ರಾಜಕಾರಣಿಗಳಿಂದ ವೀರಶೈವ ಧರ್ಮದಲ್ಲಿ ಒಡಕು: ರಂಭಾಪುರಿ ಶ್ರೀ
ಹುಬ್ಬಳ್ಳಿ, ಮೇ 25: ರಾಜಕಾರಣಿಗಳು ತಾವು ಮತ ಪಡೆಯುವ ಸಲುವಾಗಿ ವೀರಶೈವ ಧರ್ಮವನ್ನು ಛಿದ್ರ ಮಾಡುತ್ತಿದ್ದಾರೆ. ಯಾರ ಆಮಿಷಕ್ಕೂ ಬಲಿ ಬೀಳಬೇಡಿ. ಪಂಚಪೀಠಗಳು ಒಂದಾಗಿ ಕಾರ್ಯ ನಿರ್ವಹಿಸಿ, ಮಾನವ ಧರ್ಮವನ್ನು ಎತ್ತಿ ಹಿಡಿಯಬೇಕು ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದ್ದಾರೆ.
ಈ ರೀತಿ ಹೇಳಿಕೆಗಳನ್ನು ಯಾವ ಸಂದರ್ಭದಲ್ಲಿ ಕೊಟ್ಟರು, ಏಕೆ ಹಾಗೆ ಹೇಳಿದರು, ಅವರ ಮನಸ್ಸಿನಲ್ಲಿ ಯಾರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೀಗೆ ಹೇಳಿದರು ಎಂದು ಕೇಳಬೇಕಾಗುತ್ತದೆ. ಅದಕ್ಕೆ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಸ್ಪಷ್ಟವಾಗಿ ವಿವರಿಸಿದ್ದರೆ ಚೆನ್ನಾಗಿತ್ತು.
ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಬುಧವಾರ ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಜತೆಗೆ, "ಕಳಸಾ-ಬಂಡೂರಿ ಸೇರಿದ ಹಾಗೆ ಅನೇಕ ಸಮಸ್ಯೆಗಳು ಇವೆ. ಬರಗಾಲ ಎದುರಾಗಿದೆ. ಮುಂದಿನ ಚುನಾವಣೆಗೆ ಮತ ಕೇಳಲು ಬರುವ ರಾಜಕಾರಣಿಗಳಿಗೆ ಸರಿಯಾದ ಪಾಠ ಕಲಿಸಿ" ಎಂದು ಹೇಳಿದ್ದಾರೆ.
Comments
English summary
Politicians are dividing Veerashyva religion to get votes, so beware of them, said by Rambhapuri seer Veera Someshwara Shivacharya seerat Hubballi on Wednesday.
Story first published: Thursday, May 25, 2017, 7:46 [IST]