ಹಾಸನಾಂಬೆ ದರ್ಶನದಲ್ಲಿ ಅವ್ಯವಸ್ಥೆ: ಜಿಲ್ಲಾಡಳಿತಕ್ಕೆ ಭಕ್ತಾಧಿಗಳ ನೇರ ಪ್ರಶ್ನೆ
ಹಾಸನ, ನವೆಂಬರ್ 01: ಹಾಸನಾಂಬೆಯ ಖ್ಯಾತಿ ಎಲ್ಲೆಡೆ ಹರಡಿ, ಮಹಿಮೆ ಪಸರಿಸಿರುವುದರಿಂದ. ಅದರಲ್ಲೂ ಈಗಿನ ಸೋಷಿಯಲ್ ಮೀಡಿಯಾಗಳಿಂದಾಗಿ ಎಲ್ಲರೂ ದೇವಿಯ ದರ್ಶನಕ್ಕೆ ಹಾತೊರೆಯುತ್ತಿರುತ್ತಾರೆ. ಅದಕ್ಕೆ ಪೂರಕವೆಂಬಂತೆ ವಿ.ವಿ.ಐ.ಪಿ ಪಾಸ್ ಗಳು ಹಾಗೂ ಆನ್ಲೈನ್ ಟಿಕೆಟ್ ಗಳು ಲಭ್ಯವಿದ್ದು ಎಲ್ಲರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡುವಂತಹಾ ವ್ಯವಸ್ಥೆ ಮಾಡಿದ್ದಾರೆ.
ಆದರೆ, ಇದರ ನಡುವಲ್ಲಿ ಧರ್ಮ ದರ್ಶನ ಪಡೆಯುವವರ ಪಾಡು ಹೇಳತೀರದಾಗಿದೆ. ಹಣ ಪಾವತಿಸಿ ಪಡೆಯುವ ಟಿಕೆಟ್ ಹಾಗೂ ಪಾಸ್ ಗಳಿಗೆ ಹೆಚ್ಚು ಮನ್ನಣೆ ನೀಡುವುದಾದರೆ ಧರ್ಮದರ್ಶನದ ಸರತಿಯ ಅಗತ್ಯವಾದರೂ ಏನಿದೆ..? ಹಾಸನಾಂಬೆ ನೆಪದಲ್ಲಿ ಹಣ ಕೇಂದ್ರಿತ ಯೋಚನೆಯೇ ಈ ಅಧ್ವಾನಕ್ಕೆ ಮೂಲವೆಂಬುದನ್ನು ಬೆರಳು ಮಾಡಿ ತೋರಿಸುತ್ತಿದೆ ಈ ಬಾರಿಯ (ಅ)ವ್ಯವಸ್ಥೆ.

ದೇವರ ದರ್ಶನದ ವಿಚಾರದಲ್ಲಿಯೂ ರಾಜಕೀಯ ತರುವುದು ಅನವಶ್ಯಕ. ಹಣದ ಟಿಕೆಟ್ ಹಾಗೂ ಉಚಿತ ದರ್ಶನದ ಸರತಿಯಲ್ಲಿ ಕಾಯುವವರು. ಕೊಂಚ ತಡವಾದರೂ ದೇವರ ದರ್ಶನ ಮಾಡಿಕೊಂಡೇ ಹೋಗಬೇಕೆಂದು ಕಾಯುವಾಗ ಜಿಲ್ಲೆಯ ಜನರ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡುವುದು ಪಾಸ್ ಹೆಸರಲ್ಲಿ ಹೆಚ್ಚೆಚ್ಚು ಜನರನ್ನು ಸಾಲಿಗೆ ಸೇರಿಸುವುದು, ಅಲ್ಲಿನ ಕರ್ತವ್ಯನಿರತರು ತಮಗೆ ಬೇಕಾದವರನ್ನು ಸರತಿಗೆ ಸೇರಿಸುವುದು ಹೀಗೆ.
ಜಿಲ್ಲೆಯ ಜನರಿಗಿಂತ ಹೆಚ್ಚು ಹೊರಜಿಲ್ಲೆಯವರು ಬಂದಿರುವುದು ಸಂತಸವೇ ಆದರೂ.. ಮೊದಲ ಆದ್ಯತೆ ನಮ್ಮ ಹಾಸನ ಜಿಲ್ಲೆಯವರಿಗೆ ಇರಬೇಕಲ್ಲವೇ..? ತುಮಕೂರಿನ ಜನರನ್ನು ಬಸ್ಸುಗಳಲ್ಲಿ ತುಂಬಿ ಕರೆತಂದು ಭಕ್ತಿಯ ಹೆಸರಲ್ಲಿ ಮಾಡುತ್ತಿರುವ ರಾಜಕಾರಣವನ್ನು ನೋಡಿಯೂ ನೋಡದಂತಿರಲು ಸಾಧ್ಯವೇ..?

ಅತ್ಯುತ್ಸಾಹ-ಸೂಕ್ಷ್ಮತೆಯ ಕೊರತೆಯ ಡಿ ಸಿ - ಎ ಸಿ
ಇನ್ನು ಜಿಲ್ಲಾಧಿಕಾರಿ ಹಾಗೂ ಸಿಬ್ಬಂದಿಗಳ ನಡುವಿನ ಹೊಂದಾಣಿಕೆಯ ಕೊರತೆಯಾ ಎಂದು ನೋಡಲು ಹೊರಟರೆ ಡಿ ಸಿ - ಎಸಿಯ ಅತ್ಯುತ್ಸಾಹ - ಸೂಕ್ಷ್ಮತೆಯ ಕೊರತೆ ನಿಚ್ಚಳವಾಗಿ ಕಂಡುಬರುತ್ತದೆ. ಸುತ್ತಮುತ್ತಲಿನ ಪರಿವೇ ಇಲ್ಲದೆ ಆಡುವ ಮಾತುಗಳು, ನಡೆದುಕೊಳ್ಳುವ ರೀತಿ ಜನಸಾಮಾನ್ಯರ ಮೇಲೆ ಬೀರುವ ಪರಿಣಾಮದ ಕುರಿತು ಅಧಿಕಾರಿಗಳು ಎಚ್ಚರದಿಂದಿರುವುದು ಒಳಿತಾಗಿದೆ.
ಜಿಲ್ಲಾಡಳಿತ ಸೂಕ್ತ ವ್ಯವಸ್ಥೆಗೆ ಸಿದ್ದವಿರಲಿಲ್ಲವೆ...?
ಸಾಮಾನ್ಯ ಜನರು ದರ್ಶನದ ಬಗ್ಗೆ ಮಾತ್ರವಲ್ಲ.. ತಮ್ಮ ಮೇಲಾದ ಲಾಠಿ ಚಾರ್ಜ್ ಗೆ ದನಿ ಎತ್ತಿದರೆ ಉತ್ತರಿಸುವವರಾರು..? ಲಕ್ಷಾಂತರ ಜನರು ದರ್ಶನಕ್ಕೆ ಬರುವ ನಿರೀಕ್ಷೆ ಇದ್ದಾಗ ಅದಕ್ಕೆ ತಕ್ಕ ವ್ಯವಸ್ಥೆ ಮೊದಲೇ ಆಗಿರಬೇಕು. ಸಣ್ಣ-ಪುಟ್ಟ ಲೋಪದೋಷಗಳಾದರೆ ಸರಿಪಡಿಸಿಕೊಳ್ಳಬಹುದು. ಆದರೆ, ಈ ನೂಕುನುಗ್ಗಲು, ಸರತಿ ವ್ಯವಸ್ಥೆಯಲ್ಲಿ ಉಂಟಾದ ಲೋಪದೋಷಗಳಿಗೆ, ಮೂತ್ರ ವಿಸರ್ಜನೆಯ ವಾಸನೆಗೆ ಸ್ಪಂದಿಸಿಯೂ ಸ್ಪಂದಿಸಂತೆ ಮಾಡಿರುವ ಅವ್ಯವಸ್ಥೆಗೆ ಹೊಣೆ ಹೊರಲು ಜಿಲ್ಲಾಡಳಿತ ಸಿದ್ಧವಾಗಿದೆಯೇ..? ಇದು ಪ್ರತಿ ವರ್ಷ ಜರುಗುವ ನಿರೀಕ್ಷಿತ ಕಾರ್ಯಕ್ರಮ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ದವಿರಲಿಲ್ಲವೇ..? ಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ.
-
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ












Click it and Unblock the Notifications