ಹಿಂದಿ ಹೇರಿಕೆ, ರಾಷ್ಟ್ರೀಯತೆ ಬಗ್ಗೆ ಬೆಳವಾಡಿ ಖಡಕ್ ಮಾತು!
ಹೈದರಾಬಾದ್, ಜನವರಿ 20: "ಹಿಂದಿ ಹೇರಿಕೆ ಮತ್ತು ಅದನ್ನು ರಾಷ್ಟ್ರೀಯತೆಗೆ ಹೋಲಿಸುವುದೆಲ್ಲ ಬೋಗಸ್" ಎಂದು ಖಡಕ್ ಹೇಳಿಕೆ ನೀಡಿದ್ದಾರೆ, ಕನ್ನಡ ಮತ್ತು ಹಿಂದಿ ನಟ ಪ್ರಕಾಶ್ ಬೆಳವಾಡಿ.
ಹೈದರಾಬಾದಿನಲ್ಲಿ ನಡೆಯುತ್ತಿರುವ ಇಂಡಿಯಾ ಟುಡೆ ಕಾನ್ಕ್ಲೇವ್ ಸೌತ್ - 2018 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಹಿಂದಿ ಹೇರಿಕೆಯ ಕುರಿತು ಮಾತನಾಡಿದರು. ಮಾಜಿ ಮಾನವಸಂಪನ್ಮೂಲ ಸಚಿವ ಎಂ ಎಂ ಪಳ್ಳಂ ರಾಜು, ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಪಟೇಲ್, ಕೇರಳದ ಲೇಖಕ ಎನ್ ಎಸ್ ಮಾಧವನ್ ಸೇರಿದಂತೆ ಗಣ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.
"'The Language Divide: Whose Hindi is it?'" ಎಂಬ ವಿಷಯದ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಏರ್ ಲಿಫ್ಟ್ ಚಿತ್ರದಲ್ಲಿ ತಮ್ಮ ಮನೋಜ್ಞ ಅಭಿನಯದಿಂದಾಗಿ ಖ್ಯಾತಿ ಗಳಿಸಿದ ಕನ್ನಡಿಗ ಪ್ರಕಾಶ್ ಬೆಳವಾಡಿ ಮಾತನಾಡಿ, ಹಿಂದಿ ಹೇರಿಕೆ ಮತ್ತು ಅದನ್ನು ರಾಷ್ಟ್ರೀಯತೆಯೊಂದಿಗೆ ಮಿಳಿತಗೊಳಿಸುವುದು ಸರಿಯಾದುದಲ್ಲ, ಇದು ಬೋಗಸ್ ಎಂದರು.

ದೇಶದಲ್ಲಿ ಏಕೆ ಒಂದೇ, ಪ್ರಬಲ ಭಾಷೆ ಇರಬೇಕು? ದೇಶದಲ್ಲಿ ಹಲವು ಭಾಷಿಕ ಸಮುದಾಯಗಳಿವೆ. ಎಲ್ಲ ಭಾಷೆಗೂ ಅಷ್ಟೇ ಮಹತ್ವ ನೀಡಬಾರದೇಕೆ? ನಾವ್ಯಾರೂ ಹಿಂದಿ ವಿರೋಧಿಗಳಲ್ಲ. ಆದರೆ ಎಲ್ಲ ಭಾಷೆಗಳಿಗೂ ಹಿಂದಿಯಷ್ಟೇ ಮಹತ್ವ ಸಿಗಬೇಕು ಎಂಬುದು ನಮ್ಮ ಅಂಬೋಣ. ಕರ್ನಾಟಕದಲ್ಲಿರುವ ಬಹುಪಾಲು ಬ್ಯಾಂಕುಗಳಲ್ಲಿ ಹಿಂದಿ ಮಾತನಾಡುವವರೇ ಸಿಗುತ್ತಾರೆ. ಆದರೆ ಇಲ್ಲಿಗೆ ತೆರಳುವ ಬಹುಪಾಲು ಗ್ರಾಹಕರೆಲ್ಲ ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದವರು. ಅವರೆಲ್ಲ ಇವರೊಂದಿಗೆ ಹೇಗೆ ಸಂವಹನ ನಡೆಸಬೇಕು? ತಮ್ಮದೇ ರಾಜ್ಯದಲ್ಲಿ ಜನರಿಗೆ ಕೀಳರಿಮೆ ಹುಟ್ಟುವಂಥ ಪರಿಸ್ಥಿತಿ ಯಾಕೆ ನಿರ್ಮಾಣವಾಗಬೇಕು ಎಂದು ಪ್ರಶ್ನಿಸಿದರು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications