ಹುಬ್ಬಳ್ಳಿ ಜನರ ಭಕ್ತಿಭಾವದ ಮಜ್ಜನದಲ್ಲಿ ಮಿಂದೆದ್ದ ಶಿವ
ಹುಬ್ಬಳ್ಳಿ,ಮಾರ್ಚ್,07: ಇಡೀ ನಗರವೇ ಶಿವನ ಧ್ಯಾನದಲ್ಲಿ ಮಗ್ನವಾಗಿದೆ. ಎಲ್ಲೆಡೆ ಓಂ ನಮಃ ಶಿವಾಯ, ಶಿವಾಯ ನಮಃ ಮಂತ್ರಘೋಷಗಳು ಕೇಳಿ ಬರುತ್ತಿವೆ, ಶಿವನ ದೇವಾಲಯದಲ್ಲಿ ಹಲವು ಹೋಮ-ಹವನ ನಡೆಯುತ್ತಿವೆ. ಶಿವನ ಮೂರ್ತಿ, ಲಿಂಗಗಳು ಹಲವಾರು ಮಜ್ಜನಗಳಲ್ಲಿ ಮಿಂದೇಳುತ್ತಿವೆ.
ಶಿವನ ದೇವಾಲಯಗಳಲ್ಲಿ ಭಕ್ತರು ತುಂಬಿತುಳುಕುತ್ತಿದ್ದು, ದೇವಾಲಯಗಳಲ್ಲಿ ಶಿವನಿಗೆ ವಿವಿಧ ಹೂ, ಬಿಲ್ವಾಪತ್ರೆಗಳಿಂದ ಮಾಡಿದ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಕ್ಕಳು, ವೃದ್ಧರೂ ಪ್ರತಿಯೊಬ್ಬರು ಮಹಾಶಿವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಜಾಗರಣೆಯ ಪ್ರಯುಕ್ತ ಹಲವಾರು ದೇವಾಲಯಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.[ಶಿವರಾತ್ರಿ : ಜ್ಯೋತಿರ್ಲಿಂಗಗಳ ಪೌರಾಣಿಕ ಹಿನ್ನೆಲೆ ಗೊತ್ತಾ?]
ಒಟ್ಟಿನಲ್ಲಿ ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳ ದೇವಾಲಯಗಳಲ್ಲಿ ಮಹಾಶಿವರಾತ್ರಿ ಹಬ್ಬದ ಮುಂಜಾನೆಯಿಂದಲೇ ಪೂಜೆ ಪುನಸ್ಕಾರಗಳು ಆರಂಭವಾಗಿದ್ದವು. ಹಣ್ಣು-ಕಾಯಿ ಹಿಡಿದ ಜನರು ಸಾಲುಗಟ್ಟಿ ನಿಂತು ಶಿವನಿಗೆ ಪೂಜೆ ಸಲ್ಲಿಸಿದರು. ಬನ್ನಿ ಹುಬ್ಬಳ್ಳಿಯ ಶಿವರಾತ್ರಿ ಸಂಭ್ರಮ ಹೇಗಿದೆ ನೋಡೋಣ.

ಶಿವಲಿಂಗಕ್ಕೆ ಭಕ್ತರಿಂದ ಎಳನೀರು, ಹಾಲಿನ ಮಜ್ಜನ
ಹುಬ್ಬಳ್ಳಿಯ ಶಿವದೇವಾಲಯದಲ್ಲಿರುವ ಲಿಂಗಕ್ಕೆ ನೂರಾರು ಭಕ್ತರಿಂದ ಹಾಲು, ಎಳನೀರಿನ ಅಭಿಷೇಕ ನಡೆಯಿತು.

ಜನರನ್ನು ಸೆಳೆದ ಶ್ವೇತ ಶಿವಮೂರ್ತಿ
ಹುಬ್ಬಳ್ಳಿಯ ಶಿವಪುರ ಉದ್ಯಾನವನದ ಬಳಿ ಇರುವ ಶಿವನ ಮೂರ್ತಿಯು ಜನರನ್ನು ತನ್ನತ್ತ ಸೆಳೆಯುತ್ತಿದೆ. ಹೂವಿನ ಮಾಲೆ, ಬಣ್ಣದ ಬಣ್ಣದ, ಪುಟ್ಟ ಪುಟ್ಟ ಬಣ್ಣದ ದೀಪಗಳಿಂದ ಕಳೆಗಟ್ಟಿರುವ ಶ್ವೇತ ವರ್ಣದ ಶಿವಮೂರ್ತಿಗೆ ಜನರು ಪೂಜೆ ಸಲ್ಲಿಸಿ ಪುನೀತರಾದರು.

ಬಿಲ್ವಾಪತ್ರೆ, ಎಕ್ಕದ ಹೂವಿನ ಅಲಂಕಾರ
ಎಕ್ಕದ ಹೂವಿನ ಮಾಲೆ, ಸೇವಂತಿಗೆ, ಬಿಲ್ವಾಪತ್ರೆ ಹಾರ, ಗುಲಾಬಿ ಹೀಗೆ ನಾನಾ ಹೂವಿನ ಹಾರಗಳ ನಡುವೆ ಶಿವ ಕಂಗೊಳಿಸಿದ್ದು ಹೀಗೆ.

ಸಾಲುಗಟ್ಟಿ ನಿಂತ ಭಕ್ತರು
ಮಹಾಶಿವರಾತ್ರಿ ಪ್ರಯುಕ್ತ ಭಕ್ತರು ಶಿವನ ಮೂರ್ತಿಗೆ ಪೂಜೆ ಸಲ್ಲುವುದಗೋಸ್ಕರ ಮುಂಜಾನೆಯಿಂದಲೇ ಧಗೆಧಗೆ ಬಿಸಿಲನ್ನು ಲೆಕ್ಕಿಸದೆ ಸಾಲುಗಟ್ಟಿ ನಿಂತಿದ್ದರು.

ಶ್ರದ್ಧಾ ಭಕ್ತಿಯಿಂದ ಪೂಜೆ
ಹುಬ್ಬಳ್ಳಿ, ಧಾರವಾಡ ಜನರು ಬಹಳ ಶ್ರದ್ಧಾ ಭಕ್ತಿಯಿಂದ ಶಿವನಿಗೆ ತುಪ್ಪದ ಆರತಿ, ಕರ್ಪೂರ ದೀಪ ಬೆಳಗಿ ತಮ್ಮ ಭಕ್ತಿ ಪ್ರದರ್ಶಿಸಿದರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications