ಹುಬ್ಬಳ್ಳಿ ಪಾಲಿಕೆಯ ಅಧ್ಯಯನ ಪ್ರವಾಸದ ದಾಖಲೆಗಳೇ ನಾಪತ್ತೆ!
ಹುಬ್ಬಳ್ಳಿ, ಜುಲೈ 13: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಅಧ್ಯಯನ ಪ್ರವಾಸ ಅಂದರೆ ಕೇವಲ ಮೋಜು-ಮಸ್ತಿಗೆ ಸೀಮಿತ ಎಂಬ ಆರೋಪಗಳ ಮಧ್ಯೆಯೇ ಇದಕ್ಕೆ ಸಂಬಂಧಿಸಿದ ಕಡತಗಳೇ ನಾಪತ್ತೆಯಾಗಿರುವುದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.
ಸ್ಥಾಯಿ ಸಮಿತಿಗಳ ಅಧ್ಯಯನ ಪ್ರವಾಸಕ್ಕೆ ಸಂಬಂಧಿಸಿದ ಕೆಲ ವರ್ಷಗಳ ದಾಖಲೆಗಳು ಮಾತ್ರ ಪತ್ತೆಯಾಗಿದ್ದು, ಉಳಿದಂತೆ ಬಹುತೇಕ ಕಡತಗಳು ಪಾಲಿಕೆ ಕಚೇರಿಯಿಂದಲೇ ನಾಪತ್ತೆಯಾಗಿವೆ. ಈ ಮೂಲಕ ಅಧ್ಯಯನ ಪ್ರವಾಸವೇ ಕೈಗೊಳ್ಳದೇ ಹಣ ಪಾವತಿಸಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡಿದೆ.

ದಾಖಲೆ ಹುಟುಕಾಟದಲ್ಲಿ ಪಾಲಿಕೆ
ಈಗಿರುವ ಅಧಿಕಾರಿಗಳು ಪ್ರವಾಸದ ದಾಖಲೆಗಳಿಗಾಗಿ ತಡಕಾಟ ನಡೆಸಿದ್ದರೂ ಈವರೆಗೂ ಅವು ಪತ್ತೆಯಾಗಿಲ್ಲ. ಪಾಲಿಕೆಯ ಬಹುತೇಕ ಸಿಬ್ಬಂದಿ ವರ್ಗಾವಣೆಯಾಗಿದ್ದರೆ, ಇನ್ನು ಕೆಲವರು ನಿವೃತ್ತರಾಗಿದ್ದಾರೆ. ಹಾಗಾಗಿ ಹಿಂದಿನ ಸ್ಥಾಯಿ ಸಮಿತಿಗಳು ಕೈಗೊಂಡಿದ್ದ ದಾಖಲೆಗಳು ಎಲ್ಲಿವೆ ಎಂಬುದನ್ನು ಪತ್ತೆ ಹಚ್ಚಲು ಈಗಿನ ಸಿಬ್ಬಂದಿ ತಲೆ ಬಿಸಿ ಮಾಡಿಕೊಂಡಿದ್ದಾರೆ.
ಅಧ್ಯಯನ ಪ್ರವಾಸಕ್ಕೆ ಅನುಮತಿ, ಹಣಕಾಸು, ಖರ್ಚು-ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿಗಳುಳ್ಳ ದಾಖಲೆಗಳನ್ನು ಕೇಳಿದರೆ ಪಾಲಿಕೆಯ ಅಧಿಕಾರಿಗಳು ತಬಡಾಯಿಸುವುದಂತೂ ಗ್ಯಾರಂಟಿ.
ಅವಳಿ ನಗರಕ್ಕೇನು ಪ್ರಯೋಜನ
ಮುಖ್ಯವಾಗಿ ಪ್ರವಾಸ ಉದ್ದೇಶ ಬೇರೆ ನಗರಗಳಲ್ಲಿ ಅಲ್ಲಿನ ಸ್ಥಳೀಯ ಆಡಳಿತ ಸ್ವಚ್ಛತೆ, ಆರೋಗ್ಯ, ಸಂಪನ್ಮೂಲ ಕ್ರೂಢಿಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಉತ್ತಮವಾದುದನ್ನು ಅವಳಿಡಿಸಿಕೊಳ್ಳುವುದು. ನಗರಗಳ ಅಭಿವೃದ್ಧಿಗೆ ಅಳವಡಿಸಿಕೊಳ್ಳಲು ಸಾಧ್ಯವಿರುವ ವಿಷಯಗಳನ್ನು ಶಿಫಾರಸು ಮಾಡಬೇಕು.
ಆದರೆ, ಪ್ರವಾಸ ಕೈಗೊಂಡಿದ್ದ ಬಹುತೇಕ ಸ್ಥಾಯಿ ಸಮಿತಿ ಸದಸ್ಯರಿಗೆ ಪ್ರವಾಸದ ಉದ್ದೇಶವೇ ಗೊತ್ತಿಲ್ಲದಿರುವುದು ವಿಪರ್ಯಾಸ. ಇದುವರೆಗೆ ತೆರಳಿದ್ದ ಸ್ಥಾಯಿ ಸಮಿತಿಗಳು ಪ್ರವಾಸ ಮುಗಿಸಿಕೊಂಡು ಬಂದಿದ್ದು ಆಯ್ತು, ಮೋಜು ಮಸ್ತಿ ಮಾಡಿದ್ದನ್ನು ಮರೆತಿದ್ದು ಆಯ್ತು ಎನ್ನುವಂತಾಗಿದೆ. ಹೆಚ್ಚಿನವರು ವರದಿ ನೀಡದ್ದೇ ಇಲ್ಲ. ಇನ್ನು ಕೆಲವು ವರದಿ ನೀಡಿದ್ದರೂ ಅಧ್ಯಯನ ವರದಿಗಳೇ ನಾಪತ್ತೆಯಾಗಿವೆ. ಹೀಗಾಗಿ ಯಾವ ಪುರುಷಾರ್ಥಕ್ಕೆ ಪ್ರವಾಸ ಮಾಡಿದ್ದೋ ದೇವರೇ ಬಲ್ಲ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications