ಕನೆಕ್ಟಿವಿಟಿ ಮತ್ತು ಲಾಜಿಸ್ಟಿಕ್ಸ್ ಜಾಲವನ್ನು ವಿಸ್ತರಿಸುವ ಉದ್ದೇಶದೊಂದಿಗೆ ₹5,500 ಕೋಟಿ ಹೂಡಿಕೆಯೊಂದಿಗೆ ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನವೀಕರಿಸಲು ಕೂಡ ಸಜ್ಜಾಗಿದೆ. ಇಲ್ಲಿನ ಪ್ರಯಾಣಿಕರ ಸಾಮರ್ಥ್ಯವನ್ನು 4.5 ಮಿಲಿಯನ್‌ನಿಂದ 12 ಮಿಲಿಯನ್‌ಗೆ ಹೆಚ್ಚಿಸಲಾಗಿದ್ದು, ಈ ವಿಸ್ತರಣೆಯು ಕೇರಳದ ಸಂಪರ್ಕ, ಪ್ರವಾಸೋದ್ಯಮ ಮತ್ತು ವ್ಯಾಪಾರದ ನಿರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಕೊಚ್ಚಿಯಲ್ಲಿ ವಿಶ್ವದರ್ಜೆಯ ಲಾಜಿಸ್ಟಿಕ್ಸ್ ಮತ್ತು ಇ-ಕಾಮರ್ಸ್ ಹಬ್ ಮತ್ತು ಸಿಮೆಂಟ್ ಉತ್ಪಾದನಾ ಸೌಲಭ್ಯಗಳ ವಿಸ್ತರಣೆ ಕೂಡ ನಡೆದಿದೆ. ಇದು ಕೇರಳದ ಕೈಗಾರಿಕಾ ಬೆನ್ನೆಲುಬನ್ನು ಮತ್ತಷ್ಟು ಬಲಪಡಿಸಲಿದೆ.

Adani Ports Announces 30 000 Crore Investment In Kerala Infrastructure Development

ಜಾಗತಿಕ ವ್ಯಾಪಾರದಲ್ಲಿ ಕೇರಳದ ಐತಿಹಾಸಿಕ ಮಹತ್ವ ಹಾಗೂ ವ್ಯಾಪಾರ ಮಾಡುವ ಸುಲಭ ಮತ್ತು ಆರಂಭಿಕ ಪರಿಸರ ವ್ಯವಸ್ಥೆಯ ಬೆಳವಣಿಗೆಯಲ್ಲಿ ಕೇರಳದ ಪ್ರಗತಿಯನ್ನು ಕರಣ್ ಅದಾನಿ ಶ್ಲಾಘಿಸಿದ್ದಾರೆ. ಅಲ್ಲದೆ ಕೇರಳವನ್ನು ಅಭಿವೃದ್ಧಿಗೆ ಮಾದರಿ ಎಂದು ಕರೆದಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಮಾಜಿ ಸಿಎಂ ಉಮ್ಮನ್ ಚಾಂಡಿ ಅವರ ಕೊಡುಗೆ ಹಾಗೂ ವಿಝಿಂಜಂನ ಅಭಿವೃದ್ಧಿಯನ್ನು ಸ್ಥಿರವಾಗಿ ಮುನ್ನಡೆಸುವಲ್ಲಿ ಅವರ ನಾಯಕತ್ವವನ್ನು ಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಪುನರುಚ್ಚರಿಸಿದ ಕರಣ್ ಅದಾನಿ, "ಅಭಿವೃದ್ಧಿ ಹೊಂದಿದ ಭಾರತಕ್ಕೆ ಬಲವಾದ ಪ್ರಾದೇಶಿಕ ಆರ್ಥಿಕತೆಯ ಅಗತ್ಯವಿದೆ. ಹಾಗಾಗಿ ಕಾರ್ಯತಂತ್ರದ ಹೂಡಿಕೆಗಳು ಪ್ರಗತಿಯನ್ನು ಹೇಗೆ ಉತ್ತೇಜಿಸಬಹುದು? ಎಂಬುದಕ್ಕೆ ಕೇರಳ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದಿದ್ದಾರೆ. ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರ ದೂರದೃಷ್ಟಿಯನ್ನೂ ಅವರು ಉಲ್ಲೇಖಿಸಿದ್ದಾರೆ.

ಕೇರಳವು ವ್ಯಾಪಾರ-ಸ್ನೇಹಿ ವಾತಾವರಣಕ್ಕೆ ಇನ್ವೆಸ್ಟ್ ಕೇರಳ ಗ್ಲೋಬಲ್ ಶೃಂಗಸಭೆಯು ಒಂದು ಮಹತ್ವದ ತಿರುವು ನೀಡುತ್ತದೆ. ಕೇರಳ ಸರ್ಕಾರದ ಕೈಗಾರಿಕೆಗಳ ಇಲಾಖೆಯು ಹೂಡಿಕೆ ಪ್ರಕ್ರಿಯೆಗಳನ್ನು ಸರಳೀಕರಿಸಲು ಮತ್ತು ಅಧಿಕಾರಶಾಹಿ ವಿಳಂಬವನ್ನು ತೊಡೆದು ಹಾಕಲು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಹೂಡಿಕೆದಾರರಿಗೆ ಭರವಸೆ ನೀಡಿದ್ದಾರೆ. ನಾವು ತಂದಿರುವ ಬದಲಾವಣೆಗಳು ಹೆಚ್ಚಳವಲ್ಲ, ಕೇರಳಕ್ಕೆ ಬರುವ ಯಾವುದೇ ಹೂಡಿಕೆದಾರರು ಕಾರ್ಯವಿಧಾನದ ವಿಳಂಬ ಸೇರಿದಂತೆ ಯಾವುದೇ ಸಮಸ್ಯೆ ಎದುರಿಸುವುದಿಲ್ಲ.

ಅದಾನಿ ಸಮೂಹದ ಈ ಮಹತ್ವಾಕಾಂಕ್ಷೆಯ ಹೂಡಿಕೆ ಯೋಜನೆಯು ಕೇರಳದ ಆರ್ಥಿಕ ಸಮೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಮೂಲಸೌಕರ್ಯವನ್ನು ಆಧುನೀಕರಿಸುವ ಮೂಲಕ, ಜಾಗತಿಕ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಮತ್ತು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಈ ಯೋಜನೆಗಳು ಕೇರಳವನ್ನು ಜಾಗತಿಕ ವೇದಿಕೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಶಕ್ತಿಯಾಗಿ ತೋರಿಸಲಿದೆ. ಆರು ದೇಶಗಳ ಪ್ರತಿನಿಧಿಗಳು ಸೇರಿದಂತೆ 28 ಚರ್ಚೆಗಳು ಹಾಗೂ 3,000ಕ್ಕೂ ಹೆಚ್ಚು ಮಂದಿಯೊಂದಿಗೆ ಈ ಶೃಂಗಸಭೆಯು ಕೇರಳದ ಹೂಡಿಕೆಯ ವಾತಾವರಣಕ್ಕೆ ವೇದಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+