ಹುಬ್ಬಳ್ಳಿ: ಕೊಪ್ಪೀಕರ ರಸ್ತೆಯಲ್ಲಿ ಭಾರತ್ ಬ್ಯಾಂಕ್ ಶಾಖೆ ಆರಂಭ
ಹುಬ್ಬಳ್ಳಿ, ಜುಲೈ, 14: ಭಾರತ್ ಬ್ಯಾಂಕ್ ನ 97ನೇ ಶಾಖೆ ಹುಬ್ಬಳ್ಳಿಯಲ್ಲಿ ಆರಂಭವಾಗಿದ್ದು ಜನರಿಗೆ ಸಕಲ ಸೇವೆ ಒದಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಬ್ಯಾಂಕ್ ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ತಿಳಿಸಿದರು. ಅವರು ಗುರುವಾರ ನಗರದ ಕೊಪ್ಪೀಕರ ರಸ್ತೆಯಲ್ಲಿ ಭಾರತ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು
ಮುಂಬೈಯ ಬಿಲ್ಲವರ ಅಸೋಸಿಯೇಶನ್ ನಡೆಸುತ್ತಿರುವ ನಮ್ಮ ಬ್ಯಾಂಕ್ ಮಹಾರಾಷ್ಟ್ರದಲ್ಲಿ 73, ಕರ್ನಾಟಕದಲ್ಲಿ 18 ಮತ್ತು ಗುಜರಾತ್ ರಾಜ್ಯದಲ್ಲಿ 4 ಶಾಖೆಗಳನ್ನು ಹೊಂದಿದೆ. ಭಾರತೀಯರ ಮಿತವ್ಯಯ ಮತ್ತು ಹಣಕಾಸು ನಿರ್ವಹಣೆ ಬಗ್ಗೆ ಅರಿತಿರುವ ನಮ್ಮ ಸಂಸ್ಥೆಯು ಗ್ರಾಹಕರ ಸೇವೆಯಲ್ಲಿ ಸದಾ ಸನ್ನದ್ಧವಾಗಿರುತ್ತದೆ. ಹೀಗಾಗಿಯೇ ಹುಬ್ಬಳ್ಳಿಯಲ್ಲಿ ಬೆಳಗಿನ ಹೊತ್ತು ಮತ್ತು ಸಂಜೆಯ ನಂತರವೂ ಬ್ಯಾಂಕ್ ಕಾರ್ಯಾರಂಭ ಮಾಡಲಾಗಿದೆ ಎಂದರು.[ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ವೈಫೈ: ಧಾರವಾಡಕ್ಕೂ ಶೀಘ್ರ]
ಕಳೆದ ವರ್ಷದಲ್ಲಿ ಶೇ. 16.45 ರಷ್ಟು ಲಾಭ ಪಡೆದುಕೊಂಡು 20 ಹೊಸ ಶಾಖೆಗಳನ್ನು ಆರಂಭಿಸಲಾಗಿದೆ. ನಮ್ಮ ಗ್ರಾಹಕರಿಗೆ ಶೇ. 15 ರಷ್ಟು ಡಿವಿಡೆಂಡ್ ನೀಡಲು ಈ ವರ್ಷ ನಿರ್ಧರಿಸಲಾಗಿದೆ ಎಂದರು.
ಬ್ಯಾಂಕ್ ಸಾಧನೆಯ ವಿವರ ನೀಡಿ, ಒಟ್ಟು ಬಂಡವಾಳ 181.66 ಕೋ.ರೂ. ಕಾಯ್ದಿರಿಸಿದ ನಿಧಿ 720.77 ಕೋ.ರೂ. ಪಿಕ್ಸ ಡಿಪಾಜಿಟ್ 7,277.45 ಕೋ.ರೂ. ಸೇವಿಂಗ್ ಖಾತೆಯಲ್ಲಿ 1,124.82 ಕೋ.ರೂ ಇದೆ ಎಂದು ಇತರೆ ಲೆಕ್ಕಪತ್ರಗಳನ್ನು ವಿವರಿಸಿದರು.[ಪ್ರತಿದಿನ ಧೂಳಿನಲ್ಲಿ ಜಳಕ ಮಾಡುತ್ತಿರುವ ಹುಬ್ಬಳ್ಳಿ ಮಂದಿ]
ಬ್ಯಾಂಕ್ ಆಡಳಿತ ನಿರ್ದೇಶಕ ಸಿ.ಆರ್.ಮೂಲ್ಕಿ, ಮುಖ್ಯ ಪ್ರಧಾನ ಪ್ರಬಂಧಕ ಅನಿಲಕುಮಾರ್ ಆರ್ ಆಮೀನ್, ಮಹಾಪ್ರಬಂಧಕ ನಿತ್ಯಾನಂದ ಡಿ.ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.