Get Updates
Get notified of breaking news, exclusive insights, and must-see stories!

ತೆಲಂಗಾಣ ರಾಜಕೀಯದಲ್ಲಿ ಚರ್ಚೆ ಹುಟ್ಟಿಸಿದ ರಾಹುಲ್ ಗಾಂಧಿ "ಥೀಮ್ ಕ್ಯಾ ಹೈ" ವಿಡಿಯೋ!

ಹೈದ್ರಾಬಾದ್, ಮೇ 7: ತೆಲಂಗಾಣದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭರ್ಜರಿ ಚಾಲನೆ ಕೊಟ್ಟಿದ್ದಾರೆ. ಇದರ ಮಧ್ಯೆ ಅವರದ್ದೇ ಎನ್ನಲಾಗಿರುವ ವಿಡಿಯೋವೊಂದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಚಾರಕ್ಕೂ ಮುನ್ನವೇ ಬಿಜೆಪಿ ನಾಯಕ ಅಮಿತ್ ಮಾಳವೀಯಾ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 17 ಸೆಕೆಂಡುಗಳ ವೀಡಿಯೊ ಕ್ಲಿಪ್‌ನಲ್ಲಿ, ಇತರ ಪಕ್ಷದ ಸದಸ್ಯರೊಂದಿಗೆ ಕುಳಿತಿರುವ ಕಾಂಗ್ರೆಸ್ ನಾಯಕ, "ಇಂದಿನ ಮುಖ್ಯ ವಿಷಯ ಯಾವುದು. ಕ್ಯಾ, ಥೀಮ್ ಕ್ಯಾ ಹೈ, ಎಕ್ಸಾಟ್ಲಿ ಕ್ಯಾ ಬೋಲ್ನಾ ಹೈ (ನಿಖರವಾಗಿ ಏನು ಆಗಬೇಕು)," ಎಂದು ಕೇಳುತ್ತಿರುವುದು ರೆಕಾರ್ಡ್ ಆಗಿದೆ.

ನಾಯಕರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ವ್ಯಕ್ತಿಯೊಬ್ಬರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಅದನ್ನು ಕಂಡು "ಯೇ ಆಫ್ ಕರಿಯೇ, ಪ್ಲೀಸ್," ಎಂದು ರಾಹುಲ್ ಗಾಂಧಿಯವರು ಹೇಳುವುದು ಕೇಳಿಸುತ್ತದೆ.

ರಾಹುಲ್ ಗಾಂಧಿಯ ವಿಡಿಯೋ ಸುದ್ದಿಗಳ ಸರಣಿ

ರಾಹುಲ್ ಗಾಂಧಿಯ ವಿಡಿಯೋ ಸುದ್ದಿಗಳ ಸರಣಿ

ನೇಪಾಳಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದ ಸಂದರ್ಭದಲ್ಲಿನ ವಿಡಿಯೋ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆ ವಿಡಿಯೋವನ್ನು ಬಿಜೆಪಿ ಹಂಚಿಕೊಂಡ ಕೆಲವೇ ದಿನಗಳಲ್ಲಿ ಇತ್ತೀಚಿಗೆ ಮತ್ತೊಂದು ವಿಡಿಯೋ ಬಂದಿದೆ. ಅದನ್ನು ಅಮಿತ್ ಮಾಳವಿಯಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವಾಗ ಕಾಂಗ್ರೆಸ್ ನಾಯಕ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ರಾಹುಲ್ ಗಾಂಧಿ ವಿಡಿಯೋ ಪೋಸ್ಟ್ ಮಾಡಿದ ಮಾಳವಿಯಾ

"ನಿನ್ನೆ, ತೆಲಂಗಾಣದಲ್ಲಿ ತಮ್ಮ ಪ್ರಚಾರಕ್ಕೂ ಮೊದಲು, ರೈತರೊಂದಿಗೆ ಒಗ್ಗಟ್ಟಿನ ಬಗ್ಗೆ ಮಾತನಾಡುವಾಗ ರಾಹುಲ್ ಗಾಂಧಿ, ಥೀಮ್ ಏನು ಎಂದು ಕೇಳುತ್ತಾರೆ," ಎಂದು ಬಿಜೆಪಿಯ ಸಾಮಾಜಿಕ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವಿಯಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕನ ರಾಜಕೀಯ ನೋವನ್ನು ಪ್ರಶ್ನಿಸಿದ ಬಿಜೆಪಿ ನಾಯಕ, "ನೀವು ವೈಯಕ್ತಿಕ ವಿದೇಶಿ ಪ್ರವಾಸಗಳು ಮತ್ತು ನೈಟ್‌ಕ್ಲಬ್ಬಿಂಗ್ ನಡುವೆ ರಾಜಕೀಯ ಮಾಡಿದಾಗ ಏನಾಗುತ್ತದೆ. ಇಂತಹ ಉತ್ಪ್ರೇಕ್ಷಿತ ಅರ್ಹತೆಯ ಭಾವನೆ," ಎಂದು ಅಮಿತ್ ಮಾಳವೀಯಾ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿಯನ್ನು ಟೀಕಿಸಿದ ಓವೈಸಿ

ರಾಹುಲ್ ಗಾಂಧಿಯನ್ನು ಟೀಕಿಸಿದ ಓವೈಸಿ

ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನ್ನು ಟೀಕಿಸಿದ್ದಾರೆ. "ತೆಲಂಗಾಣಕ್ಕೆ ನೀವು ಜನರಿಗೆ ಯಾವ ಸಂದೇಶವನ್ನು ರವಾನಿಸಲು ಬಯಸುತ್ತೀರಿ ಎಂದು ನಿಮಗೆ ತಿಳಿದಿಲ್ಲದಿದ್ದಾಗ ಅವರು ನಿಮ್ಮನ್ನು ಏಕೆ ಬೆಂಬಲಿಸುತ್ತಾರೆ?, ನಿಮ್ಮ ಮನಸ್ಸು ಖಾಲಿಯಾಗಿದೆ. ನೀವು ಏನು ಸಂದೇಶ ನೀಡುತ್ತೀರಿ ಹಾಗೂ ಟಿಆರ್‌ಎಸ್ ವಿರುದ್ಧ ಹೇಗೆ ಹೋರಾಡುತ್ತೀರಿ," ಎಂದು ಅಸಾದುದ್ದೀನ್ ಓವೈಸಿ ಪ್ರಶ್ನೆ ಮಾಡಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಭರವಸೆಯ 'ರಾಗಾ'

ತೆಲಂಗಾಣದಲ್ಲಿ ಕಾಂಗ್ರೆಸ್ ಭರವಸೆಯ 'ರಾಗಾ'

ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಸಮರಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸರ್ಕಾರದ ವಿರುದ್ಧ ಕಿಡಿ ಕಾರಿದರು. ರಾಜ್ಯದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಸರ್ಕಾರವು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೂಷಿಸಿದರು. ತೆಲಂಗಾಣದ ರೈತರು ಭಯಪಡುವ ಅಗತ್ಯವಿಲ್ಲ, ಕಾಂಗ್ರೆಸ್ ಸರ್ಕಾರ ರಚನೆಯಾದ ತಕ್ಷಣ 2 ಲಕ್ಷ ರೂಪಾಯಿ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು. ನಿಮಗೆ ಸರಿಯಾದ ಎಂಎಸ್‌ಪಿ ಸಿಗುತ್ತದೆ. ಇದನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್‌ನ ಸರ್ಕಾರ ಮಾಡುತ್ತದೆ," ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷವು ಗೆದ್ದರೆ ರೈತರಿಗಾಗಿ ಇಂದಿರಮ್ಮ ರೈತ ಭರೋಸಾ ಯೋಜನೆ ಅಡಿ ಪ್ರತಿ ಎಕರೆಗೆ 15,000 ಇನ್‌ಪುಟ್ ಸಬ್ಸಿಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ರೈತ ಆಯೋಗದಲ್ಲಿ ನೋಂದಾಯಿಸಲಾದ ಭೂರಹಿತ ಕಾರ್ಮಿಕರಿಗೆ ವಾರ್ಷಿಕ 12,000 ಸಹಾಯ ಧನ. ಪ್ರತಿ ಕ್ವಿಂಟಾಲ್ ಭತ್ತಕ್ಕೆ 2500 ರೂಪಾಯಿ, ಮೆಣಸಿನ ಕಾಯಿ 15000 ಮತ್ತು ಅರಿಶಿಣಕ್ಕೆ 12000 ರೂಪಾಯಿ ನೀಡಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+