Get Updates
Get notified of breaking news, exclusive insights, and must-see stories!

ಧಾರವಾಡದ ಆಕಾಶವಾಣಿ ಶಾಖೆ ಮುಚ್ಚಲು ಮುಂದಾದ ಕೇಂದ್ರ ಸರ್ಕಾರ; ಜನಾಕ್ರೋಶ

ಧಾರವಾಡ, ಅಕ್ಟೋಬರ್‌, 20: ಕಳೆದ 29 ವರ್ಷಗಳಿಂದ ಉತ್ತರ ಕರ್ನಾಟಕದ ಜನರಿಗೆ ರಸದೌತಣ ನೀಡಿದ್ದ ಧಾರವಾಡದ ಪ್ರಾದೇಶಿಕ ಸುದ್ದಿ ಘಟಕ, ಪ್ರದೇಶ ಸಮಾಚಾರದ ಶಾಖೆಯನ್ನು ಮುಚ್ಚುವಂತಹ ಆತಂಕ ಎದುರಾಗಿದೆ. ಈ ಭಾಗದ ಜನರ ಜೀವನಾಡಿ ಆಗಿದ್ದ ಪ್ರದೇಶ ಸಮಾಚಾರ ಇನ್ನೂ ನೆನಪು ಮಾತ್ರ ಆಗುತ್ತದೆಯಾ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ.

ಎಐಆರ್‌ ಶಾಖೆ ಮುಚ್ಚಲು ಪ್ಲಾನ್‌

ಆಕಾಶವಾಣಿಯ ಪ್ರಾದೇಶಿಕ ಸುದ್ದಿ ಘಟಕ, ಪ್ರದೇಶ ಸಮಾಚಾರದ ಧಾರವಾಡ ಶಾಖೆಯನ್ನು ಮುಚ್ಚುವಂತೆ ಕೇಂದ್ರ ಸರ್ಕಾರದ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ನಿಲುವು ಜಿಲ್ಲೆಯ ನಾಗರಿಕರ ಸಂಘಟನೆಗಳನ್ನು ಕೆರಳಿಸಿದೆ. ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಜನಪ್ರಿಯಗೊಳಿಸಲು ಈ ಶಾಖೆ ತುಂಬಾ ಸಹಕಾರಿ ಆಗಿತ್ತು. ಸರ್ಕಾರ ಆದೇಶವನ್ನು ಜಾರಿಗೊಳಿಸಲು ಮುಂದಾದರೆ ಹೋರಾಟ ನಡೆಸುವುದಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.

ಉತ್ತರ ಕರ್ನಾಟಕದ ಪ್ರತಿ ಹಳ್ಳಿ -ಹಳ್ಳಿಗಳಲ್ಲೂ ಈ ಪ್ರದೇಶ ಸಮಾಚಾರ ಸುಪ್ರಭಾತದ ರೀತಿ ಕಾರ್ಯ ನಿರ್ವಹಿಸುತ್ತಿದೆ. ಬೆಳಗ್ಗೆ ಐದು ಗಂಟೆಗೆ ಆರಂಭವಾಗುವ ಈ ಪ್ರದೇಶ ಸಮಾಚಾರದಿಂದ ಎಲ್ಲರಿಗೂ ಬೆಳಕು ಆಗುತ್ತಿತ್ತು. ಇದೀಗ ಆ ಘಟಕವನ್ನು ಮುಚ್ಚುವ ಆದೇಶ ಜನರಿಗೆ ಕತ್ತಲು ಆವರಿಸಿದಂತಾಗಿದೆ.

AIR branch of Dharwad station set to be closed, Public expressed outrage against Govt

ಬೆಂಗಳೂರಿಗೆ ಸ್ಥಳಾಂತರಿಸಲು ಸಿದ್ಧತೆ

ಬೆಂಗಳೂರಿಗೆ ಸ್ಥಳಾಂತರಿಸಲು ಉದ್ದೇಶಿಸಿರುವ ಧಾರವಾಡ ಎಐಆರ್ ಪ್ರಾದೇಶಿಕ ವಾರ್ತಾ ಕೇಂದ್ರವನ್ನು ಮುಚ್ಚುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ನಿಲುವಿಗೆ ಉತ್ತರ ಕರ್ನಾಟಕದಾದ್ಯಂತ ಆಕ್ರೋಶಗಳು ಭುಗಿಲೆದ್ದಿವೆ. ಧಾರವಾಡಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಈ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಧಾರವಾಡದಲ್ಲಿ ಪ್ರಾದೇಶಿಕ ವಾರ್ತಾ ಘಟಕ 1983ರಲ್ಲಿ ಕಾರ್ಯಾರಂಭ ಮಾಡಿದ್ದು, ಉತ್ತರ ಕರ್ನಾಟಕದಾದ್ಯಂತ ಸುದ್ದಿ ಪ್ರಸಾರಕ್ಕೆ ಇದು ಪ್ರಖ್ಯಾತಿ ಆಗಿದೆ. ಧಾರವಾಡ ಎಐಆರ್‌ ನಿಲ್ದಾಣವು ತನ್ನ ಹಲವಾರು ವಿಶಿಷ್ಟ ಕಾರ್ಯಕ್ರಮಗಳಿಂದಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ. ಇದು ಅಂತಾರಾಷ್ಟ್ರೀಯ ಐಕಾನ್‌ಗಳಾಗಿ ಹೊರಹೊಮ್ಮಿದ ಅನೇಕ ಉದಯೋನ್ಮುಖ ಕಲಾವಿದರಿಗೆ ಲಾಂಚ್‌ಪ್ಯಾಡ್‌ನಂತೆ ಕಾರ್ಯ ನಿರ್ವಹಿಸಿದೆ.

AIR branch of Dharwad station set to be closed, Public expressed outrage against Govt

ಧಾರವಾಡ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಬದಲು, ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದು ಹಿರಿಯ ಸಾಹಿತಿಗಳು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಕರ್ನಾಟಕದ ಎಲ್ಲಾ ಸಂಸದರಿಗೆ ಪತ್ರ ಬರೆಯುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಧಾರವಾಡದ ನಿಲ್ದಾಣವು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಪ್ರಧಾನ ಮಂತ್ರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ನವೆಂಬರ್ 1ರೊಳಗೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಎಚ್ಚರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+