ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸಿದ ಪುತ್ರಿ: ಹುಬ್ಬಳ್ಳಿ ಬಸ್ಟಾಪಿನಲ್ಲಿ ದಂಪತಿಗಳ ಪರದಾಟ
ಹುಬ್ಬಳ್ಳಿ, ಜನವರಿ 06: ತನ್ನನ್ನು ಹುಟ್ಟಿಸಿ, ಬೆಳೆಸಿ, ವಿದ್ಯೆ-ಬುದ್ಧಿ ನೀಡಿ, ತನ್ನ ನಗುವಲ್ಲೇ ಕಷ್ಟಗಳನ್ನೆಲ್ಲ ಮರೆತ ತಂದೆ-ತಾಯಿಯರನ್ನು ಸ್ವಂತ ಮಗಳೇ ಮನೆಯಿಂದ ಹೊರಗಟ್ಟುವ ಮನಸ್ಸು ಹೇಗೆ ಬಂದೀತು?
ಈ ಕೊರೆವ ಚಳಿಯಲ್ಲಿ 90ರ ವೃದ್ಧ ತಂದೆ ಸೂರ್ಯಕಾಂತ್, 80ರ ತಾಯಿ ಕಮಲಮ್ಮ ಹುಬ್ಬಳ್ಳಿಯ ಬಸ್ ಸ್ಟಾಪಿನಲ್ಲೇ ಎರಡು ದಿನ ಕಳೆಯುವಂಥ ಪರಿಸ್ಥಿತಿ ಬಂದರೂ ಮಗಳ ಮನಸ್ಸು ಮಾತ್ರ ಕರಗಿಲ್ಲ!
ಈ ವೃದ್ಧ ದಂಪತಿಗಳ ಕಷ್ಟವನ್ನು ನೋಡಲಾಗದೆ ಹುಬ್ಬಳ್ಳಿ ಬಸ್ ಸ್ಟಾಪಿನಲ್ಲಿದ್ದ ಬಸ್ ಚಾಲಕರು ಮತ್ತು ಆಟೋ ಚಾಲಕರು ಹತ್ತಿರದ ವೃದ್ಧಾಶ್ರಮವೊಂದಕ್ಕೆ ಅವರನ್ನು ಕರೆದೊಯ್ದಿದ್ದಾರೆ. ಆದರೆ ಅವರ ಬಳಿ ಗುರುತಿನ ಚೀಟಿ ಇಲ್ಲ ಎಂಬ ಕಾರಣಕ್ಕೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ದೊರೆತಿಲ್ಲ. ವೃದ್ಧಾಶ್ರಮದ ಆಡಳಿತ ಮಂಡಳಿ ಮತ್ತೆ ಆ ದಂಪತಿಗಳನ್ನು ಬಸ್ ಸ್ಟಾಪಿಗೆ ಕಳಿಸಿತ್ತು!

ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ದಂಪತಿಗಳನ್ನು ಸರ್ಕಾರಿ ವೃದ್ಧಾಶ್ರಮವೊಂದಕ್ಕೆ ಸೇರಿಸಲು ಸಫಲರಾಗಿದ್ದಾರೆ. ದಂಪತಿಗಳು ಲಕ್ಷ್ಮೇಶ್ವರದವರಾಗಿದ್ದು, ಹುಬ್ಬಳ್ಳಿಯಲ್ಲಿರುವ ತಮ್ಮ ಮಗಳ ಮನೆಯಲ್ಲಲಿ ವಾಸವಿರಲು ಬಂದಿದ್ದರು. ದೇವಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳು ಇಳಿವಯಸ್ಸಿನಲ್ಲಿ ಮಗಳೊಂದಿಗೆ ಕಾಲ ಕಳೆಯಲು ಬಯಸಿ ಬಂದಿದ್ದರೆ, ಮಗಳು ಮಾತ್ರ ಅವರ ತ್ಯಾಗ, ಪ್ರೀತಿ ಯಾವುದನ್ನೂ ನೆನಪಿಸಿಕೊಳ್ಳದೆ ಮನೆಯಿಂದ ಹೊರಹಾಕಿದ್ದಾರೆ.
ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತ್ತಿತ್ತಂತೆ!
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications