ಜನರಿಗೆ ಮೂಲ ಸೌಕರ್ಯದ ಚಿಂತೆ ಆದ್ರೆ, ಡೆಪ್ಯೂಟಿ ಮೆಯರ್ ಗೆ ಕಾರಿನ ಚಿಂತೆ!
ಹುಬ್ಬಳ್ಳಿ. ಜುಲೈ 07 : 'ಅಜ್ಜಿಗೆ ಅರಿವೆ ಚಿಂತೆ ಆದರೆ ಮೊಮ್ಮಗಳಿಗೆ ಮದುವೆ ಚಿಂತೆ' ಎನ್ನುವಂತೆ, ಹುಬ್ಬಳ್ಳಿ-ಧಾರವಾಡ ಜನತೆಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಚಿಂತೆಯಾಗಿದ್ರೆ, ಇಲ್ಲಿನ ಮಹಾನಗರ ಪಾಲಿಕೆಯ ಮೆಯರ್ ಹಾಗೂ ಡೆಪ್ಯೂಟಿ ಮೆಯರ್ ಗೆ ಹೊಸ ಕಾರಿನ ಚಿಂತೆಯಾಗ್ಬಿಟ್ಟಿದೆ....
ಹೌದು, ವಾಹನ ಪದೇ ಪದೇ ಕೈಕೊಡುತ್ತದೆ ಎಂಬ ಕಾರಣಕ್ಕೆ ಮೇಯರ್ ಸಾಮಾನ್ಯ ಸಭೆಯಲ್ಲೇ ಧ್ವನಿ ಎತ್ತಿದ್ದಾಯ್ತು. ಬಸ್, ಆಟೋದಲ್ಲಿ ಪ್ರಯಾಣಿಸಿ ಅಸಮಾಧಾನ ವ್ಯಕ್ತಪಡಿಸಿದ್ದು ಆಯ್ತು. ಆನಂತರ ಮೇಯರ್ ಗೆ ನೂತನ ಕಾರ್ ಬಂದಿದ್ದು ಆಯ್ತು. ಇದೀಗ ಎಲ್ಲೆಂದರಲ್ಲಿ ತಮ್ಮ ಕಾರ್ ಕೈ ಕೊಡುತ್ತಿದ್ದು, ಹೊಸ ಕಾರು ನೀಡಬೇಕು ಇಲ್ಲದಿದ್ದರೆ ತಾವು ಪ್ರತಿಭಟನೆ ಹಾದಿ ಹಿಡಿಯುತ್ತೇವೆ ಎಂದು ಡೆಪ್ಯೂಟಿ ಮೆಯರ್ ಲಕ್ಷ್ಮಿಬಾಯಿ ಬಿಜವಾಡ ಬೆದರಿಕೆ ಹಾಕಿದ್ದಾರೆ.

ಈಗಾಗಲೇ ಎರಡು ಲಕ್ಷ ಕಿ.ಮೀ.ಗೂ ಹೆಚ್ಚು ಕ್ರಮಿಸಿರುವ ಕಾರಿನಲ್ಲೇ ಲಕ್ಷ್ಮಿಬಿಜವಾಡ ನಿತ್ಯ ಓಡಾಡುತ್ತಿದ್ದಾರೆ. ಎಲ್ಲೆಂದರಲ್ಲಿ ದುರಸ್ಥಿಗೆ ಬರುತ್ತಿರುವ ಕಾರಿನಿಂದ ತಾವು ರೋಸಿ ಹೋಗಿದ್ದು, ಪರಿಚಯಸ್ಥರ ಬೈಕ್ ಅಥವಾ ಆಟೋದಲ್ಲಿ ಸಂಚರಿಸುವಂತಾಗಿದೆ ಎಂಬುದು ಅವರ ಅಳಲು. ಇದನ್ನು ಸ್ವತಃ ಉಪ ಮೇಯರ್ ಅವರೇ ಪರಿಷತ್ ಕಾರ್ಯದರ್ಶಿ ಎದುರು ತಮ್ಮ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.
ನೂತನ ಕಾರಿಗಾಗಿ ಹಿಂದಿನ ಮೇಯರ್ ಆಗಿದ್ದ ಮಂಜುಳಾ ಅಕ್ಕೂರ ಹಲವು ಬಾರಿ ಪ್ರತಿಭಟಿಸಿದ್ದರು. ಹೊಸ ಕಾರು ಖರೀದಿಗೆ ಅನುಮತಿ ನೀಡದ ಆಯುಕ್ತರ ವಿರುದ್ಧವೂ ಕಿಡಿ ಕಾರಿದ್ದರು.
ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು-ಪರ ವಿರೋಧ ಚರ್ಚೆಗಳಾಗಿದ್ದವು. ಕೊನೆಗೂ ಮೇಯರ್ ಒತ್ತಡಕ್ಕೆ ಮಣಿದಿದ್ದ ಆಯುಕ್ತರು ಹೊಸ ಕಾರು ಖರೀದಿಗೆ ಅನುಮತಿ ನೀಡಿದ್ದರು.
ಆದರೆ, ಇದೀಗ ಉಪ ಮೇಯರ್ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ. ಹೊರ ಗುತ್ತಿಗೆ ಆಧಾರದ ಮೇಲೆ ಪಡೆದಿರುವ ಕಾರು ಎಲ್ಲೆಂದರಲ್ಲಿ ಕೈಕೊಡುತ್ತಿದೆ. ಇದು ಉಪ ಮೇಯರ್ ಗೆ ಸಿಟ್ಟಿಗೆ ಕಾರಣವಾಗಿದೆ.
"ಹಳೇಯ ಕಾರು ಕೊಟ್ಟಿದ್ದು, ಪದೇ ಪದೇ ಕೈಕೊಡುತ್ತಿದೆ. ಈ ಬಗ್ಗೆ ಹಲವಾರು ಹೇಳಿದರೂ ಗಮನ ಹರಿಸುತ್ತಿಲ್ಲ. ನನಗೂ ಹೊಸ ಕಾರಿಗೆ ಮನವಿ ಮಾಡಿ ಸಾಕಾಗಿ ಹೋಗಿದೆ. ಇದೇ ರೀತಿ ವರ್ತಿಸಿದರೆ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ" ಎಂದು ಲಕ್ಷ್ಮಿಬಾಯಿ ಬಿಜವಾಡ ತಿಳಿಸಿದ್ದಾರೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications