ನಟ ವಿಜಯ್ ರಾಜಕೀಯ ರ್ಯಾಲಿಗೆ ದಿಢೀರ್ ಆಘಾತ, 2 ಅಭಿಮಾನಿಗಳ ಸಾವಿನಿಂದ ಆತಂಕ... Actor Vijay
ನಟ ವಿಜಯ್ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಹವಾ ಎಬ್ಬಿಸಲು ಸಜ್ಜಾಗಿದ್ದು, ಕೋಟ್ಯಂತರ ಅಭಿಮಾನಿಗಳ ಬೆಂಬಲ ಪಡೆದು ಚುನಾವಣೆ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸಾಲು ಸಾಲು ರಾಜಕೀಯ ರ್ಯಾಲಿ ಆಯೋಜನೆ ಮಾಡುತ್ತಾ, ಬೃಹತ್ ಚುನಾವಣಾ ಸಭೆಗಳನ್ನ ನಡೆಸುತ್ತಿದ್ದಾರೆ ತಮಿಳು ನಟ ವಿಜಯ್. ಹೀಗಿದ್ದಾಗ ದಿಢೀರ್ ತಮಿಳುನಾಡು ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿದ್ದು, ಸೇಲಂನಲ್ಲಿ ಇಂದು ನಟ ವಿಜಯ್ ಬೃಹತ್ ರಾಜಕೀಯ ರ್ಯಾಲಿ ಆಯೋಜನೆ ಮಾಡಿದ್ದರು. ಹೀಗಿದ್ಧಾಗಲೇ ನಟ ವಿಜಯ್ ರಾಜಕೀಯ ರ್ಯಾಲಿಗೆ ದಿಢೀರ್ ಆಘಾತವೇ ಎದುರಾಗಿದೆ.
ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಸಿನಿಮಾ ನಟ & ನಟಿಯರು ರಾಜಕೀಯಕ್ಕೆ ಎಂಟ್ರಿ ಕೊಡುವುದು & ಅಬ್ಬರಿಸುವುದು ಮಾಮೂಲಿ. ಇದಕ್ಕೆ ಹಲವು ನಟ & ನಟಿಯರು ಉದಾಹರಣೆಯೂ ಆಗಿದ್ದಾರೆ. ಸಿನಿಮಾ ನಟರು ರಾಜಕೀಯಕ್ಕೆ ಬರುವ ಬೆಳವಣಿಗೆ ಹೆಚ್ಚಾಗುತ್ತಿದೆ, ಈಗಾಗಲೇ ನೂರಾರು ನಟರು ಹೀಗೆ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದು ಸೌಂಡ್ ಕೂಡ ಮಾಡಿದ್ದಾರೆ. ಅದೇ ರೀತಿ ಕರ್ನಾಟಕ ನೆರೆ ರಾಜ್ಯ ತಮಿಳುನಾಡು ರಾಜಕೀಯ ಅಖಾಡದಲ್ಲಿ ನಟ ವಿಜಯ್ ಅಬ್ಬರ ಜೋರಾಗಿದೆ. ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವ ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿ ಆಗುವ ಕನಸು ಕೂಡ ಕಾಣುತ್ತಿದ್ದಾರೆ. ಆದರೆ ನಟ ವಿಜಯ್ ಅವರಿಗೆ ದಿಢೀರ್ ಸಾಲು ಸಾಲು ಆಘಾತ ಎದುರಾಗುತ್ತಿದೆ.

ರಾಜಕೀಯ ಸಮಾವೇಶದಲ್ಲಿ ಭೀಕರ ಘಟನೆ
ನಟ ವಿಜಯ್ ಇಂದು ತಮಿಳುನಾಡು ರಾಜ್ಯದ ಸೇಲಂನಲ್ಲಿ ವಿಶೇಷ ರಾಜಕೀಯ ಸಮಾವೇಶ ಆಯೋಜನೆ ಮಾಡಿದ್ದರು. ಕಳೆದ ಬಾರಿ ಇದೇ ರೀತಿ ರಾಜಕೀಯ ಸಮಾವೇಶ ನಡೆಯುವಾಗ ದುರಂತ ಸಂಭವಿಸಿ, ಹಲವರು ಜೀವ ಕಳೆದುಕೊಂಡಿದ್ದರು. ಹೀಗಾಗಿಯೇ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಇಂದು ಮತ್ತೆ ಅದೆಲ್ಲವನ್ನೂ ಮೀರಿ ಮತ್ತೊಮ್ಮೆ ಮರಣ ಮೃದಂಗ ಮೊಳಗಿ, ಇಬ್ಬರು ಉಸಿರು ಚೆಲ್ಲಿದ್ದಾರೆ ವಿಜಯ್ ಅವರ ರಾಜಕೀಯ ಸಮಾವೇಶದಲ್ಲಿ. ಹಾಗಾದರೆ ಅಸಲಿಗೆ ಈ ಕಾರ್ಯಕ್ರಮದಲ್ಲಿ ಆಗಿದ್ದೇನು? ಮುಂದೆ ಓದಿ.
3 ಗಂಟೆ ಕಾಲ ಬಿಸಿಲಿನಲ್ಲಿ ಒದ್ದಾಟ
37 ವರ್ಷದ ಸೂರಜ್, ಇನ್ನೊಬ್ಬ ವ್ಯಕ್ತಿ ಶವವಾಗಿ ಸಿಕ್ಕಿರುವುದು ಆತಂಕವನ್ನ ಹೆಚ್ಚು ಮಾಡಿದೆ. ಸೂರಜ್ ಮೂರ್ಛೆ ಹೋಗಿದ್ದು ಕೂಡಲೇ ಅವರನ್ನು ಬದುಕಿಸುವ ಪ್ರಯತ್ನ ಸ್ಥಳದಲ್ಲಿ ನಡೆದಿದೆ. ಆದರೂ ಚಿಕಿತ್ಸೆ ಫಲಕಾರಿ ಆಗದೆ ಅವರು ಮೃತಪಟ್ಟಿದ್ದು, ಇದೀಗ ನಟ ವಿಜಯ್ ಅವರ ರಾಜಕೀಯಕ್ಕೆ ದೊಡ್ಡ ಅಡ್ಡಿ ಎದುರಾಗುವ ಎಲ್ಲಾ ರೀತಿಯ ಆತಂಕ ಸೃಷ್ಟಿಯಾಗಿದೆ. ಸೇಲಂನ ಸೀಲನಾಯಕನಪಟ್ಟಿ ಬಳಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದ್ದು, ಹೀಗಿದ್ದರೂ ಸಮಾವೇಶಕ್ಕೆ ಬರುವ ಜನರಿಗೆ ನೀರು ಮತ್ತು ಜ್ಯೂಸ್ ವಿತರಣೆ ಮಾಡಲಾಗಿತ್ತು. ಆದರೆ ಬಿಸಿಲು ಹೆಚ್ಚಾಗಿದ್ದ ಕಾರಣಕ್ಕೆ ಸಾವಿನ ಸುದ್ದಿ ಆಘಾತವನ್ನೇ ನೀಡಿದೆ. ಸತತ 3 ಗಂಟೆಗಳ ಕಾಲ ಸಾವಿರಾರು ಜನರು ಬಿಸಿಲಿನಲ್ಲಿ ನಿಂತು ಭಾಷಣ ಕೇಳಿದ್ದ ಹಿನ್ನೆಲೆ ಇಷ್ಟೆಲ್ಲಾ ಸಮಸ್ಯೆ ಆಗಿದೆ ಎಂದು ಆರೋಪ ಮಾಡಲಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications