ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆ ಈ ರೀತಿ ಆಗಬೇಕು ಎಂದ ಶಾಸಕ ರಮೇಶ್ ಕುಮಾರ್
ದಾವಣಗೆರೆ, ಮೇ 15: ಕಾಂಗ್ರೆಸ್ ಒಂದೊಂದೇ ರಾಜ್ಯ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಹೇಗೆ ಎಂಬ ಬಗ್ಗೆ ಮಾಜಿ ಸಚಿವ, ಶಾಸಕ ರಮೇಶ್ ಕುಮಾರ್ ಸ್ವಪಕ್ಷದವರಿಗೆ ಪಾಠ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆ ಯಾವ ರೀತಿಯಲ್ಲಿ ಆಗಬೇಕೆಂಬ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪಂಜಾಬ್ ರಾಜ್ಯದ ಉದಾಹರಣೆ ಇಟ್ಟುಕೊಂಡು ಸಂಘಟನೆ ಪಾಠ ಮಾಡಿದ ರಮೇಶ್ ಕುಮಾರ್, ಕಾಂಗ್ರೆಸ್ಗೆ ಟಾನಿಕ್ ಕೊಟ್ಟರೆ ಶಕ್ತಿ ಬರುತ್ತಾ? ಕಾರ್ಯಕ್ರಮಗಳು, ಆಡೋ ಭಾಷೆ, ಜನರ ಮಧ್ಯ ಇರಬೇಕು ಜನರಿಂದ ದೂರ ಆಗಿ ಕಾಂಗ್ರೆಸ್ನ ಕಟ್ಟಬೇಕು ಅಂದ್ರೆ ಹೇಗೆ? ಎಂದು ಪ್ರಶ್ನಿಸಿದರು.
''ಜನ ಏನು ಬದಲಾಗಿಲ್ಲ. ಜನ ಹಾಗೆ ಇದ್ದಾರೆ. ಮೊಬೈಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಸಿಎಂರನ್ನೇ ಸೋಲಿಸಿದ. ಪ್ರಜಾಪ್ರಭುತ್ವದಲ್ಲಿ ಜನರ ಶಕ್ತಿ, ಪ್ರಾಮುಖ್ಯತೆ ಏನು ಎಂಬ ತಿಳಿದುಕೊಳ್ಳುವ ಮೂಲಕ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜೊತೆಗೆ ನಾವು ಪಾಠ ಕಲಿಬೇಕು. ನಮ್ಮಲ್ಲಿ ನಮ್ರತೆ ಬರಬೇಕು, ಅಹಂಕಾರ ಹೋಗಬೇಕು. ಜನರನ್ನು ಪ್ರೀತಿ ಮಾಡೋದು ಜನರನ್ನು ಒಲಿಸಿಕೊಳ್ಳೋ ಕೆಲಸ ಮಾಡಬೇಕು. ಅದಕ್ಕೆ ಒಳ್ಳೆಯ ಕಾರ್ಯಕ್ರಮ ರೂಪುಗೊಳ್ಳಬೇಕು,'' ಎಂದು ಸಲಹೆ ನೀಡಿದರು.

''ರಾಜ್ಯದಲ್ಲಿ ಎಲ್ಲಿ ಹನುಮ ಜಯಂತಿ ಆದರೂ ಕೂಡ ಎಲ್ಲೆಲ್ಲೂ ಕೇಸರಿ ಬಾವುಟ ಕಾಣುತ್ತಿವೆ. ಡಿಸೇಲ್ ಬೆಲೆ ನೂರು ರೂಪಾಯಿ ಆಗಿದೆ. ಬಿಜೆಪಿ ಪಕ್ಷ ಮಾತ್ರ ಕೇಸರಿ ಆಗಿದೆ. ಮೂರು ಪಕ್ಷದವರ ಖಾಸಗಿ ಶಾಲೆ, ಆಸ್ಪತ್ರೆಗಳಿವೆ. ಎಲ್ಲಾ ಖಾಸಗೀಕರಣ, ಕೇಸರೀಕರಣ ಆಗ್ತಾ ಇದೆ,'' ಎಂದು ಅಭಿಪ್ರಾಯಪಟ್ಟರು.
Recommended Video
''ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ಗೊತ್ತಿರುವ ವಿಚಾರ. ನಮ್ಮ ಮನಸ್ಸಿಗೆ, ನಮಗೆ ಲಜ್ಜೆ ಇರಬೇಕು. ಕನ್ನಡಿ ಮುಂದೆ ನಿಂತರೆ ನಮ್ಮ ಮುಖ ಸುಂದರವಾಗಿ ಕಾಣಬೇಕು. ನಮ್ಮ ಮುಖ ನಮಗೆ ಅಸಹ್ಯವಾಗಿ ಕಾಣಬಾರದು. ಇದು ಎಲ್ಲರಿಗೂ ಅನ್ವಯಿಸುತ್ತೆ. ನಾವು ಲಜ್ಜೆ ಬಿಟ್ಟಿದ್ದೀವಿ. ಎಲ್ಲರಿಗಿಂತ ನಮ್ಮ ಮುಖ ಸುಂದರವಾಗಿದೆ ಅಂದ್ರೆ ಏನು ಮಾಡೋಕೆ ಆಗುತ್ತೆ,'' ಎಂದು ಕಿಡಿಕಾರಿದರು.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications