ಹುಬ್ಬಳ್ಳಿ ಜಿಲ್ಲೆಯಲ್ಲಿ ಹೆಚ್ಚಿದ ರಕ್ತದ ಅಭಾವ: ರೋಗಿಗಳ ಪರದಾಟ
ಹುಬ್ಬಳ್ಳಿ, ಮೇ, 20: ರಕ್ತದಾನ ಮಹಾದಾನ ಎಂಬುವಂತ ಮಹತ್ವದ ಮಾತು. ಆದರೆ ಈಗ ಅದೆಷ್ಟೋ ರಕ್ತದಾನದ ಶಿಬಿರಗಳು ಮರೆಯಾಗುತ್ತಿದ್ದು, ರೋಗಿಗಳಿಗೆ ಸಮರ್ಪಕವಾಗಿ ರಕ್ತ ಸಿಗದೇ ಇರುವ ಹಿನ್ನೆಲೆಯಲ್ಲಿ ರಕ್ತದ ಅಭಾವ ಹೆಚ್ಚಿದೆ. ಹಾಗೆಯೆ ವಿಧಾನಸಭಾ ಚುನಾವಣೆ ಹಿನ್ನೆಲೆ ರಕ್ತ ದಾನ ಶಿಬಿರಗಳು ನಡೆದಯದ ಕಾರಣ ಜಿಲ್ಲೆಯಲ್ಲಿ ರಕ್ತದ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ರೋಗಿಗಳು ಪರದಾಡುವಂತಾಗಿದೆ.
ಇನ್ನೂ ಜಿಲ್ಲೆಯಲ್ಲಿ ರೋಗಿಯ ಸಿಬ್ಬಂದಿಗಳು ರಕ್ತ ಹುಡಕಾಟದಲ್ಲಿ ಅಲೆದಾಡಿ ಹೈರಾಣಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಒಟ್ಟು 12 ರಕ್ತ ನಿಧಿ ಕೇಂದ್ರಗಳಿವೆ. ಇದೀಗ ರಕ್ತ ನೀಡುವ ದಾನಿಗಳು ಮುಂದೆ ಬಾರದ ಕಾರಣ ಎಲ್ಲಾ ಕಡೆಯೂ ಸಹ ರಕ್ತ ಸಿಗುತ್ತಿಲ್ಲ. ರಕ್ತ ಬೇಡಿ ಬಂದವರಿಗೆ ಇಲ್ಲ ಎಂದು ಉತ್ತರಿಸಲಾಗದೆ ರಕ್ತ ನಿಧಿ ಕೇಂದ್ರಗಳ ಸಿಬ್ಬಂದಿ ಪೇಚಿಗೆ ಸಿಲುಕುತ್ತಿದ್ದಾರೆ.

ಜಿಲ್ಲೆಯಲ್ಲಿರುವ ಎಲ್ಲ ರಕ್ತ ನಿಧಿ ಕೇಂದ್ರಗಳು ನಿರಂತರವಾಗಿ ರಕ್ತದಾನ ಶಿಬಿರ ನಡೆಸುತ್ತಿದ್ದರು. ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳು, ಜನಪ್ರತಿನಿಗಳು, ಗಣ್ಯರು ಸಹ ಹಾಗೂ ಸಂಘಟನೆಗಳು ಸಹ ರಕ್ತದಾನ ಶಿಬಿರ ಆಯೋಜಸುತ್ತಿದ್ದರು. ಚುನಾವಣೆ ಕಾರಣ ಸ್ಥಗಿತವಾಗಿದ್ದು, ರಕ್ತ ಸಿಗದೆ ರೋಗಿಗಳು ಸಿಬ್ಬಂದಿ ಬೇರೆ ಬೇರೆ ಜಿಲ್ಲೆಗೆ ಮೊರೆ ಹೋಗುವಂತಾಗಿದೆ.
ಕಿಮ್ಸ್ ಆಸ್ಪತ್ರೆ ಸೇರಿದಂತೆ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಸಹ 12 ರಕ್ತನಿಧಿ ಕೇಂದ್ರಗಳಿಗೆ ಅವಲಂಬಿತವಾಗಿವೆ. ಕಿಮ್ಸ್ ಆಸ್ಪತ್ರೆಗೆ ಉತ್ತರ ಕರ್ನಾಟಕ ಭಾಗದ 7-8 ಜಿಲ್ಲೆಗಳ ಜನರು ಚಿಕಿತ್ಸೆಗೆ ಆಗಮಿಸುತ್ತಾರೆ.
ತಲಸ್ಸೇಮಿಯಾ, ಡಯಾಲಿಸಿಸ್, ಹೆರಿಗೆ, ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದೆ.
ಈ ಉದ್ದೇಶಕ್ಕೆ ರಕ್ತ ಶೇಖರಣೆ ಮತ್ತು ಸ್ವಯಂ ಪ್ರೇರಿತ ರಕ್ತ ದಾನ ಶಿಬಿರಗಳನ್ನು ಈ ಕೇಂದ್ರಗಳು ಆಯೋಜಿಸುತ್ತವೆ. ಆದರೆ, ಈ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಅವರಿಗೆಲ್ಲರಿಗೂ ರಕ್ತ ಪೂರೈಸುವುದು ಕಷ್ಟವಾಗಿದೆ.
ಇನ್ನು ಕಿಮ್ಸ್ನ ರಕ್ತನಿಧಿ ಭಂಡಾರವು ಜಿಲ್ಲೆಯ ಪ್ರಮುಖ ರಕ್ತನಿಧಿ ಸಂಗ್ರಹ ಕೇಂದ್ರಗಳಲ್ಲಿ ಒಂದಾಗಿದೆ.
ಈ ಕೇಂದ್ರದಿಂದ ನಿತ್ಯ ಐದರಿಂದ ಆರು ಜನ ತಲಸ್ಸೇಮಿಯಾ ಪೀಡಿತ ಮಕ್ಕಳಿಗೆ ಹಾಗೂ 12ರಿಂದ 20 ಜನ ಗರ್ಭಿಣಿಯರಿಗೆ (ಹೆರಿಗೆ ಸಂದರ್ಭದಲ್ಲಿ) ರಕ್ತದ ಅವಶ್ಯಕತೆ ಇದೆ ಎಂದು ಕಿಮ್ಸ್ ರಕ್ತನಿಧಿ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ. ಆದರೇ ದುಡ್ಡು ಕೊಟ್ಟರು ರಕ್ತ ಸಿಗುತ್ತಿಲ್ಲ. ಹಣ ಕೊಟ್ಟರು ಸಹ ತುರ್ತು ರೋಗಿಗಳಿಗೆ ಅವಶ್ಯಕವಾದ ರಕ್ತ ಸಿಗುತ್ತಿಲ್ಲ.
ಅದರಲ್ಲಿ ಹೊಲಿಕೆಯಾಗುವ ರಕ್ತ ಸಿಗುವುದು ಇನ್ನೂ ಅಪರೂಪ ಆಗಿದೆ. ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತದಾನಿ ಕರೆಯ್ದೊದು ರಕ್ತ ಕೊಡುವುದರ ಜೊತೆ ಹಣ ನೀಡಿ ರಕ್ತ ಪಡೆಯುವ ಪರಿಸ್ಥಿತಿ ಎದುರಾಗಿದೆ. ಒಂದು ಯುನಿಟ್ ರಕ್ತ ರಕ್ತ ದಾನಕ್ಕೆ 1,000-1,500 ರೂಪಾಯಿ ನೀಡಬೇಕಿದೆ. ಇನ್ನು ರೋಗಿಗಳಿಗೆ ರಕ್ತ ಬೇಕಾದರೆ ಕೆಲವು ಕಡೆ ಒಂದು ದಿನ ಮುಂಚಿತವಾಗಿ ಹೇಳಿ ಬುಕ್ ಮಾಡುವುದು ಅನಿರ್ವಾವಾಗಿಬಿಟ್ಟಿದೆ.
ಒಟ್ಟಿನಲ್ಲಿ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳ ಸಂಖ್ಯೆ ಕಡಿಮೆ ಆಗಿದ್ದು, ಇದರಿದಿಂದ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ರಕ್ತದಾನಿಗಳು ಸ್ವಯಂ ಪೇರಿತರಾಗಿ ಮುಂದೆ ಬಂದರೆ ರೋಗಿಗಳ ಜೀವ ಉಳಿಸಬಹುದಾಗಿದೆ. ಇನ್ನಾದರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕಿದೆ ಎನ್ನುವುದು ಜಿಲ್ಲೆಯ ಜನತೆಯ ಆಶಯವಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications