ತೋರಣಗಟ್ಟೆ: ವೇದ ಸಿನಿಮಾದ ಜುಂಜಪ್ಪ ಹಾಡು ಹೇಳುತ್ತಾ ಮಕ್ಕಳ ಜೊತೆ ಹೆಜ್ಜೆ ಹಾಕಿದ ಸಿಂಗರ್ ಮೋಹನ್ ಕುಮಾರ್
ಜಗಳೂರು, ಸೆಪ್ಟೆಂಬರ್, 09: ನಟ ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರದಲ್ಲಿ ಜುಂಜಪ್ಪ ಹಾಡು ಹಾಡಿದ ಶಿರಾ ತಾಲೂಕಿನಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯದ ಪ್ರತಿಭೆ ಮೋಹನ್ ಕುಮಾರ್ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು, ಜುಂಜಪ್ಪ ಹಾಡು ಹೇಳುತ್ತಾ ಮಕ್ಕಳ ಜೊತೆಗೆ ವೇದಿಕೆ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದರು.
ಶಿವರಾಜ್ಕುಮಾರ್ ನಟನೆಯ ವೇದ ಸಿನಿಮಾದಲ್ಲಿನ ಜುಂಜಪ್ಪ ಹಾಡು ಬರೀ ರಾಜ್ಯ ಅಲ್ಲದೆ ದೇಶದೆಲ್ಲೆಡೆ ಸದ್ದು ಮಾಡಿತ್ತು. ಅಲ್ಲದೆ ತಾವು ಹಾಡಿದ ಜುಂಜಪ್ಪ ಹಾಡಿಗೆ ಶಿವರಾಜ್ಕುಮಾರ್ ಜೊತೆ ಬುಡಕಟ್ಟು ಸಮುದಾಯದ ಮೋಹನ್ ಕುಮಾರ್ ಹೆಜ್ಜೆ ಕೂಡ ಹಾಕಿದ್ದಾರೆ. ಆಗಿನಿಂದ ಮೋಹನ್ ಕುಮಾರ್ ಅವರನ್ನು ಜೀ ಕನ್ನಡ ಸೇರಿದಂತೆ ಹಲವು ಸುದ್ದಿ ವಾಹಿನಿಗಳು ಸಂದರ್ಶನಕ್ಕೆ ಆಹ್ವಾನಿಸುತ್ತಲೇ ಇವೆ.

ಅದೇ ರೀತಿ ನಿನ್ನೆ (ಸೆಪ್ಟೆಂಬರ್ 08) ಪವಾಡ ಪುರುಷ ಶ್ರೀ ಮೆಲ್ಲೇಶ್ವರ ಹಾಗೂ ಶ್ರೀ ಕಾಟಲಿಂಗೇಶ್ವರ ಬಳಗದವರು ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೋರಣಗಟ್ಟೆಗೆ ಮೋಹನ್ ಕುಮಾರ್ ಅವರನ್ನು ಭರ್ಜರಿ ಸ್ವಾಗತದೊಂದಿದೆ ಬರಮಾಡಿಕೊಳ್ಳಲಾಯಿತು.
ನಂತರ ಮಾತನಾಡಿದ ಮೋಹನ್ ಕುಮಾರ್ ಅವರು, ತೋರಣಗಟ್ಟೆ ಗ್ರಾಮದಲ್ಲಿ ಜಾನಪದ ಕಲೆಗೆ ಬಡತನವಿಲ್ಲ. ಆದರೆ ಮಕ್ಕಳು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ಅವರಿಗೆ ಪ್ರಮುಖವಾಗಿ ಪ್ರೋತ್ಸಾಹ ಬೇಕಿದೆ ಅಷ್ಟೇ. ಸಾಮಾನ್ಯವಾಗಿ ಪ್ರತಿಭೆಗಳ ಕಾಲು ಎಳೆಯುವವರು ಇದ್ದೇ ಇರುತ್ತಾರೆ. ಆಗಂತ ಸುಮ್ಮನೆ ಕುಳಿತುಕೊಳ್ಳಬಾರದು. ಯಾವುದೇ ಅಡೆತಡೆಗಳು ಬಂದರೂ ನಮ್ಮ ಒಳ್ಳೆಯದ್ದಕ್ಕೆ ಆಗಿರುತ್ತದೆ ಎನ್ನುವ ಮೌಲ್ಯಯುತವಾದ ಸಂದೇಶವನ್ನು ಸಾರಿದರು.
ನಾವು ಹಳ್ಳಿಗರು, ಬುಡಕಟ್ಟು ಸಮುದಾಯದವರು ಅಂತಾ ಹೀಯಾಳಿಸುವವರು ಇದ್ದೇ ಇರುತ್ತಾರೆ. ಅವುಗಳಿಗೆಲ್ಲ ಬೆಲೆ ಕೊಡದೇ ನಮ್ಮಲ್ಲಿನ ಕಲೆಗೆ ಬೆಲೆ ಕೊಟ್ಟು ಮುಂದೆ ಸಾಗುವುದೇ ಪ್ರತಿಭಾವಂತರ ಲಕ್ಷಣ ಎಂದು ಕಿವಿಮಾತು ಹೇಳಿದರು.
-
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
‘ಲವ್ ಮಾಕ್ಟೇಲ್ 3’ ಕಥೆ ವಿವಾದ ಸುಖಾಂತ್ಯ: ಫಿಲ್ಮ್ ಚೇಂಬರ್ ಸಭೆಯಲ್ಲಿ ಡಾರ್ಲಿಂಗ್ ಕೃಷ್ಣ-ಗುರು ದೇಶಪಾಂಡೆ ಸಂಧಾನ ಯಶಸ್ವಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications