ಕಿಲಿಮಂಜಾರೋ ಪರ್ವತ ಏರಿದ ಮೊದಲ ಕನ್ನಡತಿ ಹುಬ್ಬಳ್ಳಿಯ ನಂದಿತಾ
ಹುಬ್ಬಳ್ಳಿ ಅಕ್ಟೋಬರ್ 03 : ಸಾಧನೆ ಮಾಡುವ ಛಲ ಒಂದಿದ್ದರೆ ಸಾಕು ಏನನ್ನಾದ್ರೂ ಸಾಧಿಸಬಹುದು ಎಂಬುದಕ್ಕೆ ಈ ಹುಬ್ಬಳ್ಳಿಯ ಯುವತಿ ಸಾಕ್ಷಿ ಆಗಿದ್ದಾರೆ.
ಜಗತ್ತಿನ ಏಳು ಖಂಡಗಳ ಏಳು ಎತ್ತರದ ಪರ್ವತ ಏರುವ ಕನಸು ಕಂಡಿರುವ ಹುಬ್ಬಳ್ಳಿಯ ಯುವತಿ ಈಗ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಇಂಥ ಅಸಾಧಾರಣ ಕನಸು ಕಂಡಿದ್ದು ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ನಂದಿತಾ ನಾಗನಗೌಡರ್.
2016ರಲ್ಲಿ ಮೌಂಟ್ ಎವರೆಸ್ಟ್ ಏರಿದ್ದು, ಕಳೆದ ಜೂನ್ನಲ್ಲಿ ಆಸ್ಟ್ರೇಲಿಯಾದ ಕಾರ್ ಸ್ಟೆಂಝ್ ಪಿರಾಮಿಡ್ ಶಿಖರ ಏರಿದ್ದರು. ಇದೇ ಸೆಪ್ಟೆಂಬರ್ 20ರಂದು ದಕ್ಷಿಣ ಆಫ್ರಿಕಾದಲ್ಲಿರುವ ಕಿಲಿಮಂಜಾರೋ ಪರ್ವತ ಏರಿ ಸಾಧನೆ ತಮ್ಮ ಕನಿಸಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಅಲ್ಲದೆ ಜಗತ್ತಿನ ಏಳು ಖಂಡಗಳ ಏಳು ಎತ್ತರದ ಪರ್ವತ ಏರುವ ಮಹದಾಸೆಗೆ ಮತ್ತೊಂದು ದೊಡ್ಡ ಹೆಜ್ಜೆ ಇರಿಸಿದ್ದಾರೆ.

ಜ್ವಾಲಾಮುಖಿ ಪರ್ವತ ಕಿಲಿಮಂಜಾರೋ
ನಂದಿತಾ ಸೆ. 15ರಂದು ಪರ್ವತಾರೋಹಣವನ್ನು ಆರಂಭಿಸಿ 5,895 ಮೀಟರ್ ಎತ್ತರವನ್ನು ಯಶಸ್ವಿಯಾಗಿ ಏರಿದ್ದಾರೆ. ಆಫ್ರಿಕಾ ಖಂಡದಲ್ಲಿಯೇ ಅತಿ ಎತ್ತರ ಎನಿಸಿರುವ ಈ ಪರ್ವತ, ಜ್ವಾಲಾಮುಖಿ ಪರ್ವತವೆಂದೇ ಪ್ರಸಿದ್ಧಿಯಾಗಿದೆ. ಪರ್ವತಾರೋಹಣದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಿ ಈ ಪರ್ವತ ಶ್ರೇಣಿ ಏರಿದ ರಾಜ್ಯದ ಪ್ರಥಮ ಮಹಿಳೆ ಎಂಬ ಖ್ಯಾತಿ ನಂದಿತಾ ಅವರದ್ದಾಗಿದೆ.
ಬೇಕಿದೆ ಸರ್ಕಾರದ ನೆರವು
ಮುಂದಿನ ದಿನಗಳಲ್ಲಿ ಶೀತ ಪ್ರದೇಶದಿಂದ ಕೂಡಿದ ಅಂಟಾರ್ಟಿಕಾ ವಿನ್ಸನ್ ಮ್ಯಾಸಿಪ್ ಪರ್ವತ ಏರುವ ಗುರಿ ಹೊಂದಿರುವ ನಂದಿತಾ, ಈ ಹಿಂದಿನ ಮೂರು ಪರ್ವತ ಏರಲು ಸಾಕಷ್ಟು ಹಣ ಖರ್ಚಾಗಿದೆ. ಒಂದು ಸಾರಿ ಪರ್ವತ ಏರಿ ಬಂದ್ರೆ ಸುಮಾರು 3ರಿಂದ 5 ಲಕ್ಷ ರುಪಾಯಿ ಹಣ ಬೇಕು. ಆದ್ರೆ ಈ ಹಿಂದೆ ಮಾಡಿದ ಎಲ್ಲ ಸಾಧನೆಗಳಿಗೆ ತಮ್ಮ ಸ್ವಂತ ಹಣವನ್ನೆ ಖರ್ಚು ಮಾಡಿದ್ದಾರೆ. ಆದ್ರೆ ಹೊಸ ಪರ್ವತ ಏರಲು ಸರ್ಕಾರದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ಅವರು ಇಂಗ್ಲೆಂಡ್ನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. 2011ರಲ್ಲಿ ಹುಬ್ಬಳ್ಳಿಯ ಬಿವಿಬಿಯಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಇವರು, ಇಂಗ್ಲೆಂಡ್ನಲ್ಲಿ ಎಂಬಿಎ ಪದವಿ ಪಡೆದು ಅಲ್ಲಿಯೇ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದಾರೆ.
ಮೊದಲು ಪರ್ವತಾರೋಹಣಕ್ಕೆ ಸಿದ್ಧತೆ ಮಾಡಿಕೊಂಡಾಗ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ಹೇಳುವ ನಂದಿತಾ, ಈಗ ತನ್ನ ಸಾಧನೆ ಪೋಷಕರಿಗೆ ಹೆಮ್ಮೆ ತಂದಿದೆ ಎನ್ನುತ್ತಾರೆ. ಅಲ್ಲದೆ ತನ್ನ ಸಾಧನೆಗೆ ಪೋಷಕರು ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ಮತ್ತಷ್ಟು ಸಾಧನೆ ಮಾಡುವ ಹಂಬಲ ಹೆಚ್ಚಿದೆ ಎನ್ನುತ್ತಾರೆ ನಂದಿತಾ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ












Click it and Unblock the Notifications