ಉತ್ತರ ಪ್ರದೇಶದಲ್ಲಿ ಟಾಯ್ಲೇಟ್ ಗೂ ಕೇಸರಿ ಬಣ್ಣ!
ಇಟವಾಹ(ಉತ್ತರ ಪ್ರದೇಶ), ಜನವರಿ 12: ಇತ್ತೀಚೆಗೆ ತಾನೇ ಉತ್ತರ ಪ್ರದೇಶದ ಮಸೀದಿಯೊಂದರ ಹೊರಾಂಗಣ ಗೋಡೆಗೆ ಕೇಸರಿ ಬಣ್ಣ ಬಳಿದಿದ್ದು ಸುದ್ದಿಯಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಕೇಸರಿ ಬಣ್ಣ ಸುದ್ದಿ ಮಾಡುತ್ತಿದೆ.
ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಜಿಲ್ಲೆಯಾದ ಕೃಪಾಲ್ಪುರದ ಇಟವಾಹ ಎಂಬಲ್ಲಿ ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಟಾಯ್ಲೆಟ್ ಗಳ ಗೋಡೆಗಳಿಗೆ ಕೇಸರಿ ಬಣ್ಣ ಬಳಿಸುವ ಮೂಲಕ ಇಲ್ಲಿನ ಹಳ್ಳಿಯ ಮುಖ್ಯಸ್ಥ ವೇದ್ ಪಾಲ್ ಎಂಬುವವರು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
'ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಅವರು ಕಚೇರಿಗಳಿಗೂ ಕೇಸರಿ ಬಣ್ಣ ಬಳಿವಾಗ ನಾವು ಶೌಚಾಲಯಕ್ಕೆ ಬಳಿದರೇನಂತೆ' ಎಂದು ಪ್ರಶ್ನಿಸಿದ್ದಾರೆ ಪಾಲ್!

ಒಟ್ಟಿನಲ್ಲಿ ತ್ಯಾಗ, ಧೈರ್ಯದ ಪ್ರತೀಕವಾದ ಕೇಸರಿ ಬಣ್ಣವನ್ನು ಶೌಚಾಲಯಕ್ಕೆ ಬಳಿಸಿದ ಗ್ರಾಮ ಮುಖ್ಯಸ್ಥನ ಕುರಿತು ಆಕ್ರೋಶವಂತೂ ವ್ಯಕ್ತವಾಗಿದೆ.












Click it and Unblock the Notifications