'ಪಾನ್ ಮಸಾಲಾ' ಚೀಟುಗಳಲ್ಲಿ ಲಕ್ಷಗಟ್ಟಲೇ ಹಣ ಬಚ್ಚಿಟ್ಟವನನ್ನು ಬಂಧಿಸಿದ ಕೋಲ್ಕತ್ತ ಕಸ್ಟಮ್ಸ್ ಅಧಿಕಾರಿಗಳು
ಕೋಲ್ಕತ್ತ, ಜನವರಿ 09: ಬ್ಯಾಗ್ನಲ್ಲಿ 'ಪಾನ್ ಮಸಾಲಾ' ಚೀಟುಗಳಲ್ಲಿ ಅಪಾರ ಪ್ರಮಾಣದ ಡಾಲರ್ ನೋಟುಗಳನ್ನು ಬಚ್ಚಿಟ್ಟುಕೊಂಡು ವಿದೇಶಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ ಘಟನೆ ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತದಲ್ಲಿ ನಡೆದಿದೆ.
ಸೀಲ್ ಮಾಡಿದ ನೂರಾರು 'ಪಾನ್ ಮಸಾಲಾ' ಸ್ಯಾಚೆಟ್ಗಳಲ್ಲಿ ರೂ.32 ಲಕ್ಷಕ್ಕೂ ಹೆಚ್ಚು ಮೌಲ್ಯದ ಡಾಲರ್ ನೋಟುಗಳನ್ನು ಬಚ್ಚಿಟ್ಟು ವ್ಯಕ್ತಿಯೊಬ್ಬರು ಥಾಯ್ಲೆಂಡ್ನ ಬ್ಯಾಂಕಾಕ್ಗೆ ತೆರಳಲು ಯತ್ನಿಸಿದ್ದರು. ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳ ಮಾಹಿತಿಯ ಮೇರೆಗೆ ಕೋಲ್ಕತ್ತಾ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಆತನನ್ನು ಪರಿಶೀಲಿಸಿ ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯ ಟ್ರಾಲಿ ಬ್ಯಾಗಿನಲ್ಲಿ 'ಪಾನ್ ಮಸಾಲಾ' ಚೀಟುಗಳಲ್ಲಿ ರೂ.32 ಲಕ್ಷಕ್ಕೂ ಹೆಚ್ಚು ಮೌಲ್ಯದ ಡಾಲರ್ ನೋಟುಗಳು ಪತ್ತೆಯಾಗಿವೆ. ಒಂದು ಪಾನ್ ಮಸಾಲಾ ಚೀಟುಗಳ ಒಳಗೆ ತಲಾ ಎರಡು, ಹತ್ತು ಡಾಲರ್ ನಂತೆ ಅಪಾರ ಹಣದ ನೋಟುಗಳನ್ನು ಯಾರಿಗೂ ಗೊತ್ತಾಗದಂತೆ ಹುದುಗಿಸಿಟ್ಟಿದ್ದ. ಅಧಿಕಾರಿಗಳ ಕಣ್ತಪ್ಪಿಸಲು ಕೆಲವು ಪಾನ್ ಮಸಾಲಾ ಚೀಟುಗಳನ್ನು ಹಾಗೆಯೆ ಬಿಟ್ಟಿದ್ದ.

ಅಧಿಕಾರಿಗಳು ವಶಕ್ಕೆ ಪಡೆದ ಒಟ್ಟು ಡಾಲರ್ (ಹಣದ) ಮೌಲ್ಯ $40,000 (ರೂ.32,78,000) ಎನ್ನಲಾಗಿದೆ. ಕಸ್ಟಮ್ಸ್ ಅಧಿಕಾರಿಯೊಬ್ಬರು ಸ್ಯಾಚೆಟ್ಗಳನ್ನು ಹರಿದು ಹಾಕುವ ವೀಡಿಯೊ ಹರಿದಾಡುತ್ತಿದೆ. ಅದರಲ್ಲಿ ಸುಮಾರು 10 ಡಾಲರ್ ನೋಟುಗಳನ್ನು ಜೋಡಿಯಾಗಿ ಮತ್ತು ಪಾರದರ್ಶಕ ಪ್ಲಾಸ್ಟಿಕ್ನಿಂದ ಮುಚ್ಚಿರುವುದು ಕಾಣಿಸುತ್ತದೆ. ದೊಡ್ಡ ಟ್ರಾಲಿ ಬ್ಯಾಗ್ ಇದಾಗಿದ್ದು, ಕೆಲವು ಚೀಟುಗಳಲ್ಲಿ ಹರಿದ ತಕ್ಷಣ ಪಾನ್ ಮಸಾಲಾ ಬೀಳುವುದು ಮತ್ತು ಇನ್ನೂ ಕೆಲವು ಪಾನ್ ಮಸಾಲಾ ಚೀಟುಗಳಲ್ಲಿ ನೋಟುಗಳು ಪತ್ತೆಯಾಗಿವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications