ಗೌತಮ್ ಅದಾನಿ ಹುಟ್ಟುಹಬ್ಬ ; ದಾಖಲೆ ಬರೆದ ರಕ್ತದಾನ ಶಿಬಿರ
ಗೌತಮ್ ಅದಾನಿಯವರ 63ನೇ ಹುಟ್ಟುಹಬ್ಬದ ಅಂಗವಾಗಿ, ಅದಾನಿ ಫೌಂಡೇಶನ್ ದೇಶವ್ಯಾಪಿ ಮಹಾ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಅಭಿಯಾನವು 21 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 206 ನಗರಗಳಲ್ಲಿ ನಡೆಯಿತು. ಕಳೆದ ವರ್ಷದ ದಾಖಲೆಯ 25,282 ಯೂನಿಟ್ಗಳನ್ನು ಮೀರಿಸಿ, ಈ ಬಾರಿ 27,661 ಯೂನಿಟ್ (ಸುಮಾರು 11,100 ಲೀಟರ್) ರಕ್ತವನ್ನು ಸಂಗ್ರಹಿಸಿ ಹೊಸ ದಾಖಲೆ ಸ್ಥಾಪಿಸಲಾಗಿದೆ.
ರೆಡ್ ಕ್ರಾಸ್ ರಕ್ತನಿಧಿಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಈ ಅಭಿಯಾನವನ್ನು ನಡೆಸಲಾಯಿತು. ಈ ಅಭಿಯಾನದಲ್ಲಿ ಅದಾನಿ ಗ್ರೂಪ್ ನ ಉದ್ಯೋಗಿಗಳು, ಪಾಲುದಾರರು ಮತ್ತು ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದರು. 3,000ಕ್ಕೂ ಹೆಚ್ಚು ವೈದ್ಯರು, ಪ್ಯಾರಾಮೆಡಿಕ್ಸ್, ಡೇಟಾ ಆಪರೇಟರ್ಗಳು ಮತ್ತು ಆಡಳಿತ ಸಿಬ್ಬಂದಿ ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದರು. ಸಂಗ್ರಹಿತ ರಕ್ತದಿಂದ 83,000ಕ್ಕೂ ಹೆಚ್ಚು ರೋಗಿಗಳಿಗೆ ನೆರವು ಸಿಗಲಿದೆ. ಇದೇ ಮೊದಲ ಬಾರಿ ಶ್ರೀಲಂಕಾ ಮತ್ತು ಟಾಂಜಾನಿಯಾದಲ್ಲಿ ಕೂಡ ಶಿಬಿರಗಳು ನಡೆದವು.

ಅದಾನಿ ಫೌಂಡೇಶನ್ ಅಧ್ಯಕ್ಷೆ ಡಾ. ಪ್ರೀತಿ ಅದಾನಿ ಅವರು, ನಮ್ಮ ಅದಾನಿ ಕುಟುಂಬದ ಸದಸ್ಯರು ಸೇವಾ ಮನೋಭಾವದಿಂದ ಮುಂದಾಗಿ ಈ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ. ಅವರ ದಾನಶೀಲತೆ ಅನೇಕ ಜೀವಗಳಿಗೆ ಸ್ಪರ್ಶ ನೀಡಲಿದೆ. ಈ ಸೇವಾ ಕಾರ್ಯವನ್ನು ಪ್ರಮುಖವಾಗಿಸಿದ್ದಕ್ಕಾಗಿ ನಮ್ಮ ಅದಾನಿ ಪರಿವಾರಕ್ಕೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಾರಿ ಮೊದಲ ಬಾರಿಗೆ ಈ ರಕ್ತದಾನ ಶಿಬಿರ ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿ, ಶ್ರೀಲಂಕಾ ಮತ್ತು ಟಾಂಜಾನಿಯಾದ ಕೊಲಂಬೊ ಮತ್ತು ದಾರ್-ಎಸ್-ಸಲಾಮ್ ಬಂದರುಗಳಲ್ಲಿ ಶಿಬಿರಗಳನ್ನು ನಡೆಸಲಾಯಿತು. 100ಕ್ಕೂ ಹೆಚ್ಚು ದಾನಿಗಳು ಈ ಶಿಬಿರಗಳಲ್ಲಿ ಭಾಗವಹಿಸಿದರು. 2011ರಿಂದ ಪ್ರಾರಂಭವಾದ ಈ ವಾರ್ಷಿಕ ಶಿಬಿರವು "ಸೇವೆಯೇ ಸಾಧನೆ" ಎಂಬ ಗೌತಮ್ ಅದಾನಿಯವರ ತತ್ವವನ್ನು ಪ್ರತಿಬಿಂಬಿಸುತ್ತದೆ. ಅದಾನಿ ಫೌಂಡೇಶನ್ ಸಮಾಜದ ಸಮಗ್ರ, ಸಮಾನ ಹಾಗೂ ಶಾಶ್ವತ ಅಭಿವೃದ್ಧಿಗೆ ಬದ್ಧವಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications