ಹುಬ್ಬಳ್ಳಿಯ 3 ವರ್ಷದ ಪುಟಾಣಿಯಿಂದ 'ಇಂಡಿಯಾ ಬುಕ್ ಆಫ್ ರೆಕಾರ್ಡ್'
ಧಾರವಾಡ, ಮೇ 11: ವಿದ್ಯಾಕಾಶಿ ಎಂದೇ ಖ್ಯಾತಿ ಪಡೆದ ಧಾರವಾಡದ ಮಲ್ಟಿ ಟ್ಯಾಲೆಂಟೆಡ್ ಪುಟಾಣಿ ಅನೋಶ್ ಎಂಬ ಬಾಲಕನಿಗೆ ಐಬಿಆರ್ ಕಿರೀಟ ದೊರೆತಿದೆ. ಆಡುವ ವಯಸ್ಸಲ್ಲೇ 'ಇಂಡಿಯಾ ಬುಕ್ ಆಫ್ ರೆಕಾರ್ಡ್' (ಐಬಿಆರ್)ನಲ್ಲಿ ಇವರು ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಮೂರು ವರ್ಷ ಅನೋಶ್ ರೋಹಿತ್ ಸ್ವಾಮಿ ಎಂಬ ಪುಟಾಣಿಯು ರೋಹಿತ್ ಸ್ವಾಮಿ ಹಾಗೂ ಮರ್ಲಿನ್ ರೋಹಿತ್ ಸ್ವಾಮಿ ದಂಪತಿಗಳ ಮಗ. ಇವರು ಮೂಲತಃ ದಾಂಡೇಲಿ ನಿವಾಸಿಗಳಾಗಿದ್ದು, ರೋಹಿತ್, ಮರ್ಲಿನ್ ಹುಬ್ಬಳ್ಳಿಯ ವಿದ್ಯಾನಗರದ ನೆಲೆಸಿದ್ದಾರೆ.

ರೋಹಿತ್, ಮರ್ಲಿನ್ ದಂಪತಿಯು ತಮ್ಮ ಮಗ 2 ವರ್ಷ ವಯಸ್ಸಿನಿಂದಲೇ ಅನೋಶ್ ತರಬೇತಿ ಆರಂಭಸಿದ್ದಾರೆ. ಅನೋಶ್ ತಾಯಿ ಅವರು ಸತತ ತರಬೇತಿಯಿಂದ ಹಲವು ವಿಷಯಗಳ ಬಗ್ಗೆ ಅನೋಶ್ ಜ್ಞಾನ ಹೊಂದುವತಾಯಿತು.
ಐಬಿಆರ್ಗೆ ಅನೋಷ್ ವಿಡಿಯೋ ಮೇಲ್
ಮನೆಯಲ್ಲೇ ತಾಯಿಯಿಂದ ತರಬೇತಿ ಜತೆಗೆ ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ಸಹ ಸಿಕ್ಕಿದೆ. ಮನೆಯಲ್ಲಿ ಅನೋಶ್ ನ ಪ್ರತಿಭೆಯನ್ನು ದಂಪತಿಗಳು ವಿಡಿಯೋ ಮಾಡಿಟ್ಟಿದ್ದಾರೆ. ಈ ಎಲ್ಲ ವಿಡಿಯೋಗಳನ್ನು 'ಇಂಡಿಯಾ ಬುಕ್ ಆಫ್ ರೆಕಾರ್ಡ್' (ಐಬಿಆರ್) ನ ಮೇಲ್ ಐಡಿ ಗೆ ವಿಡಿಯೋಗಳನ್ನು ಪಾಲಕರು ಕಳುಹಿಸಿದ್ದರು.
ವಿಡಿಯೋಗಳನ್ನು ಪರಿಶೀಲಿಸಿದ ಸಂಬಂಧಿಸಿದ ಅಧಿಕಾರಿಗಳ ಅನೋಶ್ ಪುಟಾಣಿಗೆ 'ಐಬಿಆರ್ ಕಿರೀಟ' ತೊಡಿಸಿದ್ದಾರೆ. ಹಲವು ವಿಷಯಗಳ ಕುರಿತು ಅಪಾರ ಪ್ರತಿಭೆ, ಜ್ಞಾನ ಹೊಂದಿರುವ ಕಾರಣ ಈ ಐಬಿಆರ್ ನಲ್ಲಿ ಬಾಲಕ ಸಾಧನೆ ಮಾಡಿದ್ದಾರೆ.

ಪಟಪಟ ಎಂದು ಉತ್ತರಿಸುವ ಅನೋಶ್
ಅನೋಶ್ ಇಷ್ಟು ಚಿಕ್ಕವಯಸ್ಸಿನಲ್ಲಿಯೇ, ಭಾರತದ ಪ್ರಧಾನ ಮಂತ್ರಿ ಹೆಸರು, ಪ್ರಾಸಗಳು, ಪ್ರಾರ್ಥನೆ, ವಾರಗಳು, ರಾಷ್ಟ್ರೀಯ ಚಿಹ್ನೆಗಳನ್ನು ಬಗ್ಗೆ ಮಾತನಾಡುತ್ತಾರೆ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಇಂದ್ರಿಯ ಅಂಗಗಳು, ಸಂಚಾರಿ ಸೂಚನೆಗಳು, ಹಣ್ಣುಗಳ ಹೆಸರು, ವಿರುದ್ದಾರ್ಥಕ ಪದ, ಬೆರೆಳೆಣಿಕೆ, 14 ಪ್ರಾಣಿಗಳ 10 ಪಕ್ಷಿಗಳ ಹೆಸರು ಗುರುತಿಸುತ್ತಾರೆ.
ಇಷ್ಟೇ ಅಲ್ಲದೇ 8 ವೃತ್ತಿಪರಗಳನ್ನು ಗುರುತಿಸುವೇಕೆ ಸೇರಿ ಹಲವು ವಿಷಯಗಳ ಬಗ್ಗೆ ಜ್ಞಾನ ಹೊಂದಿರುವ ಅನೋಶ್ ಅವರ ಸಾಧನೆ ಕಂಡು ಅವರ ತಂದೆ-ತಾಯಿ ಹಾಗೂ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಮಗ ಇಷ್ಟಪಟ್ಟಿದ್ದನ್ನು ಕಳಿಸಲು, ಇಷ್ಟದ ವಯಲದಲ್ಲಿ ಬೆಳೆಸಲು ಸಿದ್ಧರಿಸಿದ್ದಾರೆ. ಇನ್ನಷ್ಟ ವಿಶೇಷ ವಿಷಯಗಳ ಕುರಿತು ಮಗುವಿಗೆ ನಿರಂತರ ಜ್ಞಾನ ತರಬೇತಿ ನೀಡಲಾಗುವುದು ಎಂದು ಪೋಷಕರು ತಿಳಿಸಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications