ಹೃದಯಾಘಾತದಿಂದ ಕಾಳಗ ಕಲಿ ಕಮಲಾಪುರದ ಜಂಗ್ಲಿ ಸಾವು: ಅಭಿಮಾನಿಗಳ ಕಣ್ಣೀರ ಕೋಡಿ
ಧಾರವಾಡ, ಜುಲೈ 03: ಅದು ಕಾಲು ಕೆದರಿ ಕಾಳಗಕ್ಕೆ ನಿಂತರೆ ಎದುರಾಳಿಗಳ ಎದೆಯಲ್ಲಿ ನಡುಕ. ಕಣದಲ್ಲಿ ಕಮಲಾಪುರದ ಜಂಗ್ಲಿ ಕಾಳಗಕ್ಕೆ ಇಳಿಯುತ್ತಾನೆ ಎಂದರೆ ಇಡೀ ಕಣವೇ ಜನರಿಂದ ಕಿಕ್ಕಿರಿದು ತುಂಬಿರುತ್ತಿತ್ತು. ಏಳು ವರ್ಷದ ಹರೆಯದ ಕಮಲಾಪುರದ ಜಂಗ್ಲಿ ಇನ್ನಿಲ್ಲ ಎಂಬುದು ಅದರ ಅಭಿಮಾನಿಗಳಿಗೆ ಬರ ಸಿಡಿಲು ಬಡಿದಂತಾಗಿದೆ.
ಸಾಲು ಸಾಲು ಮೆಡಲ್ಗಳು, ಮನೆ ಮುಂದೆ ಜಮಾಯಿಸಿರುವ ಜಂಗ್ಲಿ ಅಭಿಮಾನಿಗಳು, ಮನೆಯ ಮಗನನ್ನೇ ಕಳೆದುಕೊಂಡವರಂತೆ ಕಣ್ಣೀರಿಡುತ್ತಿರುವ ಕುಟುಂಬ ಈ ಎಲ್ಲ ಮನಮಿಡಿಯುವ ದೃಶ್ಯಗಳು ಕಂಡು ಬಂದದ್ದು ಧಾರವಾಡದ ಕಮಲಾಪುರದಲ್ಲಿ.

ಕಳೆದ ಏಳು ವರ್ಷಗಳ ಹಿಂದೆ ಕಮಲಾಪುರದ ಮಂಜುನಾಥ ಅಮ್ಮಿನಭಾವಿ ಕುಟುಂಬದವರು ಟಗರಿನ ಮರಿ ತಂದು ಜೋಪಾನ ಮಾಡಿದ್ದರು. ಮನೆಯವರ ಪ್ರೀತಿ ಹಾಗೂ ಸಾತ್ವಿಕ ಆಹಾರ ತಿಂದು ಕಟ್ಟುಮಸ್ತಾಗಿ ಬೆಳೆದ ಟಗರಿಗೆ ಪ್ರೀತಿಯಿಂದ ಕಮಲಾಪುರದ ಜಂಗ್ಲಿ ಎಂದು ಹೆಸರಿಟ್ಟಿದ್ದರು.
ಕಳೆದ ಏಳು ವರ್ಷಗಳ ಅವಧಿಯಲ್ಲಿ ನಾನಾ ಊರುಗಳಲ್ಲಿ ಏರ್ಪಡಿಸಿದ್ದ ಟಗರಿನ ಕಾಳಗದಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದಿತ್ತು. ಸ್ಪರ್ಧೆಗೆ ಜಂಗ್ಲಿ ಬರುತ್ತದೆ ಎಂದರೆ ಎಲ್ಲರೂ ಅದರ ಕಾಳಗ ನೋಡಲು ತುದಿಗಾಲ ಮೇಲೆ ಬಂದು ನಿಲ್ಲುತ್ತಿದ್ದರು. ಸ್ವಂತ ತಮ್ಮ ಮನೆಯ ಮಗನಂತೆಯೇ ಈ ಟಗರು ಮರಿಯನ್ನು ಇವರು ಜೋಪಾನ ಮಾಡಿದ್ದರು. ಏಳು ವರ್ಷಗಳಲ್ಲಿ ಸಾಕಷ್ಟು ಹವಾ ಸೃಷ್ಟಿ ಮಾಡಿದ್ದ ಜಂಗ್ಲಿ ಇದೀಗ ಹೃದಯಾಘಾತಕ್ಕೊಳಗಾಗಿ ಅಕಾಲಿಕ ಮರಣ ಹೊಂದಿದೆ.

ತಮ್ಮ ಕೈತುತ್ತು ತಿನ್ನಿಸಿ ಬೆಳೆಸಿದ್ದ ಟಗರಿನ ಮರಿ ಇದೀಗ ಕಣ್ಮರೆಯಾಗಿದ್ದಕ್ಕೆ ಮನೆಯ ಸದಸ್ಯರು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಅಲ್ಲಿ ಸೇರಿದ್ದವರ ಕಣ್ಣುಗಳನ್ನೂ ಒದ್ದೆ ಮಾಡಿದ್ದವು. ನಿನ್ನೆ ರಾತ್ರಿ ಹೃದಾಯಾಘಾತಕ್ಕೊಳಗಾದ ಜಂಗ್ಲಿಯನ್ನು ಇಂದು ಸಂಪ್ರದಾಯ ಬದ್ಧವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ. ಮನೆಯ ಮಗನನ್ನೇ ಕಳೆದುಕೊಂಡವರಂತೆ ಶೋಕಸಾಗರದಲ್ಲಿ ಮುಳುಗಿದ್ದ ಆ ಕುಟುಂಬ ಮನೆಯಲ್ಲಿ ಟಗರಿನ ಅಂತಿಮ ದರ್ಶನಕ್ಕಿಟ್ಟಿದ್ದರು. ಆನಂತರ ಪೂಜೆ ಪುನಸ್ಕಾರದ ನಂತರ ಅವರದ್ದೇ ಆದ ಭೈರಿದೇವರಕೊಪ್ಪದ ಹೊಲದಲ್ಲಿ ಅದರ ಅಂತ್ಯಸಂಸ್ಕಾರ ಮಾಡಿದ್ದಾರೆ.
ಒಟ್ಟಾರೆ ಕಮಲಾಪುರದ ಜಂಗ್ಲಿಗೆ ಇಂದು ಭಾವಪೂರ್ಣ ವಿದಾಯ ಹೇಳಲಾಗಿದೆ. ಕಮಲಾಪುರದ ಜನ ಜಂಗ್ಲಿ ಇಲ್ಲದ ಟಗರಿನ ಕಾಳಗವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾದಂತಾಗಿದೆ. ಮನೆಯ ಮಗನಂತೆ ಕಂಡಿದ್ದ ಕರಿಚೆಂಡು ಹಾಗೂ ಜಂಗ್ಲಿ ಎಂಬ ಹೆಸರಿನಿಂದ ಕರೆಯಿಸಿಕೊಳ್ಳುತ್ತಿದ್ದ ಟಗರಿನ ಮರಿ ಅಕಾಲಿಕವಾಗಿ ಮರಣ ಹೊಂದಿದ್ದರಿಂದ ಇಡೀ ಕಮಲಾಪುರದ ಜನ ಶೋಕ ಸಾಗರದಲ್ಲಿ ಮುಳುಗಿದ್ದಂತೂ ಸುಳ್ಳಲ್ಲ.
-
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications